Webdunia - Bharat's app for daily news and videos

Install App

ಅಂದು ಕೊಲೆಗಾರ, ಇಂದು ಸಿಇಒ: ಯುವ ಮನಪರಿವರ್ತನೆಯೇ ಈತನ ಗುರಿ

Webdunia
ಸೋಮವಾರ, 26 ಡಿಸೆಂಬರ್ 2016 (15:09 IST)
ವ್ಯಕ್ತಿಯೊಬ್ಬನನ್ನು ಕೊಂದು ಬರೊಬ್ಬರಿ 16 ವರ್ಷಗಳ ಕಾಲ ಜೈಲುವಾಸ ಅನುಭವಿಸಿದ ವ್ಯಕ್ತಿಯೊಬ್ಬ ಪ್ರತಿಷ್ಠಿತ ಸಂಸ್ಥೆಯೊಂದರ ಸಿಇಒ ಆಗಿ ಬೆಳೆದ ಪ್ರೇರಣಾದಾಯಕ ಕಥೆ ಇದು. 

 
ಜಾನ್ ವಾಲ್‌ವೆರ್ಡೆ ತನ್ನ ಗೆಳತಿಯ ಮೇಲೆ ಅತ್ಯಾಚಾರಗೈದವನನ್ನು ಕೊಂದು 16 ವರ್ಷ ಶಿಕ್ಷೆಗೊಳಗಾಗಿದ್ದ. ಜೈಲಿನಲ್ಲಿದ್ದ ಆತ ತಾನು ಮಾಡಿದ ತಪ್ಪಿಗಾಗಿ ಕೊರಗುತ್ತ ಸಮಯ ಕಳೆಯಲಿಲ್ಲ.ಆಚೆ ಬಂದ ಮೇಲೆ ತಾನು ತಲೆ ಎತ್ತಿ ಬದುಕಲು ಏನು ಮಾಡಬೇಕೋ ಎಲ್ಲವನ್ನು ಮಾಡಿದ.
 
ಜೈಲಿನಲ್ಲಿದ್ದುಕೊಂಡೇ ಎರಡು ಕಾಲೇಜು ಪದವಿ ಪಡೆದ ಜಾನ್ ಹೆಚ್‌ಐವಿ ಆಪ್ತಸಮಾಲೋಚಕನಾಗಿ ಕೆಲಸ ಮಾಡಿದ. ತನ್ನ ಸಹಕೈದಿಗಳಿಗೆ ಅಕ್ಷರಜ್ಞಾನ ಕಲಿಸಿದ. ಮತ್ತೀಗ ಆತ ಕಷ್ಟದಲ್ಲಿರುವ ಯುವ ಜನರಿಗೆ ಸಹಾಯಮಾಡುವ ಉದ್ದೇಶದಿಂದ ರೂಪುಗೊಂಡಿರುವ ಸಂಸ್ಥೆಯೊಂದರ ಸಿಇಒ ಆಗುತ್ತಿದ್ದಾನೆ. 
 
ಈ ಸಂಸ್ಥೆ ಆರ್ಥಿಕ ದುಃಸ್ಥಿತಿಯಲ್ಲಿರುವ, ಅಪರಾಧದ ಹಾದಿ ತುಳಿದಿರುವ ಯುವಜನರ ಶ್ರೇಯೋಭಿವೃದ್ಧಿಗೆ ಜಾಗತಿಕ ಮಟ್ಟದಲ್ಲಿ ಕಾರ್ಯ ನಿರ್ವಹಿಸಲಿದೆ.
 
ಈ ಕುರಿತು ಪ್ರತಿಕ್ರಿಯಿಸುವ ಜಾನ್, ಅವರು ನನ್ನಂತಹ ಹಾದಿಯನ್ನು ತುಳಿದಿರಬಹುದು. ಇಂತವರು ಕಲ್ಪಿಸಲಾಗದಂತಹ ಸಾಧನೆಯನ್ನು ಮಾಡಬಹುದೆಂಬುದನ್ನು ಸಾಧಿಸುವುದು ನನ್ನ ಗುರಿ ಎನ್ನುತ್ತಾನೆ ಜಾನ್.
 
1991ರಲ್ಲಿ ಜಾನ್ 20 ವರ್ಷದವನಿದ್ದಾಗ ಆತನ ಪ್ರೇಯಸಿ ಪೋಟೋಗ್ರಾಫರ್‌ ಜೊಯಲ್ ಎಂಬಾತ ತನ್ನ ಮೇಲೆ ಅತ್ಯಾಚಾರವೆಸಗಿದ್ದಾಗಿ ದೂರಿದ್ದಳು. ಜೊಯಲ್ ಮತ್ತೆರಡು ಅತ್ಯಾಚಾರ ಪ್ರಕರಣಗಳ ಆರೋಪವನ್ನು ಕೂಡ ಹೊತ್ತಿದ್ದ. ಕೋಪದ ಭರದಲ್ಲಿ ಜಾನ್ ಆತನನ್ನು ಗುಂಡಿಟ್ಟು ಕೊಂದಿದ್ದ. ಈ ಕೃತ್ಯಕ್ಕಾಗಿ ಆತನಿಗೆ 16 ವರ್ಷ ಜೈಲು ಶಿಕ್ಷೆಯಾಗಿತ್ತು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments