Select Your Language

Notifications

webdunia
webdunia
webdunia
webdunia

ಲಾಲು ಪ್ರಸಾದ್‌ರೊಂದಿಗೆ ಕೈ ಜೋಡಿಸಿದ ನಂತ್ರ ಡಿಎನ್‌ಎ ತಪ್ಪಾಗಿದೆ: ಬಿಜೆಪಿ ಲೇವಡಿ

ಲಾಲು ಪ್ರಸಾದ್‌ರೊಂದಿಗೆ ಕೈ ಜೋಡಿಸಿದ ನಂತ್ರ ಡಿಎನ್‌ಎ ತಪ್ಪಾಗಿದೆ: ಬಿಜೆಪಿ ಲೇವಡಿ
ಪಾಟ್ನಾ , ಬುಧವಾರ, 2 ಸೆಪ್ಟಂಬರ್ 2015 (17:38 IST)
ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಅವರೊಂದಿಗಿನ ಮೈತ್ರಿಯ ನಂತರ ಬಿಹಾರ್ ಸಿಎಂ ನಿತೀಶ್ ಕುಮಾರ್ ಡಿಎನ್‌‍ಎ ತಪ್ಪಾಗಿ ಹೋಗಿದೆ ಎಂದು ಕೇಂದ್ರ ಸಚಿವ ರಾಜೀವ್ ಪ್ರತಾಪ್ ರೂಢಿ ಹೇಳಿದ್ದಾರೆ.
 
ಲಾಲು ಯಾದವ್ ಅವರೊಂದಿಗೆ ಹೊಂದಾಣಿಕೆಯ ನಂತರ ನಿತೀಶ್ ಕುಮಾರ್ ಉತ್ತಮ ಮಾನಸಿಕ ಶಕ್ತಿಯನ್ನು ಕಳೆದುಕೊಂಡಿದ್ದಾರೆ, ಲಾಲು ಯಾದವ್ ಅವರ ಭಾಷೆಯಂತೆ ನಿತೀಶ್ ಕುಮಾರ್ ಕೂಡಾ ಅದೇ ಶೈಲಿಯಲ್ಲಿ ಮಾತನಾಡಲು ಆರಂಭಿಸಿದ್ದಾರೆ ಎಂದು ಲೇವಡಿ ಮಾಡಿದ್ದಾರೆ. 
 
ಬಿಜೆಪಿಯೊಂದಿಗಿರುವವರೆಗೆ ನಿಮ್ಮ ಡಿಎನ್‌ಎ ತಪ್ಪಾಗಿರಲಿಲ್ಲ. ಲಾಲು ಯಾದವ್ ಅವರೊಂದಿಗೆ ಕೈ ಜೋಡಿಸಿದ ನಂತರ ನಿಮ್ಮ ಡಿಎನ್‌ಎಯಲ್ಲಿ ತಪ್ಪಾಗಿದೆ ಎಂದು ನಿತೀಶ್ ಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. 
 
ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಡಿಎನ್‌ಎ ಹೇಳಿಕೆಗೆ ತಿರುಗೇಟು ನೀಡಿದ್ದ ನಿತೀಶ್ ಕುಮಾರ್, ನಮ್ಮ ಪೂರ್ವಜರು ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದ ಕುಟುಂಬಕ್ಕೆ ಸೇರಿದವರಾಗಿದ್ದಾರೆ ಎಂದು ಹೇಳಿಕೆ ನೀಡಿದ್ದರು.
 
ನಿತೀಶ್ ಕುಮಾರ್ ಅವರ ಒಂದೇ ಕುಟುಂಬ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿಲ್ಲ. ದೇಶದ 50 ಕೋಟಿ ಜನ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದ್ದಾರೆ ಎಂದು ರೂಢಿ ಹೇಳಿದ್ದಾರೆ.

Share this Story:

Follow Webdunia kannada