Select Your Language

Notifications

webdunia
webdunia
webdunia
webdunia

ಇನ್‌ಸ್ಪೆಕ್ಟರ್‌ನನ್ನು ಕೊಂದು ಸಾವಿಗೆ ಶರಣಾದ ಎಎಸ್‌ಐ

ಇನ್‌ಸ್ಪೆಕ್ಟರ್‌ನನ್ನು ಕೊಂದು ಸಾವಿಗೆ ಶರಣಾದ ಎಎಸ್‌ಐ
ಮುಂಬೈ , ಭಾನುವಾರ, 3 ಮೇ 2015 (12:09 IST)
ತನ್ನ ಮೇಲಾಧಿಕಾರಿಯನ್ನು ಗುಂಡಿಟ್ಟು ಕೊಂದ ಪೊಲೀಸ್ ಅಧಿಕಾರಿಯೊಬ್ಬ ನಂತರ ತಾನೂ ಗುಂಡಿಟ್ಟುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಆಘಾತಕಾರಿ ಘಟನೆ ಮುಂಬೈನಲ್ಲಿ ನಡೆದಿದೆ.

ವೊಕೋಲಾ ಠಾಣೆಯ ಪೊಲೀಸ್ ಇನ್‌ಸ್ಪೆಕ್ಟರ್ ವಿಲಾಸ್ ಜೋಷಿ ಅವರ ಮೇಲೆ ಮೂರು ಸುತ್ತು ಗುಂಡು ಹಾರಿಸಿದ ಅಸಿಸ್ಟೆಂಟ್ ಸಬ್‌ಇನ್‌ಸ್ಪೆಕ್ಟರ್ ದಿಲೀಪ್ ಶಿರ್ಕೆ ನಂತರ ತಾನು ಕೂಡ ಗುಂಡು ಹಾರಿಸಿಕೊಂಡು ಜೀವ ಕಳೆದುಕೊಂಡಿದ್ದಾನೆ.
 
ತೀವೃ ಗಾಯಗೊಂಡಿದ್ದ ವಿಲಾಸ್ ಜೋಷಿಯವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಿತಾದರೂ ಅಪಾರ ಪ್ರಮಾಣದ ರಕ್ತ ಹೋಗಿದ್ದರಿಂದ ರಕ್ತದೊತ್ತಡ ಕಡಿಮೆಯಾಗಿ ಮಧ್ಯರಾತ್ರಿ ಅವರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.
 
ಶನಿವಾರ ಬೆಳಗ್ಗೆ ಎಎಸ್ಐ ದಿಲೀಪ್ ಶಿರ್ಕೆ ಡ್ಯೂಟಿಗೆ ಹಾಜರಾಗಿರಲಿಲ್ಲ. ಸಂಜೆ ಬಂದ ದಿಲೀಪ್ ಮತ್ತು ಜೋಷಿ ನಡುವೆ ಮಾತಿನ ಚಕಮಕಿ ನಡೆದು, ಅದು ತೀವೃತೆಗೆ ತೆರಳಿ ದಿಲೀಪ್ ಸರ್ವಿಸ್ ರಿವಾಲ್ವರ್‌ನಿಂದ ಇನ್ಸ್‌ಪೆಕ್ಟರ್‌ಗೆ ಗುಂಡಿಕ್ಕಿ, ಬಳಿಕ ತಾನೂ ಗುಂಡು ಹಾರಿಸಿಕೊಂಡಿದ್ದಾನೆ ಎಂದು ತಿಳಿದು ಬಂದಿದೆ.

Share this Story:

Follow Webdunia kannada