Webdunia - Bharat's app for daily news and videos

Install App

ಭೀಕರ ಸಾಮೂಹಿಕ ಅತ್ಯಾಚಾರ; ಗುಪ್ತಾಂಗದಲ್ಲಿ ತುರುಕಿದರು ಕೋಲು, ಗನ್ ಬ್ಯಾರೆಲ್

Webdunia
ಶುಕ್ರವಾರ, 1 ಜುಲೈ 2016 (17:53 IST)
17 ವರ್ಷದ ಬಾಲಕಿಯ ಮೇಲೆ 5 ಜನ ಸೇರಿ ಸಾಮೂಹಿಕ ಅತ್ಯಾಚಾರವೆಸಗಿದ್ದಲ್ಲದೇ ಆಕೆಯ ಗುಪ್ತಾಂಗದಲ್ಲಿ ಬಂದೂಕಿನ ನಳಿಕೆ, ಕೋಲು ತೂರಿಸಿದ ಹೇಯ ರಾಕ್ಷಸೀ ಕೃತ್ಯ ಉತ್ತರ ಬಿಹಾರದ ಪೂರ್ವ ಚಂಪಾರಣ್ಯ ಜಿಲ್ಲೆಯಲ್ಲಿ ನಡೆದಿದೆ. ಪರಿಣಾಮ ಆಕೆ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾಳೆ. 

ಆರೋಪಿಗಳಲ್ಲಿ ಒಬ್ಬ ಈ ತಿಂಗಳ ಆರಂಭದಲ್ಲಿ ಆಕೆಯ ಮೇಲೆ ಅತ್ಯಾಚಾರವೆಸಗಿದ್ದ. ಆಕೆಯ ಜತೆ ಜಗಳವಾಡಿದ್ದ ಬಾಲಕಿ ಪೊಲೀಸರಲ್ಲಿ ದೂರು ಕೂಡ ನೀಡಿದ್ದಳು. ಈ ಪ್ರತೀಕಾರಕ್ಕಾಗಿ ದುರುಳರು ಆಕೆಯ ಮೇಲೆ ಈ ಪರಿಯ ದೌರ್ಜನ್ಯವನ್ನು ಎಸಗಿದ್ದಾರೆ. 
 
ಪ್ರಸ್ತುತ ಗಂಭೀರ ಸ್ಥಿತಿಯಲ್ಲಿರುವ ಆಕೆಯನ್ನು ಆಸ್ಪತ್ರೆಗೆ ಸೇರಿಸಲಾಗಿದ್ದು, ಪೊಲೀಸರ ನಿರ್ಲಕ್ಷವೇ ಘಟನೆಗೆ ಕಾರಣ ಎಂದು ಪೀಡಿತಳ ತಾಯಿ ಕಿಡಿಕಾರಿದ್ದಾರೆ. 
 
ಪ್ರಮುಖ ಆರೋಪಿ ಸಮೀವುಲ್ಲ ಜೂನ್ 12 ರಂದು ಬಾಲಕಿಯನ್ನು ಅಪಹರಿಸಿ ಅತ್ಯಾಚಾರಗೈದಿದ್ದ. ತನ್ನ ಕುಕೃತ್ಯದ ವಿಡಿಯೋ ಚಿತ್ರೀಕರಿಸಿಕೊಂಡು ಆಕೆಗೆ ಬೆದರಿಕೆ ಹಾಕುತ್ತಿದ್ದ. ಆಕೆಯನ್ನು ಬೆದರಿಸಿ ಹಣ ಕೀಳಲು ಕರೆದಾಗ ಆಕೆ ಬ್ಲೇಡ್ ತೆಗೆದುಕೊಂಡು ಹೋಗಿದ್ದಳು. ಮತ್ತೆ ತನ್ನ ಮೇಲೆ ಅತ್ಯಾಚಾರವೆಸಗಲು ಯತ್ನಿಸಿದಾಗ ಆತನ ಗುಪ್ತಾಂಗದ ಮೇಲೆ ಬ್ಲೇಡ್‌ನಿಂದ ದಾಳಿ ನಡೆಸಿದ್ದಳು. 
 
ಘಟನೆಯಾದ ಕೆಲ ದಿನಗಳ ಬಳಿಕ ಬಾಲಕಿ ಮತ್ತು ತಾಯಿ ಪೊಲೀಸರಲ್ಲಿ ದೂರು ನೀಡಲು ಹೋದಾಗ ವೈದ್ಯಕೀಯ ಪರೀಕ್ಷೆಯನ್ನು ಮಾಡಿಸಲು ಒಪ್ಪಲಿಲ್ಲ, ಕೇವಲ ರೇಪ್ ಯತ್ನ ಪ್ರಕರಣವನ್ನು ದಾಖಲಿಸಿಕೊಂಡರು. ಆದರೆ ಯಾವುದೇ ಕ್ರಮವನ್ನು ಕೈಗೊಂಡಿರಲಿಲ್ಲ. 
 
ಆದರೆ ತನ್ನ ಮೇಲೆ ಬಾಲಕಿ ದಾಳಿ ನಡೆಸಿದ್ದುದಕ್ಕೆ ಮತ್ತು ಪೊಲೀಸರಲ್ಲಿ ದೂರು ನೀಡಿದ್ದಕ್ಕೆ ಕೋಪಗೊಂಡ ಆರೋಪಿ ಸಮೀವುಲ್ಲಾ ತನ್ನ ನಾಲ್ವರು ಸಂಬಂಧಿಕರೊಂದಿಗೆ ಆಕೆಯ ಮನೆಯ ಒಳಗೆ ನುಗ್ಗಿ ಹೊರಗೆಳೆದು ತಂದಿದ್ದಾನೆ. ಬಳಿಕ ಎಲ್ಲರೂ ಸೇರಿ ಸಾಮೂಹಿಕ ಅತ್ಯಾಚಾರವೆಸಗಿದ್ದಾರೆ. 
 
ಆರೋಪಿಗಳೆಲ್ಲ ಪರಾರಿಯಾಗಿದ್ದು ಅವರಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ. 

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Viral video: ಸೈಕ್ಲಿಂಗ್ ಮಾಡಲು ಹೋಗಿ ದಢಾರನೆ ಬಿದ್ದ ಡಿಕೆ ಶಿವಕುಮಾರ್

ವಿಧಾನಸೌಧದಲ್ಲಿ 28 ಕ್ಕೆ ಪ್ರಮಾಣವಚನ ಮಾಡ್ತೇವೆ: ಡಿಕೆ ಶಿವಕುಮಾರ್ ಶಾಕಿಂಗ್ ಹೇಳಿಕೆ

ಐಪಿಎಲ್ ಪಂದ್ಯದ ಫ್ಲಡ್ ಲೈಟ್ ಹ್ಯಾಕ್ ಮಾಡಿದ್ವಿ: ಪಾಕ್ ಸಚಿವ ಫುಲ್ ಟ್ರೋಲ್

ಶಿರಾಡಿ ಘಾಟಿಯಲ್ಲಿ ಗುಡ್ಡ ಕುಸಿತ ಭೀತಿ: ಮಂಗಳೂರು, ಬೆಂಗಳೂರು ಪ್ರಯಾಣಿಕರ ಗಮನಕ್ಕೆ

ಇರಾನ್ ಇಸ್ರೇಲ್ ನಡುವಿನ ಯುದ್ಧದಿಂದ ಕರ್ನಾಟಕಕ್ಕಾಗುವ ಪರಿಣಾಮಗಳೇನು

ಮುಂದಿನ ಸುದ್ದಿ
Show comments