Webdunia - Bharat's app for daily news and videos

Install App

ಸಚಿವ ಸ್ಥಾನವೋ..? ಕಾಮಿಡಿ ಶೋನೋ..? ಸಿಧುಗೆ ಸಂಕಷ್ಟ ಶುರು

Webdunia
ಗುರುವಾರ, 23 ಮಾರ್ಚ್ 2017 (07:56 IST)

ಪಂಜಾಬ್ ಸಚಿವ , ಮಾಜಿ ಕ್ರಿಕೆಟಿಗ ನವಜೋತ್ ಸಿಂಗ್ ಸಿಧು ಮತ್ತೊಂದು ವಿವಾದದಲ್ಲಿ ಸಿಲುಕಿದ್ದಾರೆ. ಸಚಿವರಾದ ಬಳಿಕವೂ ಕಪಿಲ್ ಶರ್ಮಾ ಕಾಮಿಡಿ ಶೋನಲ್ಲಿ ಭಾಗವಹಿಸುತ್ತೇನೆಂಬ ಸಿದು ಹಠಕ್ಕೆ ಸ್ವತಃ ಸಿಎಂ ಅಮರೀಂದರ್ ಸಿಂಗ್ ಚಾಟಿ ಬೀಸಿದ್ದಾರೆ.

 

ಒಂದೊಮ್ಮೆ ಸಿಧು ತಮ್ಮ ನಟನಾ ವೃತ್ತಿ ಮುಂದುವರೆಸಿದರೆ ಅವರ ಖಾತೆ ಬದಲಾಯಿಸಲಾಗುತ್ತೆ ಎನ್ನುವ ಮೂಲಕ ಸಿಧುಗೆ ಸಿಎಂ ಅಮರೀಂದರ್ ಸಿಂಗ್ ಎಚ್ಚರಿಕೆ ನೀಡಿದ್ದಾರೆ. ಅಲ್ಲದೆ, ಕಾನೂನು ತಜ್ಞರ ಜೊತೆ ಈ ಬಗ್ಗೆ ಚರ್ಚಿಸಿದ್ದಾರೆಂದು ತಿಳಿದುಬಂದಿದೆ.

ಪ್ರವಾಸೋದ್ಯಮ ಮತ್ತು ವಸ್ತು ಸಂಗ್ರಹಾಲಯ ಖಾತೆಗಳ ಜೊತೆ ಸಿಧುಗೆ ಸಂಸ್ಕೃತಿ ಖಾತೆ ಸಹ ನೀಡಲಾಗಿದೆ. ಒಂದೊಮ್ಮೆ ಅವರು ಟಿವಿ ಶೋ ಮುಂದುವರಿಸಿದ್ದೇ ಆದರೆ ಅವರ ಖಾತೆ ಮತ್ತು ನಟನಾ ವೃತ್ತಿ ನಡುವೆ ಹಿತಾಸಕ್ತಿ ಸಂಘರ್ಷ ಎದುರಾಗಲಿದೆ.

ಡಿಸಿಎಂ ಹುದ್ದೆಯ ಆಕಾಂಕ್ಷಿಯಾಗಿದ್ದ ಸಿಧುಗೆ ಲೋ ಪ್ರೊಫೈಲ್ ಸಚಿವ ಸ್ಥಾನ ನೀಡಿರುವುದೂ ಕೊಂಚ ಅಸಮಾಧಾನ ಹುಟ್ಟಿಸಿದೆ ಎನ್ನಲಾಗಿದೆ. ಪ್ರತೀ ಬಾರಿ ತನ್ನನ್ನ ವಿರೋಧಿಸುವವರಿಗೆ ಖಡಕ್ ತಿರುಗೇಟು ನೀಡುವ ಸಿಧು ಈ ಬಾರಿ ಸಿಎಂಗೆ ಯಾವ ಉತ್ತರ ನೀಡುತ್ತಾರೋ ಕಾದುನೋಡಬೇಕು.

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಏರ್‌ ಇಂಡಿಯಾ ವಿಮಾನ ದುರಂತದ ಬಳಿಕ 80 ವಿಮಾನ ಹಾರಾಟಗಳ ರದ್ದು

ಕರುಣೆಯಿಲ್ಲದೆ ಯುದ್ಧ ಮುಂದುವರೆಯುತ್ತದೆ: ಟ್ರಂಪ್‌ ವಾರ್ನಿಂಗ್‌ಗೆ ಇರಾನ್‌ ಡೊಂಟ್ ಕ್ಯಾರೇ

ಲ್ಯಾಂಡ್ ಆದ ಬಳಿಕ ತಾಂತ್ರಿಕ ದೋಷದಿಂದ 40ನಿಮಿಷ ವಿಮಾನದೊಳಗೆ ಸಿಲುಕಿಕೊಂಡ ಇಂಡಿಗೋ ಪ್ರಯಾಣಿಕರು

Ahmedabad Plane Crash: 190 ಶವಗಳ ಗುರುತು ಪತ್ತೆ, 159 ಮಂದಿ ಮೃತದೇಹ ಕುಟುಂಬಕ್ಕೆ ಹಸ್ತಾಂತರ

ಮುಖ್ಯಮಂತ್ರಿ ಕುರ್ಚಿ ಆಸೆಯನ್ನು ಮತ್ತೆ ಪರೋಕ್ಷವಾಗಿ ಬಿಚ್ಚಿಟ್ಟ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌

ಮುಂದಿನ ಸುದ್ದಿ
Show comments