Webdunia - Bharat's app for daily news and videos

Install App

ಮಹಿಳಾ ಕೈದಿಯ ಗುಪ್ತಾಂಗದಲ್ಲಿ ಲಾಠಿ ತೂರಿದ ಜೈಲು ಸಿಬ್ಬಂದಿ

Webdunia
ಭಾನುವಾರ, 2 ಜುಲೈ 2017 (16:28 IST)
ಬೈಕುಲ್ಲಾ ಜೈಲಿನ ಅಧಿಕಾರಿಗಳು ಚಿತ್ರಹಿಂಸೆ ನೀಡಿದ್ದಲ್ಲದೇ ಗುಪ್ತಾಂಗದಲ್ಲಿ ಲಾಠಿ ತೂರಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿಳಾ ಕೈದಿ ಸಾವನ್ನಪ್ಪಿದ್ದಾಳೆ 
 
ಬೆಳಗಿನ ಉಪಹಾರದಲ್ಲಿ ಎರಡು ಮೊಟ್ಟೆ ಮತ್ತು ಐದು ಬ್ರೆಡ್ ತುಣುಕುಗಳು ಕಾಣೆಯಾಗಿವೆ ಎಂದು ಮಹಿಳಾ ಕೈದಿ ಮಂಜುಳಾ ಶೇಟೆ, ಹಿರಿಯ ಅಧಿಕಾರಿಗಳಿಗೆ ದೂರು ನೀಡಿದ್ದಳು ಎನ್ನಲಾಗಿದೆ. ಇದರಿಂದ ಆಕ್ರೋಶಗೊಂಡ ಜೈಲಿನ ಅಧಿಕಾರಿಗಳು ಆಕೆಯ ಮೇಲೆ ದೌರ್ಜನ್ಯ ಎಸಗಿದ್ದರು ಎಂದು ಮೂಲಗಳು ತಿಳಿಸಿವೆ.
 
ಪ್ರತ್ಯಕ್ಷ ದರ್ಶಿಯ ಹೇಳಿಕೆಯಿಂದ ಜೈಲು ಅಧಿಕಾರಿಗಳ ಅಮಾನವೀಯ ನಡವಳಿಕೆ ಬಹಿರಂಗವಾಗಿದೆ. ಮಂಜುಳಾ ಸಾವಿಗೆ ಸಂಬಂಧಿಸಿದಂತೆ ಆರು ಮಂದಿ ಜೈಲು ಸಿಬ್ಬಂದಿಯನ್ನು ಬಂಧಿಸಲಾಗಿದೆ. ಮಂಜುಳಾ ಸಾವಿನಿಂದ ಆಕ್ರೋಶಗೊಂಡ ಕೈದಿಗಳು ಜೈಲಿನಲ್ಲಿ ಭಾರಿ ಬಂಡಾಯ ತೋರಿದ್ದರು. ಪುತ್ರಿ ಶೀನಾ ಬೋರಾ ಹತ್ಯೆಯಲ್ಲಿ ಆರೋಪಿಯಾಗಿರುವ ಇಂದ್ರಾಣಿ ಮುಖರ್ಜಿ ವಿರುದ್ಧ ಬಂಡಾಯಕ್ಕೆ ಪ್ರೇರಣೆ ನೀಡಿದ್ದಾರೆ ಎಂದು ದೂರು ದಾಖಲಿಸಲಾಗಿತ್ತು.
 
ಬೆಳಗಿನ ಉಪಹಾರದಲ್ಲಿ ಎರಡು ಮೊಟ್ಟೆ ಮತ್ತು ಐದು ಬ್ರೆಡ್ ತುಣುಕುಗಳು ಕಾಣೆಯಾಗಿವೆ ಎಂದು ಮಂಜುಳಾ ಆರೋಪಿಸಿದ್ದರಿಂದ ಆಕ್ರೋಶಗೊಂಡು ಜೈಲಿನ ಅಧಿಕಾರಿ ಮನೀಶಾ ಪೊಕಾರ್ಕರ್‌ ಆಕೆಯಮನ್ನು ತಮ್ಮ ಚೇಂಬರ್‌ಗೆ ಕರೆಸಿಕೊಂಡು ಹಲ್ಲೆ ನಡೆಸಿದ್ದಾರೆ. 
 
ಜೈಲಿನ ಕೆಲ ಮಹಿಳಾ ಪೇದೆಗಳು, ಮಂಜುಳಾ ಇರುವ ಬ್ಯಾರೆಕ್‌ಗೆ ನುಗ್ಗಿದ ಬಿಂದು ನಾಯಿಕಾಡೆ, ವಸೀಮಾ ಶೇಖ್, ಶೀತಲ್ ಶೇಗಾಂವಕರ್, ಸುರೇಕಾ ಗುಲ್ವೆ ಮತ್ತು ಆರತಿ ಶಿಂಗಾಣೆ ಮಂಜುಳಾರನ್ನು ನಗ್ನಗೊಳಿಸಿ ಹಲ್ಲೆ ನಡೆಸಿದ್ದಾರೆ ಎಂದು ಪ್ರತ್ಯಕ್ಷದರ್ಶಿ ಮೂಲಗಳು ತಿಳಿಸಿವೆ.
 
ಜೈಲಿನ ಮಹಿಳಾ ಪೇದೆಗಳಾದ ಬಿಂದು ಮತ್ತು ಸುರೇಖಾ ಮಂಜುಳಾರ ಎರಡು ಕಾಲುಗಳನ್ನು ಅಗಲಿಸಿ ಹಿಡಿದಾಗ ವಸೀಮಾ ಎನ್ನುವ ಮಹಿಳಾ ಪೇದೆ ಆಕೆಯ ಗುಪ್ತಾಂಗದಲ್ಲಿ ಲಾಠಿ ತೂರಿದ್ದಳು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
 
ಗುಪ್ತಾಂಗದಿಂದ ರಕ್ತ ಸೋರುತ್ತಿದ್ದರೂ ಜೈಲು ಸಿಬ್ಬಂದಿ ಕ್ಯಾರೆ ಎನ್ನಲಿಲ್ಲ. ಆದರೆ, ಆಕೆ ಮೂರ್ಛೆ ಹೋದ ನಂತರ ಜೆಜೆ ಆಸ್ಪತ್ರೆಗೆ ದಾಖಲಿಸಲಾಯಿತು. ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮಂಜುಳಾ ಸಾವನ್ನಪ್ಪಿದ್ದಾಳೆ ಎಂದು ಮೂಲಗಳು ತಿಳಿಸಿವೆ.
 
ಜೈಲಿನ ಆರು ಮಹಿಳಾ ಪೇದೆಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು ತನಿಖೆ ಮುಂದುವರಿದಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಭಾರತೀಯ ಮುಸ್ಲಿಮರು ಮತ್ತು ಹಿಂದೂಗಳು ನಡುವೆ ಬೆಂಕಿ ಹೊತ್ತಿಸಲು ಪಾಕ್‌ನಿಂದ ಪ್ರಯತ್ನ: ಅಸಾದುದ್ದೀನ್ ಓವೈಸಿ

ತಕ್ಷಣದ ಕದನ ವಿರಾಮಕ್ಕೆ ಭಾರತ, ಪಾಕಿಸ್ತಾನ ಒಪ್ಪಿಗೆ: ಮಹತ್ವದ ಪೋಸ್ಟ್ ಹಂಚಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್

ರಾಜ್ಯದಲ್ಲಿ ಸುಳ್ಳು ಸುದ್ದಿ ಹರಡುವವರ ವಿರುದ್ಧ ಕಠಿಣ ಕ್ರಮ: ಸಿಎಂ ಸಿದ್ದರಾಮಯ್ಯ

ಟಿವಿ ಕಾರ್ಯಕ್ರಮಗಳಲ್ಲಿ ಸೈರನ್ ಮೊಳಗಿಸದಂತೆ ಕೇಂದ್ರ ಸರ್ಕಾರ ನಿರ್ಬಂಧ

Operation Sindoor: ಬೆಟ್ಟಿಂಗ್ ವೇಳೆ ಪಾಕಿಸ್ತಾನ ಪರ ಕೂಗಿದವ ಅರೆಸ್ಟ್‌, ಆಗಿದ್ದೇನು ಗೊತ್ತಾ

ಮುಂದಿನ ಸುದ್ದಿ
Show comments