Webdunia - Bharat's app for daily news and videos

Install App

ನೆಹರುರನ್ನು ಹೊಗಳಿದ್ದ ಜಿಲ್ಲಾಧಿಕಾರಿಗೆ ಮಧ್ಯಪ್ರದೇಶ ಸರಕಾರದಿಂದ ನೋಟಿಸ್ ಜಾರಿ

Webdunia
ಮಂಗಳವಾರ, 31 ಮೇ 2016 (14:47 IST)
ಪ್ರಧಾನಮಂತ್ರಿ ನರೇಂದ್ರ ವಿರುದ್ಧ ಜನತೆ ಬದಲಾವಣೆ ತರಬೇಕು ಎಂದು ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿರುವ ಕುರಿತಂತೆ ವಿವರಣೆ ನೀಡಿ ಎಂದು ಬಾರ್ವಾನಿಯ ನಿರ್ಗಮಿತ ಜಿಲ್ಲಾಧಿಕಾರಿ ಐಎಎಸ್ ಅಧಿಕಾರಿ ಅಜಯ್ ಸಿಂಗ್ ಗಾಂಗ್ವರ್ ಅವರಿಗೆ ಮಧ್ಯಪ್ರದೇಶ ಸರಕಾರ ನೋಟಿಸ್ ಜಾರಿ ಮಾಡಿದೆ.
  
ಐಎಎಸ್ ಅಧಿಕಾರಿ ಅಜಯ್ ಸಿಂಗ್, ತಮ್ಮ ಫೇಸ್‌ಬುಕ್‌ನಲ್ಲಿ ಮಾಜಿ ಪ್ರಧಾನಿ ಜವಾಹರಲಾಲ್ ನೆಹರು ಅವರನ್ನು ಹೊಗಳಿ, ಕೇಸರಿಪಡೆಗಳನ್ನು ತೆಗಳಿದ ಹಿನ್ನೆಲೆಯಲ್ಲಿ ಮಧ್ಯಪ್ರದೇಶದಲ್ಲಿರುವ ಬಿಜೆಪಿ ಸರಕಾರ ಆಕ್ರೋಶಗೊಂಡು ನೋಟಿಸ್ ಜಾರಿ ಮಾಡಿದೆ.   
 
ನೆಹರು ಅವರನ್ನು ಹೊಗಳಿದ್ದಾರೆ ಎನ್ನುವ ಏಕೈಕ ಕಾರಣಕ್ಕೆ ಜಿಲ್ಲಾಧಿಕಾರಿ ಅಜಯ್ ಸಿಂಗ್ ಅವರನ್ನು ಸಚಿವಾಲಯದ ಉಪಕಾರ್ಯದರ್ಶಿಯಾಗಿ ವರ್ಗ ಮಾಡಿ ಸರಕಾರ ಆದೇಶ ಹೊರಡಿಸಿದೆ.
 
ಪ್ರಧಾನಿ ಮೋದಿ ವಿರುದ್ಧ ಜನಕ್ರಾಂತಿಯಾಗಬೇಕಾಗಿದೆ ಎನ್ನುವ ಫೇಸ್‌ಬುಕ್ ಪೋಸ್ಟ್‌ಗೆ ಅಜಯ್ ಸಿಂಗ್ ಲೈಕ್ ಮಾಡಿದ್ದರು ಎನ್ನಲಾಗಿದೆ.
 
ಫೇಸ್‌ಬುಕ್ ಪೋಸ್ಟ್‌ನಲ್ಲಿ 1947ರಲ್ಲಿ ಹಿಂದೂ ತಾಲಿಬಾನ್ ರಾಷ್ಟ್ರವಾಗಲು ಬಿಡಲಿಲ್ಲ ಎನ್ನುವುದು ನೆಹರು ತಪ್ಪು ಹೆಜ್ಜೆ, ಐಐಟಿ, ಇಸ್ರೋ, ಬಾರ್ಕ್, ಐಐಎಸ್‌ಬಿ, ಐಐಎಂ, ಬಿಎಚ್‌ಇಎಲ್, ಸ್ಟೀಲ್ ಪ್ಲಾಂಟ್, ಡ್ಯಾಮ್‌ಗಳು, ಥರ್ಮಲ್ ಪವರ್‌ ಕೇಂದ್ರಗಳನ್ನು ನಿರ್ಮಿಸಿದ್ದು ನೆಹರು ಮಾಡಿದ ತಪ್ಪಾಗಿದೆ ಎಂದು ಬರೆದು ಪೋಸ್ಟ್ ಮಾಡಿರುವುದು ವಿವಾದಕ್ಕೆ ಕಾರಣವಾಗಿದೆ. 
 
ಜಿಲ್ಲಾಧಿಕಾರಿಯಾಗಿದ್ದ ಅಜಯ್ ಸಿಂಗ್ ಗಂಗ್ವಾರ್ ಅವರಿಗೆ ಕೆಲ ಸರಕಾರ ಅಧಿಕಾರಿಗಳು ಬೆಂಬಲ ವ್ಯಕ್ತಪಡಿಸಿದ್ದಾರೆ. ಆದರೆ,ಕೆಲವು ಹಿರಿಯ ಅಧಿಕಾರಿಗಳು ಅವರ ವಿರುದ್ಧ ಶಿಸ್ತುಕ್ರಮ ತೆಗೆದುಕೊಂಡಿರುವುದನ್ನು ಸಮರ್ಥಿಸಿಕೊಂಡಿದ್ದಾರೆ.

ವೆಬ್‌ದುನಿಯಾ ಮೊಬೈಲ್ ಆಪ್ (ಡೌನ್‌ಲೋಡ್) ಮಾಡಿಕೊಂಡು ತಾಜಾ ಸುದ್ದಿಗಳನ್ನು ಪಡೆಯಿರಿ.
 

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಕಾಂಗ್ರೆಸ್ ಭಿನ್ನರ ಬಗ್ಗೆ ಬಿಎಸ್ ಯಡಿಯೂರಪ್ಪ ಸ್ಪೋಟಕ ಹೇಳಿಕೆ

ಇದು ಸೇವೆಗಾಗಿ ಬಂದ ಕಾಂಗ್ರೆಸ್ ಅಲ್ಲ, ವ್ಯಾಪಾರಕ್ಕಾಗಿ ಬಂದಿದ್ದು: ಛಲವಾದಿ ನಾರಾಯಣಸ್ವಾಮಿ

ಸಾಲಗಾರನ ಮಗಳನ್ನು ಕರೆದೊಯ್ದ ಪ್ರಕರಣ: ಆರೋಪಿ ಅರೆಸ್ಟ್‌

ನನ್ನ ಶೂ ನೆಕ್ಕಲು ಸಹ ಅರ್ಹನಲ್ಲ: ಅಧಿಕಾರಿಗಳ ವಿರುದ್ಧ ಜಾತಿ ನಿಂದನೆ ದೂರು ಕೊಟ್ಟ ಇಂಡಿಗೋ ಸಿಬ್ಬಂದಿ

ಜಮ್ಮುನಲ್ಲಿ ಲ್ಯಾಂಡಿಂಗ್‌ ಆಗಬೇಕಿದ್ದ ಏರ್‌ ಇಂಡಿಯಾ ವಿಮಾನ ದೆಹಲಿಗೆ ವಾಪಸ್‌: ಕಾರಣ ನಿಗೂಢ

ಮುಂದಿನ ಸುದ್ದಿ
Show comments