Webdunia - Bharat's app for daily news and videos

Install App

ನೆಹರು ಭಾರತ ರತ್ನ ಪ್ರಶಸ್ತಿಗೆ ಅನರ್ಹರು: ಸರಕಾರ ಪ್ರಶಸ್ತಿ ಹಿಂದಕ್ಕೆ ಪಡೆಯಬೇಕು: ನೇತಾಜಿ ಕುಟುಂಬ

Webdunia
ಶನಿವಾರ, 25 ಏಪ್ರಿಲ್ 2015 (16:23 IST)
ನೇತಾಜಿ ಸುಭಾಶ್ ಚಂದ್ರ ಭೋಸ್ ಮತ್ತು ಅವರ ಕುಟುಂಬದ ಸದಸ್ಯರ ಚಲನವಲನಗಳ ಬಗ್ಗೆ ಕಾಂಗ್ರೆಸ್ ಪಕ್ಷ ಗೂಢಚಾರಿಕೆ ನಡೆಸುತ್ತಿತ್ತು ಎನ್ನುವ ಇತ್ತೀಚಿನ ವರದಿಗಳಿಂದ ಆಘಾತಗೊಂಡಿರುವ ನೇತಾಜಿ ಕುಟುಂಬ, ಅಂದಿನ ಮಾಜಿ ಪ್ರಧಾನಿ ಜವಾಹರ್ ಲಾಲ್ ನೆಹರು ಅವರಿಗೆ ನೀಡಲಾದ ಭಾರತ ರತ್ನ ಪ್ರಶಸ್ತಿಯನ್ನು ಹಿಂದಕ್ಕೆ ಪಡೆಯಬೇಕು ಎಂದು ಒತ್ತಾಯಿಸಿದೆ.

ನೇತಾಜಿ ಕುಟುಂಬದ ವಕ್ತಾರರಾದ ಚಂದ್ರ ಕುಮಾರ್ ಭೋಸ್ ಮಾತನಾಡಿ, ಗೂಢಚಾರಿಕೆ ವರದಿಗಳು ಬಹಿರಂಗವಾದ ನಂತರ ನೆಹರು ನಡತೆಗಳು ಸಾರ್ವಜನಿಕವಾಗಿ ಬಹಿರಂಗವಾಗಿವೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಭಾರತ ರತ್ನ ಪ್ರಶಸ್ತಿಯನ್ನು ಅತ್ಯುತ್ತಮ ನಾಗರಿಕರಿಗೆ ನೀಡಲಾಗುತ್ತಿದೆ. ಆದರೆ, ನೆಹರು ಅವರ ಕೀಳು ನಡತೆ ಬಹಿರಂಗವಾಗಿದ್ದರಿಂದ ಅವರು ಪ್ರಶಸ್ತಿ ಪಡೆಯಲು ಅರ್ಹರಲ್ಲ. ಅವರಿಂದ ಭಾರತ ರತ್ನ ಪ್ರಶಸ್ತಿಯನ್ನು ಸರಕಾರ ಹಿಂದಕ್ಕೆ ಪಡೆಯಬೇಕು ಎಂದು ದೇಶದ ಜನತೆ ಒತ್ತಾಯಿಸಬೇಕು ಎಂದು ಕರೆ ನೀಡಿದ್ದಾರೆ.

ಲೇಖಕ, ಸಂಶೋಧಕ ಅನುಜ್ ಧಾರ್ ಅವರ ದಾಖಲೆಗಳ ಪ್ರಕಾರ, 1948ರಿಂದ 1968ರ ವರೆಗೆ ಸುಮಾರು 20 ವರ್ಷಗಳ ಕಾಲ ನೇತಾಜಿ ಕುಟುಂಬದ ಸದಸ್ಯರಾದ ಸಿಸಿರ್ ಕುಮಾರ್ ಭೋಸ್, ಅಮಿಯಾ ನಾಥ್ ಭೋಸ್ ಹಾಗೂ ಭೋಸ್ ಕುಟುಂಬಕ್ಕೆ ಆತ್ಮಿಯರಾಗಿರುವ ವ್ಯಕ್ತಿಗಳ ಬಗ್ಗೆ ಗೂಢಚಾರಿಕೆ ನಡೆಸಲಾಗುತ್ತಿತ್ತು. 20 ವರ್ಷಗಳ ಗೂಢಚಾರಿಕೆ ಅವಧಿಯಲ್ಲಿ ನೆಹರು 16 ವರ್ಷಗಳ ಕಾಲ ದೇಶದ ಪ್ರಧಾನಿಯಾಗಿ ಕಾರ್ಯನಿರ್ವಹಿಸಿದ್ದರು.    

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments