Webdunia - Bharat's app for daily news and videos

Install App

ನಿರ್ಮಲಾ ಸೀತಾರಾಮನ್ ಯಾಕೆ ಚುನಾವಣೆಗೆ ನಿಂತಿಲ್ಲ? ಸಚಿವೆ ಕೊಟ್ಟ ಉತ್ತರ ಹೀಗಿದೆ

Krishnaveni K
ಗುರುವಾರ, 28 ಮಾರ್ಚ್ 2024 (12:26 IST)
ನವದೆಹಲಿ: ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಕೂಡಾ ಕಣಕ್ಕಿಳಿಯಲಿದ್ದಾರೆ ಎಂಬ ಮಾತುಗಳಿತ್ತು. ಆದರೆ ಅದು ಸುಳ್ಳಾಗಿದೆ.

ಈ ಬಾರಿಯೂ ನಿರ್ಮಲಾ ಲೋಕಸಭೆ ಕಣಕ್ಕಿಳಿದಿಲ್ಲ. ರಾಜ್ಯಸಭೆ ಸದಸ್ಯೆಯಾಗಿರುವ ನಿರ್ಮಲಾ ಸೀತಾರಾಮನ್ ಗೆ ಈಗ ತಮ್ಮದೇ ಆದ ವರ್ಚಸ್ಸಿದೆ. ಹೀಗಾಗಿ ಅವರು ಈ ಬಾರಿ ಲೋಕಸಭೆ ಹಣಾಹಣಿಯಲ್ಲಿ ಪಾಲ್ಗೊಳ್ಳಲಿದ್ದಾರೆ ಎನ್ನಲಾಗಿತ್ತು. ಆದರೆ ಚುನಾವಣೆಗೆ ಸ್ಪರ್ಧಿಸದೇ ಇರಲು ಕಾರಣವೇನು ಎಂದು ಸ್ವತಃ ನಿರ್ಮಲಾ ಬಹಿರಂಗಪಡಿಸಿದ್ದಾರೆ.

ಲೋಕಸಭೆ ಚುನಾವಣೆಗೆ ಸ್ಪರ್ಧಿಸಲು ಸಾಕಷ್ಟು ಹಣ ಬೇಕು. ಆದರೆ ನನ್ನ ಬಳಿ ಈಗ ಅದಕ್ಕೆ ತಕ್ಕಷ್ಟು ಹಣವಿಲ್ಲ. ಹಾಗಾಗಿ ಸ್ಪರ್ಧೆ ಮಾಡುತ್ತಿಲ್ಲ ಎಂದು ನಿರ್ಮಲಾ ಸೀತಾರಾಮನ್ ಸ್ಪಷ್ಟನೆ ನೀಡಿದ್ದಾರೆ.  ಅಲ್ಲದೆ ಚುನಾವಣೆಗೆ ಸ್ಪರ್ಧೆ ನಡೆಸುವ ವಿಚಾರದಲ್ಲಿ ತಮಗಿರುವ ಗೊಂದಲಗಳನ್ನೂ ಹೇಳಿಕೊಂಡಿದ್ದಾರೆ.

‘ಸುಮಾರು 10 ದಿನಗಳ ಕಾಲ ಯೋಚನೆ ಮಾಡಿದ ನಂತರ ನಾನು ಸ್ಪರ್ಧೆ ಮಾಡಲ್ಲ ಎಂದು ತೀರ್ಮಾನಿಸಿದೆ. ಸ್ಪರ್ಧೆ ಮಾಡಲು ಬೇಕಾದಷ್ಟು ಹಣ ನನ್ನ ಬಳಿ ಇಲ್ಲ. ಅಲ್ಲದೆ ತಮಿಳುನಾಡಿನಿಂದ ಸ್ಪರ್ಧಿಸಲಾ, ಆಂಧ್ರದಿಂದ ಸ್ಪರ್ಧಿಸಲಾ ಎಂಬ ಗೊಂದಲವೂ ಇತ್ತು. ಅಲ್ಲದೆ, ಯಾವ ಸಮುದಾಯಕ್ಕೆ ಸೇರಿದವರು, ಯಾವ ಜಾತಿಯವರಿಗೆ ಮೇಲುಗೈ ಇದೆ ಎಂಬಿತ್ಯಾದಿ ಯೋಚನೆಗಳೆಲ್ಲಾ ನನ್ನನ್ನು ಗೊಂದಲಕ್ಕೀಡು ಮಾಡಿತು. ಹೀಗಾಗಿ ನಾನು ಸ್ಪರ್ಧೆ ಮಾಡದೇ ಇರಲು ತೀರ್ಮಾನಿಸಿದೆ’ ಎಂದು ನಿರ್ಮಲಾ ಹೇಳಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Air India Plane crash: ಬೆಳ್ಳಂ ಬೆಳಿಗ್ಗೆಯೇ ಅಹಮ್ಮದಾಬಾದ್ ಗೆ ಓಡೋಡಿ ಬಂದ ಮೋದಿ video

Mysore: ಮೈಸೂರು ಪ್ರವಾಸ ಮಾಡುವವರಿಗೆ ಶಾಕ್ ಕೊಟ್ಟ ಎಂಟ್ರಿ ಫೀಸ್

Air India Plane crash: ಭಾರತದ ಇತಿಹಾಸದಲ್ಲೇ ಅತ್ಯಂತ ದೊಡ್ಡ ವಿಮಾನ ದುರಂತಗಳು ಯಾವುವು ಗೊತ್ತಾ

Air India ‌Flight Crash: ಮೃತ ಪ್ರತಿ ಪ್ರಯಾಣಿಕನ ಕುಟುಂಬಕ್ಕೆ ತಲಾ ₹1 ಕೋಟಿ ಘೋಷಿಸಿದ ಟಾಟಾ ಗ್ರೂಪ್

Air India Plane crash: ವಿಮಾನ ಅಪಘಾತಕ್ಕೆ ಇದೇ ಕಾರಣ: ಮಲ್ಲಿಕಾರ್ಜುನ ಖರ್ಗೆ ಸ್ಪೋಟಕ ಹೇಳಿಕೆ

ಮುಂದಿನ ಸುದ್ದಿ
Show comments