Webdunia - Bharat's app for daily news and videos

Install App

ಪಾಕ್ ಕಲಾವಿದರನ್ನು ಬೂಟಿನಿಂದ ಹೊಡೆಯಬೇಕು: ಬಿಜೆಪಿ

Webdunia
ಸೋಮವಾರ, 26 ಸೆಪ್ಟಂಬರ್ 2016 (20:14 IST)
ಭಾರತದಲ್ಲಿ ಕಾರ್ಯನಿರ್ವಹಿಸುತ್ತಿರುವ ಪಾಕಿಸ್ತಾನದ ಕಲಾವಿದರು ತಮ್ಮ ದೇಶಕ್ಕೆ ಮರಳುವಂತೆ ಮಹಾರಾಷ್ಟ್ರ ನವ ನಿರ್ಮಾಣ ಸೇನೆ ಮುಖ್ಯಸ್ಥ ರಾಜ್ ಠಾಕ್ರೆ ಕರೆ ನೀಡಿದ ಮಾರನೇ ದಿನವೇ ಬಿಜೆಪಿ ಶಾಸಕ ಸಂಗೀತ್ ಸೋಮ್, ಪಾಕ್ ಕಲಾವಿದರನ್ನು ಶೂ ತೆಗೆದುಕೊಂಡು ಹೊಡಿಯಬೇಕು ಎಂದು ಕರೆ ನೀಡಿದ್ದಾರೆ.
 
ಉತ್ತರ ಕಾಶ್ಮಿರದ ಉರಿ ಸೇನಾಕಚೇರಿಯ ಮೇಲೆ ಪಾಕ್ ಉಗ್ರರು ನಡೆಸಿದ ದಾಳಿಯಲ್ಲಿ 19 ಸೈನಿಕರು ಹುತಾತ್ಮರಾಗಿದ್ದರೂ ಘಟನೆಯನ್ನು ಖಂಡಿಸದ ಪಾಕ್ ಕಲಾವಿದರಿಗೆ ಭಾರತದಲ್ಲಿ ಕಾರ್ಯನಿರ್ವಹಿಸಲು ಯಾವುದೇ ಅವಕಾಶವಿಲ್ಲ ಎಂದು ಗುಡುಗಿದ್ದಾರೆ.    
 
ಪಾಕಿಸ್ತಾನದ ಕೆಲ ಕಲಾವಿದರು ಭಾರತದಲ್ಲಿ ಕೋಟಿ ಕೋಟಿ ರೂಪಾಯಿ ಗಳಿಕೆ ಮಾಡುತ್ತಿದ್ದಾರೆ. ಹಣ ಹೆಸರು ಗಳಿಸಲು ಭಾರತ ಬೇಕಾಗಿದೆ. ಆದರೆ, ಭಾರತದ ಮೇಲೆ ಪಾಕ್ ದಾಳಿ ನಡೆಸಿದರೂ ಅದರ ಬಗ್ಗೆ ಚಕಾರವೆತ್ತದ ಕಲಾವಿದರು ಗದ್ದಾರ್‌ಗಳು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
 
ನಾವು ಭಾರತದ ಅನ್ನವನ್ನು ತಿನ್ನುತ್ತಿದ್ದೇವೆ. ಗಳಿಕೆ ಮಾಡುತ್ತಿದ್ದೇವೆ. ಆದ್ದರಿಂದ ಇಂತಹ ಘಟನೆಗಳು ಮರುಕಳಿಸಬಾರದು ಎನ್ನುವ ಸ್ಪಷ್ಟ ಸಂದೇಶವನ್ನು ಪಾಕ್ ಕಲಾವಿದರು ಪಾಕಿಸ್ತಾನಕ್ಕೆ ರವಾನಿಸಬೇಕಾಗಿದೆ ಎಂದು ಸಲಹೆ ನೀಡಿದರು.
 
ಇಂತದ ಪಾಕ್ ಕಲಾವಿದರನ್ನು ಬೂಟಿನಿಂದ ಹೊಡೆದು ದೇಶಕ್ಕೆ ಹೊರಗೆ ಹಾಕಬೇಕು. ಪ್ರಾಣಿಗಳು ಕೂಡಾ ಅನ್ನವನ್ನು ತಿಂದ ಮನೆಯ ಋಣ ತೀರಿಸುತ್ತವೆ. ಪಾಕಿಸ್ತಾನಿ ಕಲಾವಿದರು ನಮ್ಮಲ್ಲಿ ತಿಂದು ನಮ್ಮ ಬೆನ್ನ ಹಿಂದೆ ಚಾಕು ಹಾಕುತ್ತಿವೆ. ಪಾಕಿಸ್ತಾನಕ್ಕೆ ಭಾರತ ಸೇನೆ ತಕ್ಕ ಪಾಠ ಕಲಿಸಲಿದೆ ಎಂದು ತಿಳಿಸಿದ್ದಾರೆ.
 
ಪಾಕಿಸ್ತಾನಿ ನಟ ಫವಾದ್ ಖಾನ್ ಏ ದಿಲ್ ಹೈ ಮುಷ್ಕಿಲ್ ಚಿತ್ರದಲ್ಲಿ ನಟಿಸುತ್ತಿದ್ದರೆ, ಪಾಕ್ ನಟಿ ಮಹೀರಾ ಖಾನ್ ಶಾರುಕ್ ಖಾನ್ ನಟನೆಯ ರಯೀಸ್ ಚಿತ್ರದಲ್ಲಿ ನಟಿಸುತ್ತಿದ್ದಾರೆ.   

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಪಿಲಿಕುಳ ಜೈವಿಕ ಉದ್ಯಾನವನದಲ್ಲಿ 6 ಪ್ರಾಣಿಗಳು ಸಾವು, ಪ್ರಾಣಿ ಪ್ರಿಯರಲ್ಲಿ ಆತಂಕ

ಮದುವೆಯಾಗುವುದಾಗಿ ಗರ್ಭಿಣಿ ಮಾಡಿ ವಂಚನೆ: ಮಗನ ಪರಾರಿಗೆ ಸಹಾಯ ಮಾಡಿದ ಬಿಜೆಪಿ ಮುಖಂಡ ಅರೆಸ್ಟ್‌

90ನೇ ಹುಟ್ಟುಹಬ್ಬದ ಸಂಭ್ರಮದಲ್ಲಿ ದಲೈ ಲಾಮಾ: 130 ವರ್ಷಗಳ ಕಾಲ ಬದುಕುವ ವಿಶ್ವಾಸ

ಮರಾಠಿ ಮಾತನಾಡಲ್ಲ ಎಂದ ಉದ್ಯಮಿ ಕಚೇರಿ ಮೇಲೆ ಕಲ್ಲೆಸೆದ ಎಂಎನ್‌ಎಸ್ ಕಾರ್ಯಕರ್ತರು

ಅರಣ್ಯ ಇಲಾಖೆಯ‌ಲ್ಲಿ ಉದ್ಯೋಗಾಂಕ್ಷಿಗಳಿಗೆ ಭರ್ಜರಿ ಗುಡ್‌ನ್ಯೂಸ್‌, 6000ಹುದ್ದೆಗಳು ಶೀಘ್ರದಲ್ಲೇ ಭರ್ತಿ

ಮುಂದಿನ ಸುದ್ದಿ
Show comments