Select Your Language

Notifications

webdunia
webdunia
webdunia
webdunia

ಬಿಹಾರ್ ಚುನಾವಣೆ: ಮನೆ ಮನೆಗೆ ತೆರಳಿ ನಿತೀಶ್ ಕುಮಾರ್ ಪ್ರಚಾರ

ಬಿಹಾರ್ ಚುನಾವಣೆ: ಮನೆ ಮನೆಗೆ ತೆರಳಿ ನಿತೀಶ್ ಕುಮಾರ್ ಪ್ರಚಾರ
ಪಾಟ್ನಾ , ಶುಕ್ರವಾರ, 3 ಜುಲೈ 2015 (14:49 IST)
ನಗರದಲ್ಲಿ ವಾಸಿಸುವ ಕೃಷ್ಣ ಪ್ರಸಾದ್ ಸಾಹು ಕುಟುಂಬಕ್ಕೆ ಅಚ್ಚರಿ ಕಾದಿತ್ತು. ಮುಖ್ಯಮಂತ್ರಿ ನಿತೀಶ್ ಕುಮಾರ್ ಹರ್ ಘರ್ ದಸ್ತಕ್, ಘರ್ ಘರ್ ದಸ್ತಕ್ ಎನ್ನುವ ಘೋಷಣೆಯ ಚುನಾವಣೆ ಪ್ರಚಾರದ ಅಂಗವಾಗಿ ಮನೆ ಮನೆಗೆ ತೆರಳಿ ಪ್ರಚಾರ ಮಾಡುತ್ತಿದ್ದಾರೆ.   
 
ಕೃಷ್ಣ ಪ್ರಸಾದ್ ಮನೆಗೆ ಬಂದ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರೊಂದಿಗೆ ಕುಟುಂಬದ ಸದಸ್ಯರು ಸೆಲ್ಫಿ ಕ್ಲಿಕ್ಕಿಸಿ ಸಂತಸ ಪಟ್ಟರು.
 
ಕಳೆದ 10 ವರ್ಷಗಳ ಅವಧಿಯಲ್ಲಿ ತಮ್ಮ ಸರಕಾರದ ಸಾಧನೆ ಹಾಗೂ ಭವಿಷ್ಯದಲ್ಲಿ ಯಾವ ಯಾವ ಅಭಿವೃದ್ಧಿ ಕಾರ್ಯಗಳಿಗೆ ಆದ್ಯತೆ ನೀಡಬೇಕು ಎನ್ನುವ ಬಗ್ಗೆ ಕುಟುಂಬದ ಸದಸ್ಯರಲ್ಲಿ ಅಭಿಪ್ರಾಯಪಡೆದರು. ಸರಕಾರದ ಸಾಧನೆಯನ್ನು ಮೆಚ್ಚಿದ ಕುಟುಂಬದ ಸದಸ್ಯರು ಮತ್ತೆ ನಿತೀಶ್ ಅಧಿಕಾರಕ್ಕೆ ಬರಲಿ ಎಂದು ಹಾರೈಸಿದರು. 
 
ಪಕ್ಷದ ನಾಯಕರೊಬ್ಬರು ಕೃಷ್ಣ ಪ್ರಸಾದ್ ಸಾಹು ಮನೆಯ ಬಾಗಿಲಿಗೆ ನಿತೀಶ್ ಭಾವಚಿತ್ರದೊಂದಿಗೆ ದೂರವಾಣಿ ಸಂಖ್ಯೆಯಿರುವ ಸ್ಟಿಕರ್ ಅಂಟಿಸಿ ಸಂಭ್ರಮಿಸಿದರು.
 
ನಂತರ, ಪಶ್ಚಿಮ ದರವಾಜಾ ಪ್ರದೇಶದಲ್ಲಿರುವ ಅಶಾರಫಿ ಪೊದ್ದಾರ್ ನಿವಾಸಕ್ಕೆ ತೆರಲಿದ ಮುಖ್ಯಮಂತ್ರಿ ನಿತೀಶ್ ಕುಮಾರ್, ಕುಟುಂಬದ ಸದಸ್ಯರೊಂದಿಗೆ ಕೆಲ ಕಾಲ ಸಮಯ ಕಳೆದರು. ಬಿಜೆಪಿಯ ಭದ್ರಕೋಟೆಯಿರುವ ಪ್ರದೇಶದಲ್ಲಿರುವ 21 ಮನೆಗಳಿಗೆ ಭೇಟಿ ನೀಡಿದ್ದಾರೆ ಎಂದು ಪಕ್ಷದ ಮುಖಂಡರು ತಿಳಿಸಿದ್ದಾರೆ. 
 

Share this Story:

Follow Webdunia kannada