Webdunia - Bharat's app for daily news and videos

Install App

ಸ್ವ ಮೂತ್ರದಿಂದಲೇ ಹೂಗಿಡಗಳನ್ನು ಬೆಳೆಸುತ್ತಾರಂತೆ ಈ ಕೇಂದ್ರ ಸಚಿವರು

Webdunia
ಮಂಗಳವಾರ, 5 ಮೇ 2015 (16:54 IST)
ತೋಟಗಾರರಿಗೆ ಕೇಂದ್ರ ಸಚಿವರಾದ ನಿತಿನ್ ಗಡ್ಕರಿ ಒಂದು ಸಲಹೆಯನ್ನು ನೀಡಿದ್ದಾರೆ. ಗಿಡಗಳಿಗೆ ಮಾನವ ಮೂತ್ರವನ್ನು ಉಣಿಸಿ. ಇದು ಅತ್ಯಂತ ಉತ್ತಮ ಗೊಬ್ಬರ. ನಾನು ಕೂಡ ನನ್ನ ದೆಹಲಿಯ ಸರಕಾರಿ ಬಂಗಲೆಯ ಕೈದೋಟದಲ್ಲಿರುವ ಗಿಡಗಳಿಗೆ ನನ್ನ ಮೂತ್ರವನ್ನೇ ಉಣಿಸುವುದು ಎಂದು ಅವರು ಹೇಳಿದ್ದಾರೆ. 

ನಾಗಪುರದಲ್ಲಿ ತುಂತುರು ನೀರಾವರಿ ಪದ್ಧತಿ ಕುರಿತು ಮಾತನಾಡುತ್ತಿದ್ದ ಸಚಿವರು ತಮ್ಮ ಈ ಸ್ವಾನುಭವದ ಕುರಿತು ಹೇಳಿಕೊಂಡಿದ್ದಾರೆ. ನಾನು 50 ಲೀಟರ್‌ನಷ್ಟು ನನ್ನ ಮೂತ್ರವನ್ನು ಸಂಗ್ರಹಿಸಿದೆ ಮತ್ತು ತೋಟದ ಮಾಲಿಯ ಬಳಿ ಕೆಲವು ಗಿಡಗಳಿಗೆ ಇದನ್ನು ಹಾಕು ಎಂದು ತಿಳಿಸಿದೆ. ಪರಿಣಾಮ ಮಾತ್ರ ನನ್ನನ್ನೇ ದಂಗುಬಡಿಸಿತು. ಉಳಿದ ಗಿಡಗಳಿಗಿಂತ ಮೂತ್ರ ಉಣಿಸಲಾಗಿದ್ದ ಗಿಡಗಳು ಒಂದುವರೆ ಪಟ್ಟು ಎತ್ತರಕ್ಕೆ ಬೆಳೆದಿದ್ದವು ಎಂದು ಅವರು ಹೇಳಿದ್ದಾರೆ.
 
ರೈತರು ಶತಮಾನಗಳಿಂದ ಮಾನವ ತ್ಯಾಜ್ಯವನ್ನು ಗೊಬ್ಬರವಾಗಿ ಬಳಸಿಕೊಳ್ಳುತ್ತಿದ್ದಾರೆ. ಹೀಗಿರುವಾಗ ಇದು ಹೊಸ ವಿಷಯ ಎಂಬಂತೆ ಬಿಂಬಿಸಿ ಗಡ್ಕರಿಯವರು ಈ ಹೇಳಿಕೆಯನ್ನು ನೀಡಿದ್ದಾದ್ದರೂ ಏಕೆ ಎಂದು ಬಿಜೆಪಿ ನಾಯಕರಲ್ಲೇ ಇರಿಸುಮುರಿಸು ಉಂಟಾಗಿದೆ.
 
ಗಡ್ಕರಿಯವರ ಈ ಹೇಳಿಕೆಗೆ ಸಾಮಾಜಿಕ ಮಾಧ್ಯಮಗಳಲ್ಲಿ ಸಹ ಕುಹಕದ ಪ್ರತಿಕ್ರಿಯೆಗಳು ಹರಿದು ಬರುತ್ತಿವೆ. 

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments