Webdunia - Bharat's app for daily news and videos

Install App

ಅತ್ತೆ-ಮಾವನ ಮೇಲಿನ ಸಿಟ್ಟಿಗೆ ಮಲಗಿದ್ದ ಮಗುವನ್ನು ಮೆಟ್ಟಿಲಿಂದ ಎಸೆದ ಪಾಪಿ ತಾಯಿ

Webdunia
ಶುಕ್ರವಾರ, 27 ಜನವರಿ 2017 (16:29 IST)
ಅತ್ತೆ-ಮಾವನೊಂದಿಗೆ ಜಗಳವಾಡುತ್ತಿದ್ದ ಮಹಿಳೆಯೋರ್ವಳು ಕೋಪದ ಭರದಲ್ಲಿ ತನ್ನ 2 ವರ್ಷದ ಮಗುವನ್ನೇ ಮೆಟ್ಟಿಲಿನಿಂದ ಕೆಳಕ್ಕೆಸೆದ ಅಮಾನವೀಯ ಘಟನೆ ದೆಹಲಿಯಲ್ಲಿ ನಡೆದಿದೆ. 
ಈ ಕ್ರೂರ ಕೃತ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು ರಾಕ್ಷಸ ಮನಸ್ಥಿತಿ ತಾಯಿಯ ವಿರುದ್ಧ ವ್ಯಾಪಕ ಟೀಕೆ, ಆಕ್ರೋಶ ವ್ಯಕ್ತವಾಗುತ್ತಿದೆ. 
 
ಮತ್ತೀಗ ಆರೋಪಿ ತಾಯಿ ಸೋನು ಗುಪ್ತಾ (26) ವಿರುದ್ಧ ಮಗುವಿನ ತಂದೆ ನಿತಿನ್ ಗುಪ್ತಾ ಕೊಲೆ ಯತ್ನ ಪ್ರಕರಣವನ್ನು ದಾಖಲಿಸಿದ್ದು, ಆಕೆಯನ್ನಿನ್ನೂ ಬಂಧಿಸಲಾಗಿಲ್ಲ. 
 
ಮಗು ಅನ್ಶುವಿನ ತಲೆ ಮತ್ತು ಮುಖಕ್ಕೆ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದೆ ಎಂದು ತಿಳಿದು ಬಂದಿದೆ.
 
ಶನಿವಾರ ಈ ಘಟನೆ ನಡೆದಿತ್ತು, ಆದರೆ ಗುರುವಾರ ಮಹಿಳೆಯ ವಿರುದ್ಧ ದೂರು ದಾಖಲಾಗಿದೆ. 
 
ತನ್ನ ಪಕ್ಕದಲ್ಲಿ ಮಲಗಿದ್ದ ಮಗುವನ್ನು ಎತ್ತಿಕೊಂಡು ಹೋಗಿ ಮೆಟ್ಟಿಲಿಂದ ಕೆಳಕ್ಕೆ ದೂಡಿರುವುದು, ಮತ್ತು ಆಕೆಯ ಅತ್ತೆ-ಮಾವ ಮಗುವನ್ನು ಕಾಪಾಲು ಓಡಿರುವುದು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಮಗು ಎರಡನೆಯ ಮಹಡಿಯಿಂದ ಉರುಳಿ ಮೊದಲ ಮಹಡಿಗೆ ಬಂದು ಬಿದ್ದಿರುವುದು ಸ್ಪಷ್ಟವಾಗಿದೆ. 
 
ಕಳೆದ 5 ವರ್ಷದ ಹಿಂದೆ ನಿತಿನ್ ಮತ್ತು ಸೋನು ಪ್ರೀತಿ ವಿವಾಹವಾಗಿದ್ದರು. 
 
ಆಸ್ತಿಗಾಗಿ ಸೋನು ಮತ್ತು ಅತ್ತೆ -ಮಾವಂದಿರ ನಡುವೆ ಸದಾ ಜಗಳವಾಗುತ್ತಿತ್ತು. ನಾನು ಈ ಮಗುವನ್ನು ಸಾಯಿಸಿ ನಿಮ್ಮನೆಲ್ಲ ಕಂಬಿ ಎಣಿಸುವಂತೆ ಮಾಡುತ್ತೇನೆ ಎಂದ ಸೋನು ಈ ಹೇಯ ಕೃತ್ಯವನ್ನೆಸಗಿದ್ದಾಳೆ. ಬಳಿಕ ತಾಯಿಯ ಮೇಲೆ ಸಹ ಹಲ್ಲೆ ಮಾಡಿದ್ದಾಳೆ, ಎಂದು ಪತಿ ಪೊಲೀಸ್ ವಿಚಾರಣೆ ಸಂದರ್ಭದಲ್ಲಿ ತಿಳಿಸಿದ್ದಾನೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಏರ್‌ ಇಂಡಿಯಾ ವಿಮಾನ ದುರಂತದ ಬಳಿಕ 80 ವಿಮಾನ ಹಾರಾಟಗಳ ರದ್ದು

ಕರುಣೆಯಿಲ್ಲದೆ ಯುದ್ಧ ಮುಂದುವರೆಯುತ್ತದೆ: ಟ್ರಂಪ್‌ ವಾರ್ನಿಂಗ್‌ಗೆ ಇರಾನ್‌ ಡೊಂಟ್ ಕ್ಯಾರೇ

ಲ್ಯಾಂಡ್ ಆದ ಬಳಿಕ ತಾಂತ್ರಿಕ ದೋಷದಿಂದ 40ನಿಮಿಷ ವಿಮಾನದೊಳಗೆ ಸಿಲುಕಿಕೊಂಡ ಇಂಡಿಗೋ ಪ್ರಯಾಣಿಕರು

Ahmedabad Plane Crash: 190 ಶವಗಳ ಗುರುತು ಪತ್ತೆ, 159 ಮಂದಿ ಮೃತದೇಹ ಕುಟುಂಬಕ್ಕೆ ಹಸ್ತಾಂತರ

ಮುಖ್ಯಮಂತ್ರಿ ಕುರ್ಚಿ ಆಸೆಯನ್ನು ಮತ್ತೆ ಪರೋಕ್ಷವಾಗಿ ಬಿಚ್ಚಿಟ್ಟ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌

ಮುಂದಿನ ಸುದ್ದಿ
Show comments