Select Your Language

Notifications

webdunia
webdunia
webdunia
webdunia

ಆತ್ಮಹತ್ಯೆಗೆ ಶರಣಾದ ರೈತರ ಕುಟುಂಬಗಳಿಗೆ 12.75 ಲಕ್ಷ ರೂ. ದೇಣಿಗೆ ನೀಡಿದ ನಾನಾ ಪಾಟೇಕರ್

ಆತ್ಮಹತ್ಯೆಗೆ ಶರಣಾದ ರೈತರ ಕುಟುಂಬಗಳಿಗೆ 12.75 ಲಕ್ಷ ರೂ. ದೇಣಿಗೆ ನೀಡಿದ ನಾನಾ ಪಾಟೇಕರ್
ನಾಸಿಕ್ , ಭಾನುವಾರ, 7 ಫೆಬ್ರವರಿ 2016 (15:45 IST)
ಬರಪೀಡಿತ ಜಿಲ್ಲೆಗಳಲ್ಲಿ ಆತ್ಮಹತ್ಯೆಗೆ ಶರಣಾದ 85 ಕುಟುಂಬಗಳಿಗೆ 12.75 ಲಕ್ಷ ರೂಪಾಯಿಗಳನ್ನು ಬಾಲಿವುಡ್ ನಟ ನಾನಾ ಪಾಟೇಕರ್ ಸಂಚಾಲಿತ ಎನ್‌ಜಿಓ ಸಂಸ್ಥೆ ದೇಣಿಗೆ ನೀಡಿದೆ.
 
ಬೆಳೆಹಾನಿ ಮತ್ತು ಸಾಲದ ಭಾಧೆಯಿಂದ ಕಂಗಾಲಾಗಿ ಆತ್ಮಹತ್ಯೆಗೆ ಶರಣಾಗಿದ್ದ 85 ರೈತರ ಕುಟುಂಬಗಳಿಗೆ ತಲಾ 15 ಸಾವಿರ ರೂಪಾಯಿಗಳ ಚೆಕ್ ವಿತರಿಸಿದರು. 
 
ಖ್ಯಾತ ಕಲಾವಿದ ನಾನಾ ಪಾಟೇಕರ್ ಮಾತನಾಡಿ, ಇತರರು ಕೂಡಾ ಬರಗಾಲ ಪೀಡಿತ ರೈತರ ಕುಟುಂಬಗಳ ಮಕ್ಕಳ ಶಿಕ್ಷಣಕಾಗಿ ತಮ್ಮಿಂದಾದ ಸಹಾಯವನ್ನು ಮಾಡುವಂತೆ ಮನವಿ ಮಾಡಿದರು.
 
ನಾಮ್ ಎನ್‌ಜಿಓ ಸಂಸ್ಥೆ ಮೆಡಿಕಲ್ ಕಾರ್ಡ್ ಕೂಡಾ ನೀಡುವುದನ್ನು ಆರಂಭಿಸಿದ್ದು, ನಾಮ್ ಕಾರ್ಡ್ ಹೊಂದಿದವರಿಗೆ ಉಚಿತ ವೈದ್ಯಕೀಯ ಸೇವೆ ನೀಡಲಾಗುವುದು ಎಂದು ತಿಳಿಸಿದ್ದಾರೆ.
 

Share this Story:

Follow Webdunia kannada