Select Your Language

Notifications

webdunia
webdunia
webdunia
webdunia

ಸಚಿವ ಪಿ.ಟಿ ಪರಮೇಶ್ವರ ನಾಯ್ಕ ವಿರುದ್ಧ ಹೊಸ ಆರೋಪ

ಸಚಿವ ಪಿ.ಟಿ ಪರಮೇಶ್ವರ ನಾಯ್ಕ ವಿರುದ್ಧ ಹೊಸ ಆರೋಪ
ಬಳ್ಳಾರಿ , ಶುಕ್ರವಾರ, 29 ಜನವರಿ 2016 (09:21 IST)
ಡಿವೈಎಸ್ಪಿ ಅನುಪಮಾ ಶೆಣೈ ವರ್ಗಾವಣೆ ಪ್ರಕರಣದಿಂದ ಭಾರಿ ವಿವಾದಕ್ಕೆ ಸಿಲುಕಿರುವ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಪಿ.ಟಿ.ಪರಮೇಶ್ವರ ನಾಯ್ಕ ಅವರ ವಿರುದ್ಧ ಮತ್ತೊಂದು ಆರೋಪ ಕೇಳಿ ಬಂದಿದೆ. ಪೊಲೀಸ್ ಅಧಿಕಾರಿಗಳನ್ನೇ ಟಾರ್ಗೆಟ್ ಮಾಡಿಕೊಂಡು ಅವರು ಜಿಲ್ಲೆಯಲ್ಲಿ ತುಘಲಕ್ ದರ್ಬಾರ್ ನಡೆಸುತ್ತಿದ್ದಾರೆ ಎಂಬ ದೂರುಗಳು ಕೇಳಿ ಬರುತ್ತಿವೆ.

ವಿನಾಕಾರಣ ತಮ್ಮನ್ನು ಪರಮೇಶ್ವರ್ ನಾಯ್ಕ ಸಾರ್ವಜನಿಕವಾಗಿ ನಿಂದಿಸಿದ್ದರು ಎಂದು ಪೊಲೀಸ್ ಸಬ್ ಇನ್ಸಪೆಕ್ಟರ್ ಒಬ್ಬರು ದೂರಿದ್ದಾರೆ. 
 
ಕಳೆದ ವರ್ಷ ಮಾರ್ಚ 14ರಂದು  ಹಗರಿಬೊಮ್ಮನಹಳ್ಳಿ ತಾಲೂಕಿನ ತಂಬ್ರಹಳ್ಳಿ ಠಾಣೆ ವ್ಯಾಪ್ತಿಯ ಹಂಪಸಾಗರ ಗ್ರಾಮದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ  
 
ಸಚಿವರು ಅವಾಚ್ಯ ಶಬ್ದಗಳಿಂದ ತಮ್ಮನ್ನು ನಿಂದಿಸಿದ್ದರು ಎಂದು ಪಿಎಸ್‍ಐ  ಭೀಮನಗೌಡ ಆರೋಪಿಸಿದ್ದಾರೆ.
 
ನೀನು ಬಂದಾಗಿನಿಂದ ನನ್ನನ್ನು ಭೇಟಿ ಮಾಡಲಿಕ್ಕೆ ಬಂದಿಲ್ಲ ಏಕೆ? ನೀನು ದೊಡ್ಡ ದಾದಾ ನಾ?  ನಿನ್ನ ವರ್ಗಾವಣೆ ಮಾಡಿಸಿದ್ದು ನಾನೇ.  ನಿನ್ನ ಸಸ್ಪೆಂಡ್ ಮಾಡಿಸುತ್ತೇನೆ. ಬಟ್ಟೆ ಬಿಚ್ಚಿಸುತ್ತೇನೆ. ಅಂತಾ ಸಚಿವರು ಸಾರ್ವಜನಿಕವಾಗಿ ಏವಚನದಲ್ಲಿ ನಿಂದಿಸಿದ್ದರು. ಅಷ್ಟೇ  ಅಲ್ಲದೆ ಮಾರನೆಯ ದಿನವೇ ಅವರನ್ನು ವರ್ಗಾವಣೆ ಮಾಡಿಸಿದ್ದಾರೆ ಎಂಬ ಸತ್ಯ ಹೊರಬಿದ್ದಿದೆ. 

Share this Story:

Follow Webdunia kannada