Webdunia - Bharat's app for daily news and videos

Install App

ಮೋದಿ ವಾಜಪೇಯಿಯವರನ್ನು ಕೂಡ ಹೊರ ಹಾಕುತ್ತಿದ್ದರು : ರಾಹುಲ್ ಗಾಂಧಿ

Webdunia
ಸೋಮವಾರ, 21 ಏಪ್ರಿಲ್ 2014 (12:55 IST)
ಬಿಜೆಪಿಯ ಹಿರಿಯ ನಾಯಕ, ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ರಾಜಕೀಯ ಜೀವನದಲ್ಲಿ ಮುಂದುವರೆಯುತ್ತಿದ್ದಿದ್ದರೆ ಜಸ್ವಂತ್ ಸಿಂಗ್ ಹಾಗೂ ಆಡ್ವಾಣಿಯವರನ್ನು ಮೂಲೆಗುಂಪು ಮಾಡಿದ್ದಂತೆ ಮೋದಿಯವರು  ಅಟಲ್ ಬಿಹಾರಿ ವಾಜಪೇಯಿ ಅವರನ್ನು ಕೂಡ ಅದೇ ಸ್ಥಿತಿಗೆ ತಳ್ಳುತ್ತಿದ್ದರು ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಮೇಲೆ ಕಟುವಾದ ವಾಗ್ದಾಳಿ ಮಾಡಿದ್ದಾರೆ.

"ನನ್ನನ್ನು ದೇಶದ ಕಾವಲುಗಾರನನ್ನಾಗಿ ಮಾಡಿ ಎಂದು ಹೇಳಿಕೊಂಡಿದ್ದ ಮೋದಿ ಹೇಳಿಕೆಯನ್ನು ಪ್ರಸ್ತಾಪಿಸಿದ ಅವರು ಬಿಜೆಪಿಯ ಪ್ರಧಾನಿ ಅಭ್ಯರ್ಥಿ ಕೇವಲ ಉದ್ದಿಮೆದಾರರಿಗೆ ಮಾತ್ರ ಕಾವಲುಗಾರರು. ಪಕ್ಷದ ಹಿರಿಯ ನಾಯಕರನ್ನು  ಪದಚ್ಯುತಗೊಳಿಸಿರುವ ಅವರು ಕೇವಲ ಅದಾನಿಯನ್ನು ಮೇಲಕ್ಕೆ ತಂದಿದ್ದಾರೆ" ಎಂದು  ಆರೋಪಿಸಿದರು. 
 
"ಅವರು (ಮೋದಿ) ಗುಜರಾತ್‌ಲ್ಲಿ ಅಭಿವೃದ್ಧಿಯನ್ನು ತಂದಿದ್ದೇನೆ ಎಂದು ಹೇಳಿಕೊಳ್ಳುತ್ತಾರೆ. ಆದರೆ ಗುಜರಾತ್ ಒಬ್ಬ ವ್ಯಕ್ತಿಯಿಂದ ಬದಲಾವಣೆಯನ್ನು ಕಂಡಿಲ್ಲ. ಕಠಿಣ ಪರಿಶ್ರಮ ಮಾಡಿದ ಕಾರ್ಮಿಕರು ಮತ್ತು ಕೃಷಿಕರು ಗುಜರಾತ ರಾಜ್ಯವನ್ನು ಅಭಿವೃದ್ಧಿಪಡಿಸಿದ್ದಾರೆ" ಎಂದರು.

"ಅವರು ದೇಶವನ್ನು ನಿಯಂತ್ರಿಸುವ ಬೀಗದ ಕೈ ತಮ್ಮ ಕೈಯಲ್ಲಿ ತೆಗೆದುಕೊಳ್ಳಲು ಬಯಸುತ್ತಾರೆ. ಆದರೆ ಗುಜರಾತ್‌ಲ್ಲಿ ಆಗಿರುವುದೇನು? ಜನರು ಅವರಿಗೆ ಬೀಗದಕೈಯನ್ನು(ಅಧಿಕಾರ) ಕೊಟ್ಟರು. ಆದರೆ ಅವರು ಅದಾನಿ(ಉದ್ದಿಮೆದಾರ)ಯನ್ನು ಮೇಲಕ್ಕೆ ತಂದರು" ಎಂದು ರಾಹುಲ್ ಗುಡುಗಿದ್ದಾರೆ. 
 
"ನಮ್ಮ ಪೂರ್ವಜರು ಪಾಕಿಸ್ತಾನದಿಂದ ಇಲ್ಲಿಗೆ ವಲಸೆ ಬಂದರು ಮತ್ತು ತಮಗೆ ನೀಡಲ್ಪಟ್ಟ ಭೂಮಿಯನ್ನು ಫಲವತ್ತಾಗಿಸಲು ಕಠಿಣ ಪರಿಶ್ರಮ ಮತ್ತು ಪ್ರಯತ್ನವನ್ನು ಪಟ್ಟಿದ್ದಾರೆ ಎಂದು ಗುಜರಾತಿನ ಸಿಖ್ ಕೃಷಿಕರು ನನ್ನಲ್ಲಿ ಹೇಳಿಕೊಂಡಿದ್ದಾರೆ".
 
"ಈಗ ಗುಜರಾತ್ ಸರಕಾರದ ಅಧಿಕಾರಿಗಳು ಅವರನ್ನು ನೀವು ಹೊರಗಿನವರು, ರಾಜ್ಯವನ್ನು ಬಿಟ್ಟು ಹೋಗಿ ಹೇಳುತ್ತಿದ್ದಾರೆ. ಅದೇ ರೀತಿ ತಮ್ಮ ಪಕ್ಷದ ಹಿರಿಯ ಹಿರಿಯ ನಾಯಕರನ್ನು ದೂರಕ್ಕೆ ಸರಿಸಿದ್ದಾರೆ" ಎಂದು ರಾಹುಲ್ ಹೇಳಿದರು.
 
"ಅಡ್ವಾಣಿ ಮತ್ತು ಜಸ್ವಂತ್ ಸಿಂಗ್‌ರವನ್ನು ನೀವು ಹೊರಗಿನವರು, ಇಲ್ಲಿಂದ ಹೊರಟು ಹೋಗಿ ಎಂದು ಹೇಳಲಾಗಿದೆ. ಒಂದು ವೇಳೆ ಅಟಲ್ ಬಿಹಾರಿ ವಾಜಪೇಯಿ ಈಗ  ರಾಜಕೀಯ ಬದುಕಿನಲ್ಲಿ ಸಕ್ರಿಯರಾಗಿದ್ದರೆ ಅವರಿಗೂ ಇದೇ ಪರಿಸ್ಥಿತಿ ಸೃಷ್ಟಿಯಾಗುತ್ತಿತ್ತು" ಎಂದು ರಾಹುಲ್ ಅಭಿಪ್ರಾಯಪಟ್ಟಿದ್ದಾರೆ.   

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ರಾಜಕೀಯ ನಿವೃತ್ತಿ ಬಳಿಕ ಅಮಿತ್ ಶಾ ಏನು ಮಾಡ್ತಾರೆ: ಪ್ಲ್ಯಾನ್ ರಿವೀಲ್

ರಕ್ಷಣಾ ಸಚಿವ ರಾಜನಾಥ್ ಸಿಂಗ್‌ರನ್ನು ಭೇಟಿಯಾದ ಸಿದ್ದರಾಮಯ್ಯ, ಮೈಸೂರು ದಸರಾದ ಬಗ್ಗೆ ಮುಖ್ಯ ಚರ್ಚೆ

70 ಗಂಟೆ ಕೆಲಸ ಮಾಡಲು ರೆಡಿಯಾ: ನಾರಾಯಣ ಮೂರ್ತಿ ಹೇಳಿಕೆಯಿಂದ ಟ್ರೋಲ್‌ಗೊಳಗಾದ ರಿಷಿ ಸುನಕ್‌

ನಾನು ಪಕ್ಷಾಂತರ ಮಾಡಲ್ಲ, ನನ್ನದು ತಟಸ್ಥ ನಿಲುವು: ಜಿಟಿ ದೇವೇಗೌಡ

ದೇಶಕ್ಕೆ ಮೋದಿ, ರಾಜ್ಯಕ್ಕೆ ಕುಮಾರಸ್ವಾಮಿ ಸಿಎಂ ಆಗ್ಬೇಕು: ನಿಖಿಲ್ ಕುಮಾರಸ್ವಾಮಿ

Show comments