Webdunia - Bharat's app for daily news and videos

Install App

ಸಚಿವ ಸ್ಥಾನವೋ..? ಕಾಮಿಡಿ ಶೋನೋ..? ಸಿಧುಗೆ ಸಂಕಷ್ಟ ಶುರು

Webdunia
ಗುರುವಾರ, 23 ಮಾರ್ಚ್ 2017 (07:56 IST)

ಪಂಜಾಬ್ ಸಚಿವ , ಮಾಜಿ ಕ್ರಿಕೆಟಿಗ ನವಜೋತ್ ಸಿಂಗ್ ಸಿಧು ಮತ್ತೊಂದು ವಿವಾದದಲ್ಲಿ ಸಿಲುಕಿದ್ದಾರೆ. ಸಚಿವರಾದ ಬಳಿಕವೂ ಕಪಿಲ್ ಶರ್ಮಾ ಕಾಮಿಡಿ ಶೋನಲ್ಲಿ ಭಾಗವಹಿಸುತ್ತೇನೆಂಬ ಸಿದು ಹಠಕ್ಕೆ ಸ್ವತಃ ಸಿಎಂ ಅಮರೀಂದರ್ ಸಿಂಗ್ ಚಾಟಿ ಬೀಸಿದ್ದಾರೆ.

 

ಒಂದೊಮ್ಮೆ ಸಿಧು ತಮ್ಮ ನಟನಾ ವೃತ್ತಿ ಮುಂದುವರೆಸಿದರೆ ಅವರ ಖಾತೆ ಬದಲಾಯಿಸಲಾಗುತ್ತೆ ಎನ್ನುವ ಮೂಲಕ ಸಿಧುಗೆ ಸಿಎಂ ಅಮರೀಂದರ್ ಸಿಂಗ್ ಎಚ್ಚರಿಕೆ ನೀಡಿದ್ದಾರೆ. ಅಲ್ಲದೆ, ಕಾನೂನು ತಜ್ಞರ ಜೊತೆ ಈ ಬಗ್ಗೆ ಚರ್ಚಿಸಿದ್ದಾರೆಂದು ತಿಳಿದುಬಂದಿದೆ.

ಪ್ರವಾಸೋದ್ಯಮ ಮತ್ತು ವಸ್ತು ಸಂಗ್ರಹಾಲಯ ಖಾತೆಗಳ ಜೊತೆ ಸಿಧುಗೆ ಸಂಸ್ಕೃತಿ ಖಾತೆ ಸಹ ನೀಡಲಾಗಿದೆ. ಒಂದೊಮ್ಮೆ ಅವರು ಟಿವಿ ಶೋ ಮುಂದುವರಿಸಿದ್ದೇ ಆದರೆ ಅವರ ಖಾತೆ ಮತ್ತು ನಟನಾ ವೃತ್ತಿ ನಡುವೆ ಹಿತಾಸಕ್ತಿ ಸಂಘರ್ಷ ಎದುರಾಗಲಿದೆ.

ಡಿಸಿಎಂ ಹುದ್ದೆಯ ಆಕಾಂಕ್ಷಿಯಾಗಿದ್ದ ಸಿಧುಗೆ ಲೋ ಪ್ರೊಫೈಲ್ ಸಚಿವ ಸ್ಥಾನ ನೀಡಿರುವುದೂ ಕೊಂಚ ಅಸಮಾಧಾನ ಹುಟ್ಟಿಸಿದೆ ಎನ್ನಲಾಗಿದೆ. ಪ್ರತೀ ಬಾರಿ ತನ್ನನ್ನ ವಿರೋಧಿಸುವವರಿಗೆ ಖಡಕ್ ತಿರುಗೇಟು ನೀಡುವ ಸಿಧು ಈ ಬಾರಿ ಸಿಎಂಗೆ ಯಾವ ಉತ್ತರ ನೀಡುತ್ತಾರೋ ಕಾದುನೋಡಬೇಕು.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments