Webdunia - Bharat's app for daily news and videos

Install App

ಸಂಸದ ವೇತನ ಹೆಚ್ಚಳ; ಬಡವ ನೀ ಬಡವನಾಗಿಯೇ ಇರು!

Webdunia
ಗುರುವಾರ, 3 ನವೆಂಬರ್ 2016 (10:05 IST)
ನವದೆಹಲಿ: 'ಪ್ರಜೆಗಳು ಒಪ್ಪತ್ತಿನ ಕೂಳಿಲ್ಲದೆ ಬಿದ್ದಿರಲಿ, ಆಳುವವರು ಮಾತ್ರ ಸುಖದ ಸುಪತ್ತಿಗೆಯಲ್ಲಿ ತೇಲಾಡುತ್ತಿರಬೇಕು' ಎನ್ನುವ ಕುಹುಕದ ಮಾತುಗಳು ರಾಷ್ಟ್ರಾದ್ಯಂತ ಕೇಳಿಬರುತ್ತಿದೆ.

ಕಾರಣ ಸಂಸದರ ವೇತನ ಒಮ್ಮಿಂದೊಮ್ಮೆಲೆ ದಿಢೀರ ಎಂದು ಶೆ. 100 ರಷ್ಟು ಹೆಚ್ಚಳವಾಗಿದ್ದು. ಸಂಸದರ ವೇತನ ಶೇ.100ರಷ್ಟು ಹೆಚ್ಚಿಸಲು ಕೇಂದ್ರ ಸರ್ಕಾರ ನಿರ್ಧರಿಸಿರುವುದರಿಂದ ಅವರ ಮೂಲ ವೇತನ 50 ಸಾವಿರ ರೂ.ಗಳಿಂದ 1 ಲಕ್ಷಕ್ಕೆ ಏರಿಕೆಯಾಗಲಿದೆ. ಬಿಜೆಪಿ ಸಂಸದ ಯೋಗಿ ಆದಿತ್ಯನಾಥ್ ಅವರ  ಅಧ್ಯಕ್ಷತೆಯಲ್ಲಿ  ಸಂಸದರ  ವೇತನಗಳ ಹಾಗೂ ಭತ್ಯೆಗಳ ಜಂಟಿ ಸಮಿತಿ ವರದಿ ತಯಾರಿಸಿ ವೇತನ ಹೆಚ್ಚಳಕ್ಕೆ ಶಿಫಾರಸ್ಸು ಮಾಡಿತ್ತು. ಅದರನ್ವಯ ಪ್ರಧಾನ ಮಂತ್ರಿಯವರ ಸಚಿವಾಲಯ ವೇತನ ಹೆಚ್ಚಳದ ನಿರ್ಧಾರ ಕೈಗೊಂಡಿದೆ. ಇತ್ತೀಚಿಗಷ್ಟೆ ಕೇಂದ್ರ ಸರಕಾರ ರಾಷ್ಟ್ರಪತಿ, ಉಪರಾಷ್ಟ್ರಪತಿ ಹಾಗೂ ರಾಜ್ಯಪಾಲರ ವೇತನವನ್ನು ಸಹ ದುಪ್ಪಟ್ಟು ಮಾಡಿತ್ತು.
 
ಸಂಸದರೆಂದರೆ ಅವರ ಖರ್ಚು, ವೆಚ್ಚ ಹೆಚ್ಚಾಗಿಯೇ ಇರುತ್ತದೆ. ಹಾಗಂತ ತಮಗೆ ಎಷ್ಟು ಬೇಕೋ ಅಷ್ಟು ವೇತನ ಹೆಚ್ಚಳ ಮಾಡಿಕೊಳ್ಳಬಹುದಾ? ಚುನಾಯಿತ ಪ್ರತಿನಿಧಿ ಎಂದ ಮೇಲೆ ಏನೂ ಮಾಡಿದರೂ ನಡೆಯುತ್ತವೆಯೇ? ಜನರಿಂದ ಮತ ಪಡೆದು ಆಯ್ಕೆಯಾದ ಜನಪ್ರತಿನಿಧಿಗಳು ಪ್ರಜಾಪ್ರಭುತ್ವವನ್ನೆ ತಮ್ಮ ಸ್ವಾರ್ಥಕ್ಕೆ ಬಳಸಿಕೊಳ್ಳುತ್ತಿದ್ದಾರೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
 
ದಿನ ಬೆಳಗಾದರೆ ನೂರಾರು ಸಂಘಟನೆಗಳು ಬೀದಿಗೆ ಬಂದು ವಿವಿಧ ಬೇಡಿಕೆ ಈಡೇರಿಕೆ ಒತ್ತಾಯಿಸುತ್ತವೆ. ಪ್ರಾಮಾಣಿಕವಾಗಿ ಬೆವರು ಸುರಿಸಿ ದುಡಿದ ಕಾರ್ಮಿಕನಿಗೆ ಕಾನೂನು ಬದ್ಧವಾಗಿ ದೊರೆಯಬೇಕಾದ ಇಪಿಎಫ್ ಹಣವನ್ನೂ ಕೊಡದೆ ಕಂಪನಿಗಳು ಮೋಸ ಮಾಡುತ್ತವೆ. ಒಪ್ಪತ್ತಿನ ಊಟ ಇಲ್ಲದ ಸಾವಿರಾರು ಕುಟುಂಬ ರಸ್ತೆಗೆ ಬೀಳುತ್ತಿವೆ. ಇವೆಲ್ಲ ಜನಪ್ರತಿನಿಧಿಯಾದವರ ಗಮನಕ್ಕೆ ಬಂದಿರುವ ಸಂಗತಿಗಳೇ. ಆದರೂ ಈವರೆಗೆ ಅವರ ಕುರಿತು ಯಾರೊಬ್ಬರೂ ಧ್ವನಿ ಎತ್ತುತ್ತಿಲ್ಲ. ಆದರೆ, ಈ ಬಡಪಾಯಿಗಳೇ ತುಂಬಿದ ತೆರಿಗೆ ಹಣವನ್ನು ಬೇಕಾಬಿಟ್ಟಿಯಾಗಿ ವೇತನ ರೂಪದಲ್ಲಿ ಪಡೆದು ಬಡ ಸಮುದಾಯವನ್ನು ತುಳಿಯುತ್ತಿದ್ದಾರೆ ಎನ್ನುವುದು ಪ್ರಜ್ಞಾವಂತರ ಮಾತು.
 
ಚಿಕ್ಕ ಚಿಕ್ಕ ವಿಷಯಕ್ಕೆ ಒಂದುಲ್ಲೊಂದು ಪಕ್ಷದವರು ಪ್ರತಿಭಟನೆ ನಡೆಸುತ್ತಾರೆ. ಆದರೆ ಬಿಜೆಪಿ ಸಂಸದರು ಸಂಸದರ ವೇತನ ಹೆಚ್ಚಳದ ಶಿಫಾರಸ್ಸು ಮಾಡಿರುವ ಕುರಿತು ಯಾವೊಂದು ಪಕ್ಷದಿಂದಲೂ ವಿರೋಧದ ಮಾತು ಹೊರ ಬರುತ್ತಿಲ್ಲ. ಯಾಕೆಂದರೆ, ಎಲ್ಲ ಪಕ್ಷದಲ್ಲಿಯೂ ಸಂಸದರು ಇದ್ದಾರೆ‌. ಅವರೆಲ್ಲರೂ ಈ ವೇತನ ಹೆಚ್ಚಳಕ್ಕೆ ಒಳಗಾಗುವವರೇ. ಹೀಗಿದ್ದಾಗ ಅವರ್ಯಾಕೆ ಸಾರ್ವಜನಿಕರ ಬೊಕ್ಕಸ ಬರಿದಾಗುತ್ತದೆ ಎನ್ನುತ್ತಾರೆ! ಅಲ್ಲವೇ?

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 
 

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

2029 ರಲ್ಲಿ ಕೇಂದ್ರದಲ್ಲಿ ನಾವು ಬಂದಾಗ ಬಿಜೆಪಿಯವರನ್ನು ತಿಹಾರ್ ಜೈಲಿಗೆ ಹಾಕ್ತೀವಿ: ಪ್ರದೀಪ್ ಈಶ್ವರ್

ಸಂವಿಧಾನಕ್ಕೆ ಅಪಚಾರ ಮಾಡಿದ ಪಕ್ಷ ಎಂದರೆ ಕಾಂಗ್ರೆಸ್: ಛಲವಾದಿ ನಾರಾಯಣಸ್ವಾಮಿ

5 ವರ್ಷ ನಾನೇ ಸಿಎಂ ಎಂದ ಸಿದ್ದರಾಮಯ್ಯ: ಲೈಫ್ ಟೈಂ ನಾನೇ ಎನ್ನಿ ಎಂದ ಡಿಕೆಶಿ ಫ್ಯಾನ್ಸ್

ರಾಹುಲ್ ಗಾಂಧಿ ಭೇಟಿಗೆ ಮುನ್ನ ನಾನೇ ಸಿಎಂ ಎಂದು ಘರ್ಜಿಸಿದ ಸಿದ್ದರಾಮಯ್ಯ

ಆ್ಯಪ್ ಮೂಲಕ ಆನ್‌-ಡಿಮ್ಯಾಂಡ್ ಇಂಟ್ರಾಸಿಟಿ ಶಿಪ್ಪಿಂಗ್ ಸೇವೆ ಆರಂಭಿಸಿದ ಡೆಲಿವರಿ

ಮುಂದಿನ ಸುದ್ದಿ
Show comments