Select Your Language

Notifications

webdunia
webdunia
webdunia
webdunia

ಬಿಜೆಪಿಯನ್ನು ಮತಗಳ ವರ್ತಕ ಎಂದು ಜರಿದ ನಿತೀಶ್ ಕುಮಾರ್

ಬಿಜೆಪಿಯನ್ನು ಮತಗಳ ವರ್ತಕ ಎಂದು ಜರಿದ ನಿತೀಶ್ ಕುಮಾರ್
ಪುರ್ನಿಯಾ/ ಕಥಿಹಾರ್ , ಶನಿವಾರ, 22 ನವೆಂಬರ್ 2014 (15:26 IST)
ಸುಳ್ಳು ಭರವಸೆಗಳನ್ನು ನೀಡಿ ಅಧಿಕಾರ ಹಿಡಿದ ಬಿಜೆಪಿ ಜನರಿಗೆ ವಂಚನೆ ಮಾಡಿದೆ ಎಂದು ಆರೋಪಿಸಿರುವ ಬಿಹಾರದ ಮಾಜಿ ಮುಖ್ಯಮಂತ್ರಿ ನಿತೀಶ್ ಕುಮಾರ್ ಕೇಸರಿ ಪಕ್ಷ 'ಮತ ಕಾ ಸೌದಾಗರ್' (ಮತಗಳ ವ್ಯಾಪಾರಿ), ಎಂದು ಜರಿದಿದ್ದಾರೆ.

ಕಥಿಯಾರದ ರಾಜೇಂದ್ರ ಕ್ರೀಡಾಂಗಣದಲ್ಲಿ ಮತ್ತು ಬಳಿಕ ಪುರ್ನಿಯಾದ ಜಿಲ್ಲಾ ಶಾಲಾ ಮೈದಾನದಲ್ಲಿ  ಸಂಪರ್ಕ ಯಾತ್ರೆ ನಿಮಿತ್ತ ಪಕ್ಷದ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡುತ್ತಿದ್ದ ಅವರು ಗದ್ದುಗೆಗೆ ಅಂಟಿಕೊಂಡಿರಲು ಮತ್ತು ಸಮಾಜವನ್ನು ವಿಭಾಗಿಸಲು ಬಿಜೆಪಿ ನಾಯಕರು 
 
ಕಳೆದ ಲೋಕಸಭೆ ಚುನಾವಣೆಯಲ್ಲಿ ಪುರ್ನಿಯಾ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಪಕ್ಷದ ಅಭ್ಯರ್ಥಿಗಳು ಹೀನಾಯವಾಗಿ ಸೋಲನುಭವಿಸಿದ್ದರು. ಜೆಡಿಯು ಪಕ್ಷದ ಅಭ್ಯರ್ಥಿ ಜಯಗಳಿಸಿರುವುದು ಮುಕ್ತಿ ಸಂಗ್ರಾಮದಂತೆ. ಬಿಜೆಪಿಯ ಸುಳ್ಳು ಮತ್ತು ಪೊಳ್ಳು ಭರವಸೆಗಳನ್ನು ಜೆಡಿಯು ಪಕ್ಷದ ಕಾರ್ಯಕರ್ತರು ಜನತೆಗೆ ಮನವರಿಕೆ ಮಾಡಿಕೊಡಬೇಕು ಎಂದು ಮಾಜಿ ಮುಖ್ಯಮಂತ್ರಿ ನಿತೀಶ್ ಕುಮಾರ್ ಕರೆ ನೀಡಿದ್ದಾರೆ. 

Share this Story:

Follow Webdunia kannada