Select Your Language

Notifications

webdunia
webdunia
webdunia
webdunia

ಅರವಿಂದ್ ಕೇಜ್ರಿವಾಲ್‌ಗೆ ಒಂದು ಗಂಟೆಯಲ್ಲಿ ಹತ್ಯೆ ಮಾಡುವುದಾಗಿ ಜೀವಬೆದರಿಕೆ ಕರೆ

ಅರವಿಂದ್ ಕೇಜ್ರಿವಾಲ್‌ಗೆ ಒಂದು ಗಂಟೆಯಲ್ಲಿ ಹತ್ಯೆ ಮಾಡುವುದಾಗಿ ಜೀವಬೆದರಿಕೆ ಕರೆ
ನವದೆಹಲಿ , ಗುರುವಾರ, 31 ಮಾರ್ಚ್ 2016 (09:04 IST)
ಅಪರಿಚಿತ ವ್ಯಕ್ತಿಯೊಬ್ಬ ಪೊಲೀಸ್ ನಿಯಂತ್ರಣ ಕೊಠಡಿಗೆ ದೂರವಾಣಿ ಕರೆ ಮಾಡಿ ಒಂದು ಗಂಟೆಯೊಳಗೆ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್‌ರನ್ನು ಹತ್ಯೆ ಮಾಡುವುದಾಗಿ ಬೆದರಿಕೆಯೊಡ್ಡಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. 
 
ಅಪರಿಚಿತ ವ್ಯಕ್ತಿ ನಾರ್ಥ್ ದೆಹಲಿಯ ಸಿವಿಲ್ ಲೈನ್‌ ಪ್ರದೇಶದಿಂದ ಕರೆ ಮಾಡಿದ್ದಾನೆ ಎಂದು ಪೊಲೀಸರು ಮುಖ್ಯಮಂತ್ರಿಗಳ ಭದ್ರತಾ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ ಎಂದು ದೆಹಲಿಯ ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
 
ದೂರವಾಣಿ ಕರೆಯ ಬೆನ್ನಟ್ಟಿದ ಪೊಲೀಸರಿಗೆ ಅದೊಂದು ಹುಸಿ ಕರೆ ಎನ್ನುವುದು ತನಿಖೆಯಲ್ಲಿ ಪತ್ತೆಯಾಗಿದೆ. ಪೊಲೀಸರು ಕರೆಯನ್ನು ಪತ್ತೆ ಮಾಡಲು ಹೋದಾಗ ಎರಡನೇ ಮೊಬೈಲ್ ಸಂಖ್ಯೆಗೆ ಕರೆಯನ್ನು ಡೈವರ್ಟ್ ಮಾಡಿರುವುದು ತನಿಖೆಯಿಂದ ತಿಳಿದು ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
 

Share this Story:

Follow Webdunia kannada