Webdunia - Bharat's app for daily news and videos

Install App

ಕೊನೆಗೂ ಯಶಸ್ವಿಯಾಯ್ತು ಪ್ರಧಾನಿ ನರೇಂದ್ರ ಮೋದಿ ಸರ್ಜಿಕಲ್ ಸ್ಟ್ರೈಕ್

Webdunia
ಶನಿವಾರ, 3 ಡಿಸೆಂಬರ್ 2016 (21:48 IST)
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಕಪ್ಪು ಹಣ ಹೊರ ತರಲು ಮಾಡಿದ್ದ ನೋಟು ನಿಷೇಧ ಉಪಾಯ ಕೊನೆಗೂ ಫಲ ಕೊಟ್ಟಿದೆ. ತನ್ನ ಬಳಿ ಸಾವಿರಾರು ಕೋಟಿ ರೂ. ಕಪ್ಪು ಹಣವಿದೆ ಎಂದು ಘೋಷಿಸಿಕೊಂಡು ತಲೆ ಮರೆಸಿಕೊಂಡಿದ್ದ ಗುಜರಾತ್ ಉದ್ಯಮಿ ಮಹೇಶ್ ಶಾ ಈಗ ಪೊಲೀಸರ ಬಲೆಗೆ ಬಿದ್ದಿದ್ದಾನೆ.

ನೋಟು ನಿಷೇಧಿಸುವುದಕ್ಕೂ ಮೊದಲೇ ಪ್ರಧಾನಿ ದೇಶದಲ್ಲಿ ಕಪ್ಪು ಹಣ ಇಟ್ಟುಕೊಂಡವರು ಆಸ್ತಿ ಘೋಷಣೆ ಮಾಡಬೇಕು ಮತ್ತು ಕಪ್ಪು ಹಣಕ್ಕೆ ಸೆಪ್ಟೆಂಬರ್ 30 ರೊಳಗೆ ಸೂಕ್ತ ತೆರಿಗೆ ಕಟ್ಟುವಂತೆ ಗಡುವು ವಿಧಿಸಿದ್ದರು.

ಆದರೆ ಗುಜರಾತ್ ಮೂಲದ ಮಹೇಶ್ ತನ್ನ ಬಳಿ 13 ಸಾವಿರ ಕೋಟಿ ಕಪ್ಪು ಹಣವಿದೆ ಎಂದಿದ್ದನಷ್ಟೇ ಹೊರತು ಅದಕ್ಕೆ ಪಾವತಿಸಬೇಕಾದ 975 ಕೋಟಿ ರೂ. ತೆರಿಗೆ ಕಟ್ಟದೆ ತಲೆ ಮರೆಸಿಕೊಂಡಿದ್ದ. ಆದರೆ ನಿನ್ನೆ ದಿಡೀರ್ ಟಿವಿ ವಾಹಿನಿಯೊಂದರಲ್ಲಿ ಸಂದರ್ಶನ ನೀಡುವಾಗ ಪೊಲೀಸರು ವಾಹಿನಿ ಮೇಲೆ ದಾಳಿ ನಡೆಸಿದ್ದು, ಆತನನ್ನು ಬಂಧಿಸಿದ್ದಾರೆ.

ಬಂಧನದ ಬಳಿಕ ಮತ್ತೊಂದು ವರಸೆ ತೆಗೆಯುತ್ತಿರುವ ಉದ್ಯಮಿ ಇದು ತನ್ನ ಹಣವಲ್ಲ. ತಾನು ಕಪ್ಪು ಹಣವನ್ನು ಕಮಿಷನ್ ನ ಆಸೆಗೆ ವೈಟ್ ಮನಿ ಮಾಡುವ ಜಾಲಕ್ಕೆ ಸಿಲುಕಿ ತಪ್ಪು ಮಾಡಿದ್ದೇನೆ. ತನ್ನ ಬಳಿಯಿರುವ ಕಪ್ಪು ಹಣ ಪ್ರಭಾವಿ ವ್ಯಕ್ತಿಗಳದ್ದು ಎನ್ನುತ್ತಿದ್ದಾನೆ. ಇದರ ಹಿಂದಿರುವ ಮರ್ಮ ಪೊಲೀಸರ ತನಿಖೆಯಿಂದ ಬಯಲಾಗಲಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments