Webdunia - Bharat's app for daily news and videos

Install App

ವೈದ್ಯರನ್ನ ಕಿಡ್ನ್ಯಾಪ್ ಮಾಡಿ 5 ಕೋಟಿ ಬೇಡಿಕೆ ಇಟ್ಟಿದ್ದ ಓಲಾ ಡ್ರೈವರ್..!

Webdunia
ಗುರುವಾರ, 20 ಜುಲೈ 2017 (14:54 IST)
ಓಲಾ ಕ್ಯಾಬ್ ಡ್ರೈವರೊಬ್ಬ ವೈದ್ಯನನ್ನ ಕಿಡ್ನ್ಯಾಪ್ ಮಾಡಿ 14 ದಿನಗಳ ಕಾಲ ಒತ್ತೆಯಾಳಾಗಿರಿಸಿಕೊಂಡು 5 ಕೋಟಿ ರೂಪಾಯಿ ಸುಲಿಗೆಗೆ ಯತ್ನಿಸಿರುವ ಘಟನೆ ನವದೆಹಲಿಯಲ್ಲಿ ಬೆಳಕಿಗೆ ಬಂದಿದೆ.
 

ಪೊಲೀಸರು ಹೆಳುವ ಪ್ರಕಾರ, ದಕ್ಷಿಣ ದೆಹಲಿಯಲ್ಲಿ ವೈದ್ಯನನ್ನ ಕಿಡ್ಯ್ನಾಪ್ ಮಾಡಲಾಗಿದ್ದು, 14 ದಿನಗಳ ಬಳಿಕ ಮೀರತ್`ನಲ್ಲಿ ರಕ್ಷಿಸಲಾಗಿದೆ. ಉತ್ತರ ಪ್ರದೇಶ ಮತ್ತು ದೆಹಲಿ ಪೊಲೀಸರ ಜಂಟಿ ಕಾರ್ಯಾಚರಣೆಯಲ್ಲಿ ವೈದ್ಯನನ್ನ ರಕ್ಷಿಸಲಾಗಿದೆ. ವೈದ್ಯನನ್ನ ಬಂಧಿಸಿದ್ದ ಗುಂಪು ಹರಿದ್ವಾರದಲ್ಲಿರುವ ಬಗ್ಗೆ ಮಾಹಿತಿ ಕಲೆಹಾಕಿದ ಪೊಲೀಸರು, ಬಂಧನಕ್ಕೆ ತೆರಳಿದಾಗ ಮತ್ತೆ ನಾಪತ್ತೆಯಾಗಿದ್ದರು. ಬಳಿಕ ಮೀರತ್ ಬಳಿಯ ಹಳ್ಳಿಯೊಂದರಲ್ಲಿ ಗುಂಡಿನ ಕಾರ್ಯಾಚರಣೆ ನಡೆಸಿ ಅಪಹರಣಕಾರರನ್ನ ಬಂಧಿಸಿದ್ದಾರೆ.

ಜುಲೈ 6ರಂದು ತೆಲಂಗಾಣ ಮೂಲದ ಡಾ. ಶ್ರೀಕಾಂತ್ ಗೌಡ ಆಸ್ಪತ್ರೆಯಿಂದ ಮನೆಗೆ ತೆರಳಲು ಓಲಾ ಕ್ಯಾಬ್ ಬುಕ್ ಮಾಡಿದ್ದರು. ಆದರೆ, ಕ್ಯಾಬ್ ಡ್ರೈವರ್ ಮನೆಗೆ ಕರೆದೊಯ್ಯುವ ಬದಲು ವೈದ್ಯನನ್ನ ನೋಯ್ಡಾ ಬಳಿಯ ದಾಂದ್ರಿಗೆ ಕರೆದೊಯ್ದಿದ್ದ. ಅಲ್ಲಿ ಕಾರು ಹತ್ತಿಕೊಂಡ ನಾಲ್ವರು ಆಗಂತುಕರು ಡ್ರೈವರ್ ಜೊತೆ ಸೇರಿ ವೈದ್ಯನನ್ನ ಕಿಡ್ನ್ಯಾಪ್ ಮಾಡಿದ್ದಾರೆ.


ಬಳಿಕ ಡ್ರೈವರ್ ಫೋನಿನಿಂದ ಓಲಾ ಕಾಲ್ ಸೆಂಟರ್`ಗೆ ಕರೆ ಮಾಡಿದ ಅಪಹರಣಕಾರರು 5 ಕೋಟಿ ರೂಪಾಯಿಗೆ ಬೇಡಿಕೆ ಇಟ್ಟಿದ್ದರು. ಬಳಿಕ ಖಾಸಗಿ ಆಸ್ಪತ್ರೆಯಿಂದ ಕರೆ ಮಾಡಿ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಬಳಿಕ ಆಸ್ಪತ್ರೆಗೆ ಡ್ರೈವರ್ ಮೊಬೈಲ್ ಮೂಲಕ ವಿಡಿಯೋ ಕಳುಹಿಸಿದ್ದರು.  13 ದಿನ ಅಪಹರಣಕಾರರು ಮೊಬೈಲ್ ಬಳಸಿರಲಿಲ್ಲ. ಅಪಹರಣಕಾರರು ಕಳುಹಿಸಿದ್ದ ವಿಡಿಯೋ ಜಾಡು ಹಿಡಿದ ಪೊಲೀಸರು ಕೊನೆಗೂ ಹೆಡೆಮುರಿ ಕಟ್ಟಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಮುಡಾ ಹಗರಣದಲ್ಲಿ ಸಿಎಂ ಪತ್ನಿಗೆ ರಿಲೀಫ್: ಇಡಿಗೆ ಸುಪ್ರೀಂಕೋರ್ಟ್ ಛೀಮಾರಿ

Arecanut Price: ಅಡಿಕೆ, ಕಾಳುಮೆಣಸು ಇಂದಿನ ಮಾರುಕಟ್ಟೆ ದರ ಹೇಗಿದೆ

Gold Price: ಚಿನ್ನದ ದರ ಇಂದು ಎಷ್ಟಾಗಿದೆ ನೋಡಿ

ಧರ್ಮಸ್ಥಳ ಮಂಜುನಾಥನಿಗೆ ಕೆಟ್ಟ ಹೆಸರು ತಂದ್ರೆ ಈ ಸರ್ಕಾರ ಸರ್ವನಾಶವಾಗುತ್ತದೆ: ಜನಾರ್ಧನ ರೆಡ್ಡಿ

ಕಂಪ್ಯೂಟರ್ ಮುಂದೆ ಕೆಲಸ ಮಾಡುವವರು ಡಾ ಭುಜಂಗ ಶೆಟ್ಟಿ ನೀಡಿದ್ದ ಈ ಸಲಹೆ ಗಮನಿಸಿ

ಮುಂದಿನ ಸುದ್ದಿ
Show comments