Webdunia - Bharat's app for daily news and videos

Install App

ಮತ್ತೆ ನಿರ್ಭಯಾ: 80ರ ವೃದ್ಧೆ ರೇಪ್, ಗುದದ್ವಾರದಲ್ಲಿ ಹಾರ್ಪಿಕ್ ತೂರಿ ಹತ್ಯೆ

Webdunia
ಶುಕ್ರವಾರ, 6 ಜನವರಿ 2017 (18:44 IST)
ಕಳೆದ ನಾಲ್ಕು ವರ್ಷಗಳ ಹಿಂದೆ ನವದೆಹಲಿಯಲ್ಲಿ ನಡೆದ ನಿರ್ಭಯಾ ಪ್ರಕರಣ ಪಕ್ಕದ ಹರಿಯಾಣಾದಲ್ಲಿ ಮರುಕಳಿಸಿದೆ. ಆದರೆ ಈ ಬಾರಿ ಕೀಚಕರಿಗೆ ಬಲಿಯಾಗಿದ್ದು 80 ವರ್ಷದ ವೃದ್ಧೆ. 

ಸೋನಿಪತ್ ಜಿಲ್ಲೆಯ ಬಾತ್‌ಗಾಂವ್‌ ಗ್ರಾಮದಲ್ಲಿ ಬುಧವಾರ ಈ ಹೇಯ ಕೃತ್ಯ ನಡೆದಿದ್ದು, ಅಪರಿಚಿತ ದುಷ್ಕರ್ಮಿಗಳು ವೃದ್ಧೆಯ ಗುದದ್ವಾರದಲ್ಲಿ ಟಾಯ್ಲೆಟ್ ಕ್ಲೀನರ್ ಹಾರ್ಪಿಕ್ ತೂರಿದ್ದಾರೆ. ಪರಿಣಾಮ ತೀವ್ರ ರಕ್ತಸ್ರಾವವಾಗಿ ವೃದ್ಧೆ ಸಾವನ್ನಪ್ಪಿದ್ದಾಳೆ. 
 
ಪ್ರಾಥಮಿಕ ತನಿಖೆಯಲ್ಲಿ ಪೊಲೀಸರಿಗೆ ಅತ್ಯಾಚಾರವಾದ ಬಗ್ಗೆ ಯಾವುದೇ ಕುರುಹುಗಳು ಪತ್ತೆಯಾಗಿಲ್ಲ. ಆದರೆ ಇದು ಲೈಂಗಿಕ ದೌರ್ಜನ್ಯ ಎಸಗಿ ಮಾಡಲಾದ ಹತ್ಯೆ ಎಂದು ಪೊಲೀಸರು ಅನುಮಾನ ವ್ಯಕ್ತ ಪಡಿಸಿದ್ದಾರೆ. 
 
ಅಪರಿಚಿತ ದುಷ್ಕರ್ಮಿ ವೃದ್ಧೆಯ ಖಾಸಗಿ ಅಂಗಾಂಗದಲ್ಲಿ ಪ್ಲಾಸ್ಟಿಕ್‌ ಬಾಟಲಿಯಿಂದ ಗಾಯಗೊಳಿಸಿ ತೀವ್ರ ರಕ್ತ ಸ್ರಾವದಿಂದ ಸಾಯುವಂತೆ ಮಾಡಿದ್ದಾನೆ. 
 
ಘಟನೆ ನಡೆದಾಗ ಪೀಡಿತೆ ನೆಲ ಮಹಡಿಯಲ್ಲಿದ್ದಳು. ಆಕೆಯ ಇಬ್ಬರು ಪುತ್ರರಲ್ಲಿ ಒಬ್ಬ ಮೊದಲ ಮಹಡಿಯಲ್ಲಿ ತನ್ನ ಕುಟುಂಬದೊಂದಿದೆ ವಾಸವಾಗಿದ್ದಾನೆ. ವೃದ್ಧೆಯ ರಕ್ತಸಿಕ್ತ ಮೃತದೇಹ ಮನೆಯ ನೆಲ ಅಂತಸ್ತಿನಲ್ಲಿರುವ ಮಂಚದ ಮೇಲೆ ಪತ್ತೆಯಾಗಿದೆ. ವೃದ್ಧೆಯ ಶವವನ್ನು ಸೋನಿಪತ್‌ ಸಿವಿಲ್‌ ಆಸ್ಪತ್ರೆಗೆ ಸಾಗಿಸಿ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ.  
 
ಮೃತಳ ಮರಣೋತ್ತರ ಪರೀಕ್ಷೆ ನಡೆಸಿರುವ ವೈದ್ಯರು ಈ ಹಿಂದೆ ನಾವು ಇಷ್ಟು ಕ್ರೂರತೆಯನ್ನು ಎಂದೂ ಕಂಡಿರಲಿಲ್ಲ. ಬಾಟಲಿಯನ್ನು ಎಷ್ಟು ಬಲದೊಂದಿಗೆ ತೂರಿದ್ದಾರೆ ಎಂದರೆ ಆಕೆಯ ಒಳಾಂಗಗಳಿಗೆಲ್ಲ ಗಾಯವಾಗಿ ತೀವ್ರ ರಕ್ತಸ್ರಾವವಾಗಿದೆ ಎಂದಿದ್ದಾರೆ. 
 
ಕಳೆದೊಂದು ವರ್ಷದಲ್ಲಿ ಹರಿಯಾಣದಲ್ಲಿ ನಡೆದ ಎರಡನೆಯ ಅತ್ಯಂತ ಕ್ರೂರ ಕೃತ್ಯವಿದು. ಫೆಬ್ರವರಿ 2016ರಲ್ಲಿ ಹಿಂದೆ ನೇಪಾಳಿ ಮೂಲದ 28 ವರ್ಷದ ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾವೆಸಗಿದ್ದ ಆರೋಪಿಗಳು ಆಕೆಯ ಗುಪ್ತಾಂಗಗಳಲ್ಲಿ ಕಾಂಡೋಮ್, ಕೋಲನ್ನು ತೂರಿ ಹತ್ಯೆಗೈದಿದ್ದರು.  

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

19ಮಾಜಿ ಮಂತ್ರಿಗಳ ಭದ್ರತೆ ಕೈಬಿಟ್ಟ ಗೃಹ ಸಚಿವಾಲಯ, ಆದರೆ ಸ್ಮೃತಿ ಇರಾನಿಗೆ ಯಾಕೆ ಈ ವಿಶೇಷತೆ

ಛತ್ತೀಸ್‌ಗಢ: ನಕ್ಸಲ್ ವಿರೋಧಿ ಕಾರ್ಯಾಚರಣೆಯಲ್ಲಿ ಮಹಿಳಾ ಮಾವೋವಾದಿ ಹತ್ಯೆ

ಮದ್ಯದ ಬೆಲೆ ಕೇಳಿಯೇ ನಶೆ ಏರುವಂತಾಗಿದೆ: ಬಿಜೆಪಿ ವ್ಯಂಗ್ಯ

Suhas Shetty Case: ಹತ್ಯೆ ಹಿಂದೆ ಬಜ್ಪೆ ಹೆಡ್‌ ಕಾನ್‌ಸ್ಟೇಬಲ್‌ ಭಾಗಿಯಾಗಿರುವ ಶಂಕೆ

Suhas Shetty Case: ಯುಟಿ ಖಾದರ್ ಸ್ಪೀಕರ್‌ ಆಗಿರುವವರೆಗೆ ಸಾವಿಗೆ ನ್ಯಾಯ ಸಿಗುವ ನಂಬಿಕೆಯಿಲ್ಲ

ಮುಂದಿನ ಸುದ್ದಿ