Webdunia - Bharat's app for daily news and videos

Install App

ಮತ್ತೀಗ ಹಸು, ಎಮ್ಮೆಗಳಿಗೂ ಆಧಾರ ಕಾರ್ಡ್

Webdunia
ಗುರುವಾರ, 5 ಜನವರಿ 2017 (13:35 IST)
ದೇಶವಾಸಿಗಳಂತೆ  ಹಸು ಮತ್ತು ಎಮ್ಮೆಗಳಿಗೆ ಸಹ ವಿಶಿಷ್ಟ ಗುರುತಿನ ಸಂಖ್ಯೆಯನ್ನು ನೀಡಲು ಕೇಂದ್ರ ಸರ್ಕಾರ ತೀರ್ಮಾನಿಸಿದೆ. ದೇಶದಲ್ಲಿರುವ 8.8ಕೋಟಿ ಗೋವು ಮತ್ತು ಎಮ್ಮೆಗಳಿಗೆ ಸರ್ಕಾರ ಆಧಾರ್ ಕಾರ್ಡ್‌ನಂತಹ ಗುರುತು ಪತ್ರವನ್ನು ನೀಡಲಿದೆ.

12 ಅಂಕಿಗಳ ಗುರುತಿನ ಸಂಖ್ಯೆಯನ್ನು ಒಂದು ವರ್ಷದೊಳಗೆ ನೀಡುವ ಅಭಿಯಾನವನ್ನು ನವವರ್ಷದ ಮೊದಲ ದಿನದಿಂದಲೇ ಆರಂಭಿಸಲಾಗಿದ್ದು, ಈಗಾಗಲೇ 1 ಲಕ್ಷ ತಂತ್ರಜ್ಞರು 50,000 ಟ್ಯಾಬ್ಲೆಟ್‌ಗಳೊಂದಿಗೆ ಹಳ್ಳಿಗಳತ್ತ ನಡೆದಿದ್ದಾರೆ.
 
ಈ ಯೋಜನೆಯಡಿಯಲ್ಲಿ ಪಾಲಿಯುರೇಥೇನ್ ಟ್ಯಾಗ್‌ನ್ನು  ಜಾನುವಾರುಗಳ ಕಿವಿಯೊಳಗೆ ಸಿಲುಕಿಸಲಾಗುತ್ತದೆ. ದೀರ್ಘಕಾಲ ಬಾಳಿಕೆ ಬರುವ ಈ ಟ್ಯಾಗ್‌ 8 ಗ್ರಾಂ ತೂಕವಿದ್ದು ತಲಾ 8 ರೂಪಾಯಿ ವೆಚ್ಚವಾಗುತ್ತದೆ. ಇದನ್ನು ಪ್ರಾಣಿಗಳಿಗೆ ಅಳವಡಿಸುವಾಗ ಪ್ರಾಣಿಗಳಿಗೆ ಯಾವುದೇ ತೊಂದರೆಯಾಗದಂತೆ ಎಚ್ಚರಿಕೆ ವಹಿಸಲಾಗಿದೆ ಎಂದು ಅಧಿಕಾರಿಗಳು ಸ್ಪಷ್ಟ ಪಡಿಸಿದ್ದಾರೆ.
 
ದೇಶದಲ್ಲಿ 4.1 ಕೋಟಿ ಎಮ್ಮೆ ಹಾಗೂ 4.7 ಕೋಟಿ ಗೋವುಗಳಿದ್ದು, ಈ ಪೈಕಿ ಉತ್ತರಪ್ರದೇಶವೊಂದರಲ್ಲೇ 1.6 ಕೋಟಿ ರಾಸುಗಳಿವೆ.
 
ಒಮ್ಮೆ ದನಗಳ ಕಿವಿಯೊಳಗೆ ಟ್ಯಾಗ್ ತೂರಿಸಿದ ಬಳಿಕ ಅದರ ಗುರುತಿನ ಸಂಖ್ಯೆಯನ್ನು ಅಂತರ್ಜಾಲ ಡಾಟಾಬೇಸ್‌ನಲ್ಲಿ ನಮೂದಿಸಲಾಗುತ್ತದೆ. ಜತೆಗೆ ಅದರ ಮಾಲೀಕರಿಗೆ ವಿಶಿಷ್ಟ ಗುರುತಿನ ಸಂಖ್ಯೆಯುಳ್ಳ ಪ್ರಾಣಿ ಆರೋಗ್ಯ ಕಾರ್ಡ್‌ನ್ನು ವಿತರಿಸಲಾಗುತ್ತದೆ. ಅದರಲ್ಲಿ ಮಾಲೀಕನ ಹೆಸರು, ಅವನ ರಾಸುಗಳಿಗೆ ಚುಚ್ಚುಮದ್ದು ಕೊಡಿಸಿರುವ ಬಗ್ಗೆ ಮಾಹಿತಿ, ಸಂತಾನ ವಿವರ ಸೇರಿದಂತೆ ಮತ್ತಿತರ ವಿವರಗಳಿವೆ. 
 
ಇದು ಪ್ರಧಾನಿಯವರ ದೂರದೃಷ್ಟಿಯ ಯೋಜನೆಯಾಗಿದ್ದು ರಾಸುಗಳ ಮೇಲೆ ನಿಗಾ ಇಡುವುದು ಇದರ ಹಿಂದಿನ ಉದ್ದೇಶ. ಕಾಲಕಾಲಕ್ಕೆ ಚುಚ್ಚುಮದ್ದು ಸಿಗುತ್ತದೆಯೇ ಎಂಬ ಮಾಹಿತಿ ಸಂಗ್ರಹಿಸುವುದು, ಉತ್ತಮ ಸಂತಾನ ಕ್ರಿಯೆ, ಹಾಲು ಉತ್ಪಾದನೆ ಹೆಚ್ಚಳದ ಮೂಲಕ 2022ರ ವೇಳೆಗೆ ಡೈರಿ ಕೃಷಿಕರ ಆದಾಯವನ್ನು ದುಪ್ಪಟ್ಟುಗೊಳಿಸುವ ಗುರಿಯನ್ನು ಸಹ ಹೊಂದಲಾಗಿದೆ. 
 
ಈ ವರ್ಷದಂತ್ಯದೊಳಗೆ ಈ ಯೋಜನೆಯನ್ನು ಪೂರ್ಣಗೊಳಿಸುವ ಉದ್ದೇಶ ಸರ್ಕಾರದ್ದು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಬೆಂಗಳೂರಿನ ಅಕ್ಷಯ್ ಕೊನೆಗೂ ಬದುಕುಳಿಯಲಿಲ್ಲ: ಅಜ್ಜ, ಅಜ್ಜಿಯ ಹೋಮವೂ ಫಲವಾಗಲಿಲ್ಲ

ಹೆಬ್ಬಾಳ ಮೇಲ್ಸೇತುವೆಯಲ್ಲಿ ಸಂಚರಿಸುವವರ ಗಮನಕ್ಕೆ: ಶನಿವಾರದವರೆಗೂ ರಾತ್ರಿ ಬಂದ್

Plane Crash: ಸ್ವಗೃಹಕ್ಕೆ ಮಂಗಳೂರು ಮೂಲದ ಕೋ ಪೈಲಟ್ ಕ್ಲೈವ್ ಕುಂದರ್ ಮೃತದೇಹ

ಕುರ್ಚಿ ಉಳಿಸಿಕೊಳ್ಳಲು ಸಂವಿಧಾನದ ಮೇಲೆ ನಡೆಸಿದ ದೌರ್ಜನ್ಯ: ಸಿ.ಟಿ.ರವಿ

ರಾಹುಲ್ ಗಾಂಧಿ ಭಾರತದ ಭವಿಷ್ಯದ ಬೆಳಕು, ನನ್ನ ಹೆಮ್ಮೆಯ ನಾಯಕ: ಸಿದ್ದರಾಮಯ್ಯ

ಮುಂದಿನ ಸುದ್ದಿ
Show comments