Select Your Language

Notifications

webdunia
webdunia
webdunia
webdunia

ನನ್ನ ಸಾರ್ವಜನಿಕ ಜೀವನ ನರಕದ ಸಮುದ್ರದಲ್ಲಿ ಈಜುತ್ತಿದ್ದಂತಾಗಿದೆ: ಜಯಲಲಿತಾ

ನನ್ನ ಸಾರ್ವಜನಿಕ ಜೀವನ ನರಕದ ಸಮುದ್ರದಲ್ಲಿ ಈಜುತ್ತಿದ್ದಂತಾಗಿದೆ: ಜಯಲಲಿತಾ
ನವದೆಹಲಿ , ಭಾನುವಾರ, 19 ಅಕ್ಟೋಬರ್ 2014 (17:02 IST)
ಬೆಂಗಳೂರು ಸೆಂಟ್ರಲ್ ಜೈಲಿನಿಂದ ಕಳೆದ ಶನಿವಾರ ಹೊರಬಂದ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ, ಎಐಡಿಎಂಕೆ ನಾಯಕಿ ಜಯಲಲಿತಾ ತಮ್ಮ ಸಾರ್ವಜನಿಕ ಜೀವನ "ನರಕದ ಸಮುದ್ರದಲ್ಲಿ ಈಜುತ್ತಿದ್ದಂತಾಗಿದೆ" ಎಂದು ಹೇಳಿದ್ದಾರೆ. 

ನಾನು ನನ್ನ ಬದುಕಿನುದ್ದಕ್ಕೂ ಅನೇಕ ಸವಾಲುಗಳನ್ನು ಎದುರಿಸಿದೆ ಮತ್ತು ಎಲ್ಲವುಗಳನ್ನು ಯಶಸ್ವಿಯಾಗಿ ದಾಟಿ ಮುಂದೆ ಬಂದೆ ಎಂದು ಅವರು ಹೇಳಿಕೊಂಡಿದ್ದಾರೆ. 
 
ಅಕ್ರಮ ಆಸ್ತಿ ಗಳಿಸಿದ ಆರೋಪ ಸಾಬೀತಾಗಿ ಜೈಲು ಸೇರಿದ್ದ ತಮಿಳುನಾಡು ಮುಖ್ಯಮಂತ್ರಿ, ಬೆಂಗಳೂರು ಸೆಂಟ್ರಲ್ ಜೈಲಿನಿಂದ ಹೊರಬಂದ ನಂತರ ನೀಡಿದ ಮೊದಲ ಹೇಳಿಕೆ ಇದಾಗಿದೆ. 
 
 ಜಯಲಲಿತಾ, ತನ್ನಆಪ್ತ ಸಖಿ ಶಶಿಕಲಾ ನಟರಾಜನ್ ಮತ್ತು ಇತರ ಇಬ್ಬರೊಂದಿಗೆ 21 ದಿನಗಳ ಕಾಲ ಜೈಲಿನಲ್ಲಿದ್ದರು . ಕಳೆದ ಶನಿವಾರ ಮಧ್ಯಾಹ್ನ ಬಿಡುಗಡೆಯಾದ ಅವರನ್ನು, ತಮಿಳುನಾಡು ಮುಖ್ಯಮಂತ್ರಿ ಒ ಪನ್ನೀರ್ ಸೆಲ್ವಂ ಮತ್ತು ಇತರ  ನಾಯಕರು ಸ್ವಾಗತಿಸಿದರು.
 
 ಕರ್ನಾಟಕ ಹೈಕೋರ್ಟ್ ಜಾಮೀನು ನೀಡಲು ನಿರಾಕರಿಸಿದ ನಂತರ ಎಐಎಡಿಎಂಕೆ ನಾಯಕಿ ಸುಪ್ರೀಂಕೋರ್ಟ್ ಮೊರೆ ಹೋಗಿದ್ದರು. 

Share this Story:

Follow Webdunia kannada