Select Your Language

Notifications

webdunia
webdunia
webdunia
webdunia

ಉತ್ತರಾಖಂಡ್ ಉಪಚುನಾವಣೆ ಫಲಿತಾಂಶ ಮೋದಿಗೆ ತಕ್ಕ ಪಾಠ ಕಲಿಸಿದೆ: ಕಾಂಗ್ರೆಸ್

ಉತ್ತರಾಖಂಡ್ ಉಪಚುನಾವಣೆ ಫಲಿತಾಂಶ ಮೋದಿಗೆ ತಕ್ಕ ಪಾಠ ಕಲಿಸಿದೆ: ಕಾಂಗ್ರೆಸ್
ನವದೆಹಲಿ , ಶನಿವಾರ, 26 ಜುಲೈ 2014 (18:40 IST)
ಉತ್ತರಾಖಂಡ್ ಉಪಚುನಾವಣೆ ಗೆಲುವಿನಿಂದ ಉಲ್ಲಸಿತಗೊಂಡಿರುವ ಕಾಂಗ್ರೆಸ್ ತಮ್ಮ ಗೆಲುವು ಎನ್‌ಡಿಎ ಸರಕಾರ ಅಧಿಕಾರಕ್ಕೇರಿದ 60 ದಿನಗಳಲ್ಲಿಯೇ ನರೇಂದ್ರ ಮೋದಿಯವರ ಸುಳ್ಳನ್ನು ತೆರೆದಿಟ್ಟಿದೆ ಎಂದು ಹೇಳಿದೆ. 
 
ಮುಖ್ಯಮಂತ್ರಿ ಹರೀಶ್ ರಾವತ್ ಭರ್ಜರಿ ಗೆಲುವಿನ ಹೊರತಾಗಿಯೂ ನಾವು ಬಿಜೆಪಿ ಪ್ರಾಬಲ್ಯವಿದ್ದ ಎರಡು ಕ್ಷೇತ್ರಗಳನ್ನು ಗೆಲ್ಲುವಲ್ಲಿ ಯಶಸ್ವಿಯಾದೆವು ಎಂದು ಪಕ್ಷದ ವಕ್ತಾರ ಪಿಸಿ ಚಾಕೋ ತಿಳಿಸಿದ್ದಾರೆ.
 
ಕಾಂಗ್ರೆಸ್ ಪಕ್ಷದ ಮೇಲೆ ವಿಶ್ವಾಸ ತೋರಿದ್ದಕ್ಕಾಗಿ ಜನರಿಗೆ ಅವರು ಧನ್ಯವಾದಗಳನ್ನರ್ಪಿಸಿದ್ದಾರೆ. ಡೆಹ್ರಾಡೂನ್‌ನಲ್ಲಿ ಪತ್ರಕರ್ತರ ಜತೆ ಮಾತನಾಡುತ್ತಿದ್ದ ರಾವತ್, ಈ ಗೆಲುವು ಪಕ್ಷಕ್ಕೆ ಮತದಾರರು ನೀಡಿದ ಆಶೀರ್ವಾದ ಎಂದಿದ್ದಾರೆ .    
 
ಉತ್ತರಾಖಂಡ್‌ನಲ್ಲಿ 3 ಕ್ಷೇತ್ರಗಳಿಗೆ ನಡೆದ ವಿಧಾನಸಭಾ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಎಲ್ಲ ಸ್ಥಾನಗಳನ್ನು ತನ್ನದಾಗಿಸಿಕೊಂಡಿದೆ. 

Share this Story:

Follow Webdunia kannada