ಬ್ಯಾಂಕ್ ಗ್ರಹಕರೇ ನಿಮಗೊಂದು ಸಿಹಿಸುದ್ದಿ. ಇಂದು ಬ್ಯಾಂಕ್ಗಳಿಗಿದ್ದ ರಜೆಯನ್ನು ರದ್ದುಗೊಳಿಸಿ ಸರ್ಕಾರ ಆದೇಶ ಹೊರಡಿಸಿದ್ದು. ನೀವು ಹಣ ವಿನಿಮಯ ಮಾಡಿಕೊಳ್ಳಲು ಇಂದು ಪರದಾಡಬೇಕಿಲ್ಲ.
ಹೌದು ಕನಕ ಜಯಂತಿ ಪ್ರಯುಕ್ತ ನವೆಂಬರ್ 17ಕ್ಕೆ ರಾಜ್ಯದಲ್ಲಿ ಸರ್ಕಾರಿ ರಜೆ ಇದೆ. ಹೀಗಾಗಿ ಗುರುವಾರ ರಾಜ್ಯದಲ್ಲಿ ಬ್ಯಾಂಕ್ಗಳು ಬಂದ್ ಆಗಲಿದ್ದು, ಕೇಂದ್ರ ಸರ್ಕಾರದ ಅಧೀನದಲ್ಲಿರುವ ಪೋಸ್ಟ್ ಆಫೀಸಿನಲ್ಲಿ ಮಾತ್ರ ಹಣ ಪಡೆಯಬಹುದು. ಹೀಗಾಗಿ ಗುರುವಾರ ಮತ್ತೆ ಸಾರ್ವಜನಿಕರ ಸಂಖ್ಯೆ ಬ್ಯಾಂಕ್ ಎದುರು ಜಾಸ್ತಿಯಾಗಲಿದೆ. ಇಂದು ಅಂಚೆ ಕಚೇರಿ ತೆರೆದಿರುವುದರಿಂದ ಅಂಚೆ ಕಚೇರಿ ಎದುರು ಸಾರ್ವಜನಿಕರು ಜಮಾವಣೆಗೊಳ್ಳುವ ನಿರೀಕ್ಷಿಸಲಾಗಿತ್ತು.
ಆದರೆ ಇಂದು ಬ್ಯಾಂಕ್ಗಳಿಗೆ ರಜೆ ನೀಡುವುದರಿಂದ ಆಗುವ ತೊಂದರೆಯನ್ನು ಮನಗಂಡ ರಾಜ್ಯ ಸರ್ಕಾರ ಬ್ಯಾಂಕ್ಗಳಿಗೆ ರಜೆಯನ್ನು ರದ್ದುಗೊಳಿಸಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ