Webdunia - Bharat's app for daily news and videos

Install App

ಮುಸ್ಲಿಮರೇ ಹೆಣ ದಫನ ಮಾಡಬೇಡ್ರಿ ಎನ್ನುತ್ತಿದ್ದಾರೆ ಸಾಕ್ಷಿ ಮಹಾರಾಜ್

Webdunia
ಮಂಗಳವಾರ, 28 ಫೆಬ್ರವರಿ 2017 (14:14 IST)
ಬಿಜೆಪಿ ಸಂಸದ ಸಾಕ್ಷಿ ಮಹಾರಾಜ್  ವಿವಾದಾತ್ಮಕ ಹೇಳಿಕೆಗಳನ್ನು ನೀಡುವುದು ಹೊಸದೇನಲ್ಲ. ಆದರೆ ಈ ಬಾರಿ ಅವರು ನೀಡಿರುವ ಹೇಳಿಕೆ ಬಹುದೊಡ್ಡ ವಿವಾದವನ್ನು ಸೃಷ್ಟಿಸುವುದಂತೂ ಸತ್ಯ. 
ದೇಶದಲ್ಲಿ ಸ್ಥಳದ ಕೊರತೆಯನ್ನು ಗಮನದಲ್ಲಿಟ್ಟುಕೊಂಡು ಯಾವುದೇ ಧರ್ಮ- ಸಂಪ್ರದಾಯದ ಜನರಿಗೆ ಶವವನ್ನು ಹೂಳುವ ಅನುಮತಿ ನೀಡಬಾರದು. ಬದಲಾಗಿ ಶವಗಳನ್ನು ಸುಡಬೇಕು ಎನ್ನುವುದರ ಮೂಲಕ ಸಾಕ್ಷಿ ಬಹುದೊಡ್ಡ ವಿವಾದವನ್ನು ಮೈಗೆಳೆದುಕೊಂಡಿದ್ದಾರೆ.
 
ದೇಶದಲ್ಲಿ ಎರಡುವರೆ ಕೋಟಿ ಸಾಧುಗಳಿದ್ದಾರೆ. ಪ್ರತಿಯೊಬ್ಬ ಸಮಾಧಿಗೆ ಎಷ್ಟು ಜಾಗ ಬೇಕಾಗಬಹುದು. ಜತೆಗೆ 20ಕೋಟಿ ಮುಸ್ಲಿಂ ಸಮುದಾಯದವರಿದ್ದಾರೆ. ಅವರಿಗೆಲ್ಲರಿಗೂ ಸ್ಮಶಾನ ಬೇಕೆಂದರೆ ದೇಶದಲ್ಲಿ ಭೂಮಿ ಹೇಗೆ ಉಳಿಯಲು ಸಾಧ್ಯ ಎಂದವರು ಪ್ರಶ್ನಿಸಿದ್ದಾರೆ.
 
ಸಾಧು ಅವರ ಯೋಚನಾ ಲಹರಿ ಅಲ್ಲಿಗೆ ನಿಂತಿಲ್ಲ. ನೀವದನ್ನು ಕಬ್ರಿಸ್ತಾನ್ ಎನ್ನಿ ಅಥವಾ ಸ್ಮಶಾನ ಎನ್ನಿ. ಎಲ್ಲ ಶವಗಳನ್ನು ಸುಡಬೇಕು. ಯಾವುದೇ ಶವವನ್ನು ಹೂಳಲು ಅನುಮತಿ ನೀಡಬಾರದು ಎಂದು ಉನ್ನಾವೋ ಸಂಸದ ಆಗ್ರಹಿಸಿದ್ದಾರೆ. 
 
ಈ ಹಿಂದೆ ಸಹ ಅನೇಕ ಬಾರಿ ಅವರು ಮುಸ್ಲಿಂ ಸಮುದಾಯದವರ ವಿರುದ್ಧ ಹೇಳಿಕೆ ನೀಡಿದ್ದರು. 4 ಪತ್ನಿ, 40ಮಕ್ಕಳನ್ನು ಹೊಂದುವ ಮುಸ್ಲಿಂ ಸಮುದಾಯದವರೇ ನಮ್ಮ ದೇಶದ ಜನಸಂಖ್ಯೆ ಹೆಚ್ಚಾಗಲು ಕಾರಣ. ಹಿಂದೂಗಳಲ್ಲ ಎಂದು ಹೇಳುವುದರ ಮೂಲಕ ಚುನಾವಣಾ ಆಯೋಗದಿಂದ ನೋಟಿಸ್ ಸಹ ಪಡೆದಿದ್ದರು
 

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments