Webdunia - Bharat's app for daily news and videos

Install App

ಅಂದು ಕೊಲೆಗಾರ, ಇಂದು ಸಿಇಒ: ಯುವ ಮನಪರಿವರ್ತನೆಯೇ ಈತನ ಗುರಿ

Webdunia
ಸೋಮವಾರ, 26 ಡಿಸೆಂಬರ್ 2016 (15:09 IST)
ವ್ಯಕ್ತಿಯೊಬ್ಬನನ್ನು ಕೊಂದು ಬರೊಬ್ಬರಿ 16 ವರ್ಷಗಳ ಕಾಲ ಜೈಲುವಾಸ ಅನುಭವಿಸಿದ ವ್ಯಕ್ತಿಯೊಬ್ಬ ಪ್ರತಿಷ್ಠಿತ ಸಂಸ್ಥೆಯೊಂದರ ಸಿಇಒ ಆಗಿ ಬೆಳೆದ ಪ್ರೇರಣಾದಾಯಕ ಕಥೆ ಇದು. 

 
ಜಾನ್ ವಾಲ್‌ವೆರ್ಡೆ ತನ್ನ ಗೆಳತಿಯ ಮೇಲೆ ಅತ್ಯಾಚಾರಗೈದವನನ್ನು ಕೊಂದು 16 ವರ್ಷ ಶಿಕ್ಷೆಗೊಳಗಾಗಿದ್ದ. ಜೈಲಿನಲ್ಲಿದ್ದ ಆತ ತಾನು ಮಾಡಿದ ತಪ್ಪಿಗಾಗಿ ಕೊರಗುತ್ತ ಸಮಯ ಕಳೆಯಲಿಲ್ಲ.ಆಚೆ ಬಂದ ಮೇಲೆ ತಾನು ತಲೆ ಎತ್ತಿ ಬದುಕಲು ಏನು ಮಾಡಬೇಕೋ ಎಲ್ಲವನ್ನು ಮಾಡಿದ.
 
ಜೈಲಿನಲ್ಲಿದ್ದುಕೊಂಡೇ ಎರಡು ಕಾಲೇಜು ಪದವಿ ಪಡೆದ ಜಾನ್ ಹೆಚ್‌ಐವಿ ಆಪ್ತಸಮಾಲೋಚಕನಾಗಿ ಕೆಲಸ ಮಾಡಿದ. ತನ್ನ ಸಹಕೈದಿಗಳಿಗೆ ಅಕ್ಷರಜ್ಞಾನ ಕಲಿಸಿದ. ಮತ್ತೀಗ ಆತ ಕಷ್ಟದಲ್ಲಿರುವ ಯುವ ಜನರಿಗೆ ಸಹಾಯಮಾಡುವ ಉದ್ದೇಶದಿಂದ ರೂಪುಗೊಂಡಿರುವ ಸಂಸ್ಥೆಯೊಂದರ ಸಿಇಒ ಆಗುತ್ತಿದ್ದಾನೆ. 
 
ಈ ಸಂಸ್ಥೆ ಆರ್ಥಿಕ ದುಃಸ್ಥಿತಿಯಲ್ಲಿರುವ, ಅಪರಾಧದ ಹಾದಿ ತುಳಿದಿರುವ ಯುವಜನರ ಶ್ರೇಯೋಭಿವೃದ್ಧಿಗೆ ಜಾಗತಿಕ ಮಟ್ಟದಲ್ಲಿ ಕಾರ್ಯ ನಿರ್ವಹಿಸಲಿದೆ.
 
ಈ ಕುರಿತು ಪ್ರತಿಕ್ರಿಯಿಸುವ ಜಾನ್, ಅವರು ನನ್ನಂತಹ ಹಾದಿಯನ್ನು ತುಳಿದಿರಬಹುದು. ಇಂತವರು ಕಲ್ಪಿಸಲಾಗದಂತಹ ಸಾಧನೆಯನ್ನು ಮಾಡಬಹುದೆಂಬುದನ್ನು ಸಾಧಿಸುವುದು ನನ್ನ ಗುರಿ ಎನ್ನುತ್ತಾನೆ ಜಾನ್.
 
1991ರಲ್ಲಿ ಜಾನ್ 20 ವರ್ಷದವನಿದ್ದಾಗ ಆತನ ಪ್ರೇಯಸಿ ಪೋಟೋಗ್ರಾಫರ್‌ ಜೊಯಲ್ ಎಂಬಾತ ತನ್ನ ಮೇಲೆ ಅತ್ಯಾಚಾರವೆಸಗಿದ್ದಾಗಿ ದೂರಿದ್ದಳು. ಜೊಯಲ್ ಮತ್ತೆರಡು ಅತ್ಯಾಚಾರ ಪ್ರಕರಣಗಳ ಆರೋಪವನ್ನು ಕೂಡ ಹೊತ್ತಿದ್ದ. ಕೋಪದ ಭರದಲ್ಲಿ ಜಾನ್ ಆತನನ್ನು ಗುಂಡಿಟ್ಟು ಕೊಂದಿದ್ದ. ಈ ಕೃತ್ಯಕ್ಕಾಗಿ ಆತನಿಗೆ 16 ವರ್ಷ ಜೈಲು ಶಿಕ್ಷೆಯಾಗಿತ್ತು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಕಾಶ್ಮೀರದಲ್ಲಿ ಮುಂದುವರಿದ ಉಗ್ರರ ಬೇಟೆ: ಎರಡು ದಿನಗಳಲ್ಲಿ ಆರು ಭಯೋತ್ಪಾದಕರ ಉಡೀಸ್‌

Rajnath Singh: ಆಪರೇಷನ್ ಸಿಂಧೂರ್ ಎಂದು ಹೆಸರಿಟ್ಟಿದ್ದು ಯಾರೆಂದು ಬಹಿರಂಗಪಡಿಸಿದ ರಾಜನಾಥ್ ಸಿಂಗ್

ಕುಕ್ಕೆ ಸುಬ್ರಹ್ಮಣ್ಯಕ್ಕೆ ರೌಡಿ ಶೀಟರ್ ಅಧ್ಯಕ್ಷ: ಯಾಕೆ ಆಗಬಾರದು ಎಂದ ಸಚಿವ ದಿನೇಶ್ ಗುಂಡೂರಾವ್

ನಮ್ಮ ಸಹಾಯ ಪಡೆದು ನಮಗೇ ದ್ರೋಹ ಬಗೆಯುತ್ತೀರಾ: ಟರ್ಕಿ, ಚೀನಾಗೆ ಭಾರತ ತಕ್ಕ ಪಾಠ

Gold Price today: ಚಿನ್ನ ಖರೀದಿದಾರರಿಗೆ ಇಂದು ಸ್ವಲ್ಪ ಸಿಹಿ ಸ್ವಲ್ಪ ಕಹಿ

ಮುಂದಿನ ಸುದ್ದಿ
Show comments