Select Your Language

Notifications

webdunia
webdunia
webdunia
webdunia

ಸಿಎಂ ಆಗುವಂತೆ ಗಡ್ಕರಿ ಬೆನ್ನು ಬಿದ್ದಿರುವ ಬಿಜೆಪಿ ಶಾಸಕರು

ಸಿಎಂ ಆಗುವಂತೆ ಗಡ್ಕರಿ ಬೆನ್ನು ಬಿದ್ದಿರುವ ಬಿಜೆಪಿ ಶಾಸಕರು
ಮುಂಬೈ , ಬುಧವಾರ, 22 ಅಕ್ಟೋಬರ್ 2014 (09:44 IST)
ಮಹಾರಾಷ್ಟ್ರದಲ್ಲಿ ಸರಕಾರ ರಚನೆ ,ಮುಖ್ಯಮಂತ್ರಿ ಆಯ್ಕೆ ಕುರಿತಂತೆ ನಡೆಯುತ್ತಿರುವ ಬಿಕ್ಕಟ್ಟು ಮುಂದುವರೆದಿದ್ದು, ರಾಜ್ಯದಲ್ಲಿ ಗೆದ್ದಿರುವ ಕಮಲ ಪಾಳೆಯದ ಶಾಸಕರೀಗ ಮುಖ್ಯಮಂತ್ರಿಯಾಗುವಂತೆ  ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರಿಗೆ ದುಂಬಾಲು ಬಿದ್ದಿದ್ದಾರೆ ಎಂದು ವರದಿಯಾಗಿದೆ.

ಕಳೆದ ಮಂಗಳವಾರ ಗಡ್ಕರಿ ಅವರ ನಾಗ್ಪುರದ ನಿವಾಸಕ್ಕೆ ಭೇಟಿ ನೀಡಿದ 40 ಮಂದಿ ಬಿಜೆಪಿ ಶಾಸಕರು ಸರಕಾರದ ಸಾರಥ್ಯವನ್ನು ವಹಿಸಿಕೊಳ್ಳುವಂತೆ ಒತ್ತಾಯಿಸಿದ್ದಾರೆ ಎಂದು ತಿಳಿದು ಬಂದಿದೆ.
 
ಕೇಂದ್ರ ಸಾರಿಗೆ, ಹೆದ್ದಾರಿ, ಬಂದರು ಸಚಿವರಾಗಿರುವ ಗಡ್ಕರಿ ತಾವು ರಾಜ್ಯ ರಾಜಕಾರಣಕ್ಕೆ ಮರಳುವುದಿಲ್ಲ ಎಂದು ಈ ಮೊದಲೇ ಹೇಳಿದ್ದರು. ಕಳೆದ ಮಂಗಳವಾರ ಮಾಧ್ಯಮದವರ ಜತೆ ಮಾತನಾಡುತ್ತಿದ್ದ ಅವರು ಈಗಲೂ ತಮ್ಮ ನಿರ್ಣಯವನ್ನು ಪುನರಾವರ್ತಿಸಿದ್ದಾರೆ. ಆದರೆ ಪಕ್ಷದ ಹೈ ಕಮಾಂಡ್ ಈ ಕುರಿತು ಅಂತಿಮ ತೀರ್ಮಾನ ಕೈಗೊಳ್ಳುವುದು ಎಂದಿರುವ ಅವರು  ಒಂದು ವೇಳೆ ಪಕ್ಷದ ವರಿಷ್ಠರು ತಾವು ಮುಖ್ಯಮಂತ್ರಿಯಾಗಬೇಕೆಂದು ಸೂಚಿಸಿದರೆ ಅದನ್ನು ತಿರಸ್ಕರಿಸುವುದಿಲ್ಲ ಎಂದು ಹೇಳಿದ್ದಾರೆ.

Share this Story:

Follow Webdunia kannada