Select Your Language

Notifications

webdunia
webdunia
webdunia
webdunia

ನಿರ್ಭಯಾ ಸುಮ್ಮನೇ ಇದ್ದಿದ್ದರೆ ಮಾರಣಾಂತಿಕ ಹಲ್ಲೆ ಮಾಡ್ತಿರಲಿಲ್ಲ: ರೇಪಿಸ್ಟ್ ಮುಕೇಶ್ ಸಿಂಗ್

ನಿರ್ಭಯಾ ಸುಮ್ಮನೇ ಇದ್ದಿದ್ದರೆ ಮಾರಣಾಂತಿಕ ಹಲ್ಲೆ ಮಾಡ್ತಿರಲಿಲ್ಲ: ರೇಪಿಸ್ಟ್ ಮುಕೇಶ್ ಸಿಂಗ್
ಲಂಡನ್ , ಮಂಗಳವಾರ, 3 ಮಾರ್ಚ್ 2015 (12:46 IST)
ನಿರ್ಭಯಾ ಗ್ಯಾಂಗ್ ರೇಪ್ ಮುಖ್ಯ ಆರೋಪಿಯೊಬ್ಬ ಬಿಬಿಸಿಗೆ ನೀಡಿದ ಆಘಾತಕಾರಿ ಸಂದರ್ಶನದಲ್ಲಿ ಮಾರಣಾಂತಿಕ ಲೈಂಗಿಕ ದೌರ್ಜನ್ಯಕ್ಕೆ ನಿರ್ಭಯಾಳ ವರ್ತನೆಯೇ ಕಾರಣವೆಂದು ಆರೋಪಿಸಿದ್ದಾನೆ. ರಾತ್ರಿವೇಳೆ ಸಂಚರಿಸುವ ಮಹಿಳೆಯರು ಪುರುಷ ರೇಪಿಸ್ಟ್‌ಗಳ ಗಮನ ಸೆಳೆಯುವುದಕ್ಕೆ ಮಹಿಳೆಯರೇ ಕಾರಣ ಎಂದು ರೇಪ್ ಘಟನೆ ಸಂಭವಿಸಿದ ಬಸ್‌ನಲ್ಲಿದ್ದ ಚಾಲಕ ಮುಕೇಶ್ ಸಿಂಗ್ ಹೇಳಿದ್ದಾನೆ. 
 
ಅವನು ಇತ್ತೀಚೆಗೆ ಬಿಬಿಸಿಗೆ ಜೈಲಿನಿಂದ ಸಂದರ್ಶನ ನೀಡಿದ್ದು, ಮಾರ್ಚ್ 8ರಂದು ಪ್ರಸಾರ ಮಾಡಲಾಗುತ್ತದೆ. ಅಂದು ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನಾಗಿ ಕೂಡ ಆಚರಿಸಲಾಗುತ್ತಿದೆ. ನಿರ್ಭಯಾಳ ಮೇಲೆ ಲೈಂಗಿಕ ದೌರ್ಜನ್ಯ ಮತ್ತು ಹತ್ಯೆ ಮಾಡಿದ ಘಟನೆಯನ್ನು ಮೆಲುಕು ಹಾಕಿದ ಸಿಂಗ್ ಅವಳ ಮೇಲೆ ರೇಪ್ ಮಾಡುವಾಗ ಅವಳು ಪ್ರತಿರೋಧ ಒಡ್ಡದೇ ಸುಮ್ಮನೇ ಇದ್ದು, ರೇಪ್‌ಗೆ ಅವಕಾಶ ಮಾಡಿಕೊಟ್ಟಿದ್ದರೆ ಅವಳನ್ನು ಅಮಾನುಷ ಹತ್ಯೆ ಮಾಡುತ್ತಿರಲಿಲ್ಲ ಎಂದು ಬಿಬಿಸಿಗೆ ಹೇಳಿದ್ದಾನೆ. 
 
ಸಭ್ಯ ಮಹಿಳೆ ರಾತ್ರಿ 9 ಗಂಟೆಗೆ ಅಲೆಯುವುದು ಸರಿಯಲ್ಲ. ಯುವತಿ ಕೂಡ ಯುವಕನಷ್ಟೇ ರೇಪ್‌ಗೆ ಜವಾಬ್ದಾರಿಯಾಗುತ್ತಾರೆ. ಮನೆಕೆಲಸ ಯುವತಿಯರಿಗೆ ಮೀಸಲಾಗಿದ್ದು, ಅದನ್ನು ಬಿಟ್ಟು ಡಿಸ್ಕೋಗಳಲ್ಲಿ, ಬಾರ್‌ಗಳಲ್ಲಿ ಯುವಕರ ಜೊತೆ ಅಲೆಯುವುದು ಅವರ ಕೆಲಸವಲ್ಲ ಅಥವಾ ಅಶ್ಲೀಲ ಉಡುಪು ಧರಿಸುವುದು ಸರಿಯಲ್ಲ  ಎಂದು ಹೇಳಿದ್ದಾನೆ.
 

Share this Story:

Follow Webdunia kannada