Webdunia - Bharat's app for daily news and videos

Install App

ಮೋದಿ ಗೆಲುವು ಮುಸ್ಲಿಮರು ಜಾತ್ಯಾತೀತರೆಂಬುದನ್ನು ತೋರಿಸುತ್ತದೆ : ಅಜಂ ಖಾನ್

Webdunia
ಮಂಗಳವಾರ, 20 ಮೇ 2014 (11:26 IST)
2014ರ ಲೋಕಸಭೆ ಚುನಾವಣೆಯಲ್ಲಿ ನರೇಂದ್ರ ಮೋದಿ ಅವರ ಅಭೂತಪೂರ್ಣ ಗೆಲುವಿಗೆ ಮುಸ್ಲಿಮರು ಸಹ ಕಾರಣರಾಗಿದ್ದಾರೆ, ಈ ಮೂಲಕ ಮುಸ್ಲಿಮರು ತಾವು ಜಾತ್ಯತೀತರು ಎಂಬುದನ್ನು ತೋರಿಸಿಕೊಟ್ಟಿದ್ದಾರೆ ಎಂದು ವಿವಾದಾತ್ಮಕ ಹೇಳಿಕೆಗಳ ಮೂಲಕ ಸದಾ ಗಮನ ಸೆಳೆಯುವ ಸಮಾಜವಾದಿ ಪಕ್ಷದ ನಾಯಕ ಅಜಂ ಖಾನ್ ಹೇಳಿದ್ದಾರೆ.  
 
ಕಾರ್ಗಿಲ್ ಯುದ್ಧದಲ್ಲಿ ಭಾರತ ಜಯಗಳಿಸಲು ಮುಸ್ಲಿಂ ಯೋಧರು ಕಾರಣ ಎಂಬ ಹೇಳಿಕೆ ನೀಡಿ ವಿವಾದಕ್ಕೆ ಗುರಿಯಾಗಿದ್ದ ಸಪಾ ನಾಯಕ ಅಜಂ ಖಾನ್, ಚುನಾವಣೆಯ ಸಮಯದಲ್ಲಿ ಮೋದಿ ಮತ್ತು ಬಿಜೆಪಿ ವಿರುದ್ಧ ಪದೇ ಪದೇ  ಪ್ರಚೋದನಕಾರಿ ಮಾತುಗಳನ್ನಾಡಿ ಚುನಾವಣಾ ಆಯೋಗದಿಂದ ಬಿಸಿ ಮುಟ್ಟಿಸಿ ಕೊಂಡಿದ್ದರು. ಅವರ ಮಾತುಗಳು ಸಾಮಾಜಿಕ ಸ್ವಾಸ್ಥ್ಯ ಕೆಡಿಸ ಬಹುದೆಂಬ ಕಾರಣದಿಂದ ಆಯೋಗ ಅವರ ಪ್ರಚಾರ ಸಭೆಗಳಿಗೆ ನಿಷೇಧ ಹೇರಿತ್ತು. 
 
ಲೋಕಸಭೆ ಚುನಾವಣೆಯಲ್ಲಿ ಮೋದಿಯನ್ನು ಸೋಲಿಸುವಂತೆ  ಅಲ್ಪಸಂಖ್ಯಾತ ಸಮುದಾಯಕ್ಕೆ ಮನವಿ ಸಲ್ಲಿಸಿದ್ದ ಖಾನ್, 2002 ಗೋಧ್ರಾ ಹಿಂಸಾಚಾರದ ಕುರಿತಂತೆ ಮೋದಿಯವರನ್ನು ಪದೇ ಪದೇ ಹೀಗಳೆಯುತ್ತಿದ್ದರು. ಒಮ್ಮೆ ಮೋದಿಯನ್ನು ದೂಷಿಸುತ್ತ "ಬಿಜೆಪಿ ಪ್ರಧಾನಿ ಅಭ್ಯರ್ಥಿ ನಾಯಿಮರಿಗಳ ಹಿರಿಯ ಸಹೋದರ" ಎಂದಿದ್ದರು. 
 
ಸೋಮವಾರ ಉತ್ತರಪ್ರದೇಶದಲ್ಲಿ ಮಾತನಾಡುತ್ತಿದ್ದ ಖಾನ್, ನರೇಂದ್ರ ಮೋದಿಯವರ ಗೆಲುವು ಭಾರತೀಯ ಮುಸ್ಲಿಮರು ಜಾತ್ಯತೀತರು ಎಂಬುದನ್ನು ತೋರಿಸಿಕೊಟ್ಟಿದೆ ಎಂದಿದ್ದಾರೆ.
 
"ಮುಸ್ಲಿಂ ಮತದಾರರು ಯಾರನ್ನು ಸೋಲಿಸ ಬೇಕೆಂಬ ರಾಜಕೀಯ ಅಜೆಂಡಾವನ್ನು ಹೊಂದಿರಲಿಲ್ಲ.  ಕಾರಣ,  ಸುಳ್ಳು ಭರವಸೆಗಳನ್ನು ನಂಬಿದ ಅವರು ಇಂತಹ ರಾಜಕೀಯ ಪಕ್ಷಕ್ಕೂ  ಬೆಂಬಲ ನೀಡಿದರು" ಎಂದು ಖಾನ್ ಅಭಿಪ್ರಾಯ ಪಟ್ಟಿದ್ದಾರೆ. 

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Hit And Run Case: ಅಮೆರಿಕದಲ್ಲಿ ಮುಂದಿನ ತಿಂಗಳು ಪದವಿ ಪಡೆಯಬೇಕಿದ್ದ ಗುಂಟೂರು ವಿದ್ಯಾರ್ಥಿನಿ ಸಾವು

ರಸ್ತೆ ಮಧ್ಯೆಯಲ್ಲಿ ಚೇರ್ ಮೇಲೆ ಕುಳಿತು ರೀಲ್ಸ್ ಹುಚ್ಚಾಟ ಮಾಡಿದವ ಅರೆಸ್ಟ್‌

Rahul Gandhi: ರೋಹಿತ್ ವೇಮುಲಾ ಕಾಯಿದೆ ಜಾರಿಗೊಳಿಸಲು ರಾಹುಲ್ ಗಾಂಧಿ ಪತ್ರ: ಯೆಸ್ ಬಾಸ್ ಎಂದ ಸಿದ್ದರಾಮಯ್ಯ

50 ಕೋಟಿ ಅಲ್ಲ ಲಕ್ಷಕ್ಕೂ ಬೆಲೆ ಬಾಳಲ್ಲ ಸತೀಶ್‌ ಖರೀದಿಸಿದ ನಾಯಿ, ED ದಾಳಿಯಲ್ಲಿ ಅಸಲಿಯತ್ತು ಬಯಲು

60ನೇ ವರ್ಷದಲ್ಲಿ ಹಸೆಮಣೆಯೇರಿದ ಪಶ್ಚಿಮ ಬಂಗಾಳದ ಬಿಜೆಪಿ ಘಟಕದ ಮಾಜಿ ಅಧ್ಯಕ್ಷ ದಿಲೀಪ್‌ ಘೋಷ್‌

Show comments