Webdunia - Bharat's app for daily news and videos

Install App

ಆಕಳನ್ನು ಉಳಿಸಲು 30 ಅಡಿ ಆಳದ ಬಾವಿಗೆ ಹಾರಿದ ಮುಸ್ಲಿಂ ಯುವಕ

Webdunia
ಸೋಮವಾರ, 5 ಅಕ್ಟೋಬರ್ 2015 (15:02 IST)
ದೇಶಾದ್ಯಂತ ಗೋಮಾಂಸ ವಿವಾದ ಅಲ್ಲೋಲ ಕಲ್ಲೋಲ ಸೃಷ್ಟಿಸಿರುವ ಮಧ್ಯೆಯೇ ಮುಸ್ಲಿಂ ಸಮುದಾಯದ ವ್ಯಕ್ತಿಯೊಬ್ಬ ತನ್ನ ಜೀವದ ಹಂಗು ತೊರೆದು ಬಾವಿಗೆ ಬಿದ್ದ ಆಕಳನ್ನು ರಕ್ಷಿಸಿದ ಘಟನೆ ವರದಿಯಾಗಿದೆ.
 
ಅಕಸ್ಮಿಕವಾಗಿ ಬಾವಿಗೆ ಬಿದ್ದ ಆಕಳನ್ನು 20 ವರ್ಷ ವಯಸ್ಸಿನ ಮುಸ್ಲಿಂ ಸಮುದಾಯದ ವ್ಯಕ್ತಿಯೊಬ್ಬ ಬದುಕುಳಿಸಿದ್ದಾನೆ ಎಂದು ಮೂಲಗಳು ತಿಳಿಸಿವೆ.
 
ಬಾವಿಯೊಳಗೆ ಬಿದ್ದ ಆಕಳನ್ನು ನೋಡಲು ನೂರಾರು ಜನರು ಬಾವಿಯ ದಡದ ಮೇಲೆ ನಿಂತು ನೋಡುತ್ತಿದ್ದರು. ಆದರೆ, ಆಕಳನ್ನು ಹೇಗಾದರು ಮಾಡಿ ಬದುಕಿಸಬೇಕು ಎನ್ನುವ ಉದ್ದೇಶದಿಂದ ನಾನು ಬಾವಿಗೆ ಹಾರಿ, ಆಕಳನ್ನು ಹಿಡಿದು ಕ್ರೇನ್ ಸಹಾಯದಿಂದ  ಮೇಲಕ್ಕೇತ್ತುವಲ್ಲಿ ಯಶಸ್ವಿಯಾಗಿದ್ದೇವೆ ಎಂದು ಮೊಹಮ್ಮದ್ ಝಾಕಿ ತಿಳಿಸಿದ್ದಾರೆ. 
 
ಆಕಳು ಜೀವನ್ಮರಣದ ಹೋರಾಟದಲ್ಲಿರುವುದನ್ನು ನೋಡಿ, ನಾನು ನನ್ನ ಜೀವವನ್ನು ಸಂಕಷ್ಟಕ್ಕೆ ಸಿಲುಕಿಸಿದೆ. ಆಕಳು ನನಗೆ ಎರಡು ಬಾರಿ ಒದ್ದರು ನಾನು ಬಿಡಲಿಲ್ಲ ಎಂದು ಹೇಳಿದ್ದಾರೆ. 
 
ಜನರು ಮೊದಲು ಆಕಳನ್ನು ಮೇಲೆ ಕಳುಹಿಸುವಂತೆ ಒತ್ತಾಯಿಸುತ್ತಿದ್ದರು. ಆದರೆ, ನಾನು ಆಕಳೊಂದಿಗೆ ಹೋಗಲು ತೀರ್ಮಾನಿಸಿದೆ. ಅದರಂತೆ, ಕ್ರೇನ್ ಸಹಾಯದಿಂದ ಎತ್ತುವಾಗ ಆಕಳು ಸಮತೋಲನ ತಪ್ಪಿ ನನ್ನ ಮೇಲೆ ಬಿದ್ದಿತು ಎಂದು ಮೊಹಮ್ಮದ್ ತಿಳಿಸಿದ್ದಾರೆ.  

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments