Webdunia - Bharat's app for daily news and videos

Install App

ಸಿದ್ದು ಆಯ್ತು ಈಗ ಚೌಹಾಣ್; ಅಂಗರಕ್ಷಕನ ಕೈಯಲ್ಲಿ ಸಿಎಂ ಶೂ

Webdunia
ಶುಕ್ರವಾರ, 6 ಜನವರಿ 2017 (14:14 IST)
ಮೊನ್ನೆ ಮೊನ್ನೆ ಅಷ್ಟೇ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ, ತಮ್ಮ ಆಪ್ತರಿಂದ ಶೂ ಲೇಸ್ ಕಟ್ಟಿಕೊಂಡು ವ್ಯಾಪಕ ಟೀಕೆಗೆ ಗುರಿಯಾಗಿದ್ದರು. ಮತ್ತೀಗ ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಸರದಿ. 
 
ಗುರುವಾರ ಉಜ್ಜಯನಿಗೆ ತೆರಳಿದ್ದ ಚೌಹಾಣ್, ತಪೋಭೂಮಿಯೊಂದಕ್ಕೆ ಭೇಟಿ ನೀಡಿದ್ದರು. ಅಲ್ಲಿಂದ ಅವರು ಬರಿಗಾಲಲ್ಲಿ ಹೊರಬರುತ್ತಿದ್ದರೆ ಅವರ ಶೂಗಳು ಅಂಗರಕ್ಷಕನ ಕೈಯಲ್ಲಿದ್ದವು. ಈ ಪೋಟೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. 
 
ಕಳೆದ ವರ್ಷ ಪನ್ನಾ ಜಿಲ್ಲೆಯಲ್ಲಿ ಪ್ರವಾಹ ಬಂದ ಸಂದರ್ಭದಲ್ಲಿ ಪರಿಶೀಲನೆಗೆ ಹೋಗಿದ್ದ ಚೌಹಾಣ್ ಅವರನ್ನು ನೀರಿದ್ದ ಸ್ಥಳದಲ್ಲಿ ಅಂಗರಕ್ಷಕರು ಎತ್ತಿಕೊಂಡು ಹೋಗಿದ್ದು ವಿವಾದಕ್ಕೆ ಗ್ರಾಸವಾಗಿತ್ತು. 
 
ಈಗ ಮತ್ತೆ ಅಂತಹದೇ ಕಾರಣಕ್ಕೆ ಚೌಹಾಣ್ ವಿವಾದವನ್ನು ಮೈಗೆಳೆದುಕೊಂಡಿದ್ದಾರೆ. 
 
 
  

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments