Select Your Language

Notifications

webdunia
webdunia
webdunia
webdunia

ಕುಲಭೂಷಣ್ ಎಲ್ಲಿದ್ದಾರೆಂದೇ ಪಾಕ್ ಮಾಹಿತಿ ನೀಡಿಲ್ಲ: ಭಾರತ

ಕುಲಭೂಷಣ್ ಎಲ್ಲಿದ್ದಾರೆಂದೇ ಪಾಕ್ ಮಾಹಿತಿ ನೀಡಿಲ್ಲ: ಭಾರತ
NewDelhi , ಶನಿವಾರ, 20 ಮೇ 2017 (09:58 IST)
ನವದೆಹಲಿ: ಐಸಿಜೆ ತೀರ್ಪಿನಿಂದಾಗಿ ಪಾಕಿಸ್ತಾನದ ಗಲ್ಲು ಶಿಕ್ಷೆಯಿಂದ ಪಾರಾದ ಭಾರತದ ಮಾಜಿ ನೌಕಾ ಪಡೆ ಅಧಿಕಾರಿ ಕುಲಭೂಷಣ್ ಜಾದವ್ ಎಲ್ಲಿದ್ದಾರೆಂಬ ಬಗ್ಗೆ ಮಾಹಿತಿಯಿಲ್ಲ ಎಂದು ಭಾರತ ಹೇಳಿದೆ.

 
‘ಕುಲಭೂಷಣ್ ಜಾದವ್ ರು ಎಲ್ಲಿದ್ದಾರೆಂಬ ಬಗ್ಗೆ ಭಾರತಕ್ಕೆ ಪಾಕ್ ಇದುವರೆಗೆ ಮಾಹಿತಿ ನೀಡಿಲ್ಲ. ಹಾಗಾಗಿ ಆತಂಕವಿದೆ’ ಎಂದು ಭಾರತೀಯ ಅಧಿಕಾರಿಗಳು ಹೇಳಿದ್ದಾರೆ. ದೇಶದ್ರೋಹಿ ಚಟುವಟಿಕೆ ಮಾಡಿದ್ದಾರೆಂದು ಆರೋಪಿಸಿ ಪಾಕ್ ಸೇನಾ ನ್ಯಾಯಾಲಯ ಜಾದವ್ ಗೆ ಗಲ್ಲು ಶಿಕ್ಷೆ ವಿಧಿಸಿತ್ತು.

ಇದನ್ನು ಪ್ರಶ್ನಿಸಿ ಭಾರತ ಅಂತಾರಾಷ್ಟ್ರೀಯ ನ್ಯಾಯಾಲಯ ಐಸಿಜೆಯಲ್ಲಿ ದೂರು ದಾಖಲಿಸಿತ್ತು. ವಿಚಾರಣೆ ನಡೆಸಿದ ಐಸಿಜೆ ಗಲ್ಲು ಶಿಕ್ಷೆಗೆ ತಡೆಯಾಜ್ಞೆ ನೀಡಿತ್ತು. ಇದು ಪಾಕಿಸ್ತಾನವನ್ನು ಮತ್ತಷ್ಟು ರೊಚ್ಚಿಗೆಬ್ಬಿಸಿತ್ತು.

‘ಇದುವರೆಗೆ ಪಾಕ್ ಕುಲಭೂಷಣ್ ಸ್ಥಿತಿ ಗತಿ ಬಗ್ಗೆ ಮಾಹಿತಿ ನೀಡಿಲ್ಲ. ಅವರು ಎಲ್ಲಿ ಬಂಧನದಲ್ಲಿರಿಸಿದ್ದಾರೆಂದೂ ಹೇಳಿಲ್ಲ. ಇದು ನಮ್ಮ ಆತಂಕಕ್ಕೆ ಕಾರಣವಾಗಿದೆ’ ಎಂದು ವಿದೇಶಾಂಗ ಇಲಾಖೆಯ ಅಧಿಕಾರಿಗಳು ಹೇಳಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

Share this Story:

Follow Webdunia kannada

ಮುಂದಿನ ಸುದ್ದಿ

ರಾಜಕೀಯ ಪಕ್ಷಗಳ ಚಾಲೆಂಜ್ ಗೆ ಇಂದು ಚುನಾವಣಾ ಆಯೋಗದಿಂದ ದಿನ ನಿಗದಿ