Webdunia - Bharat's app for daily news and videos

Install App

ಮಗನನ್ನು ಕೊಡಲಿಯಿಂದ ಕೊಚ್ಚಿ ಕೊಂದ ತಾಯಿ! ಮುಂದೇನಾಯ್ತು?

Webdunia
ಬುಧವಾರ, 13 ಏಪ್ರಿಲ್ 2022 (11:36 IST)
ಹೈದರಾಬಾದ್ : ಮದ್ಯದ ಅಮಲಿನಲ್ಲಿದ್ದ ಮಗನನ್ನು 55 ವರ್ಷದ ಮಹಿಳೆ ಕೊಡಲಿಯಿಂದ ಕೊಚ್ಚಿ ಕೊಂದಿರುವ ಘಟನೆ ವಿಜಯವಾಡದಲ್ಲಿ ನಡೆದಿದೆ.
 
ಅಪ್ಪಲ ಬಾಲ ಕೋಟಾಯ್ಯ (35) ಮೃತ ದುರ್ದೈವಿಯಾಗಿದ್ದು, ಈತ ಟ್ರಕ್ ಚಾಲಕನಾಗಿ ಕಾರ್ಯನಿರ್ವಹಿಸುತ್ತಿದ್ದನು. ಸೋಮವಾರ ಸಂಜೆ ಈ ಘಟನೆ ನಡೆದಿದ್ದು, ಆರೋಪಿಯನ್ನು ಅಪ್ಪಲ ಚಿಟ್ಟೆಮಾ ಎಂದು ಗುರುತಿಸಲಾಗಿದೆ.

ಆರು ವರ್ಷಗಳ ಹಿಂದೆ ಅಪ್ಪಲ ಬಾಲ ಕೋಟಾಯ್ಯ, ಕಂಚಿಕಚೆರ್ಲಾದ ಸಿರಿಶಾರನ್ನು ಮದುವೆಯಾಗಿದ್ದನು. ಆದರೆ ಇತ್ತೀಚೆಗೆ ಪತ್ನಿಯಿಂದ ವಿಚ್ಛೇದನ ಪಡೆದುಕೊಂಡಿದ್ದನು. ಆದರೆ ಭಾನುವಾರ ರಾಮನವಮಿ ಆಚರಿಸಲು ಚಿಟ್ಟೆಮ್ಮ ತನ್ನ ಮೊಮ್ಮಕ್ಕಳನ್ನು ಆಹ್ವಾನಿಸಿದ್ದಳು. 

ಸೋಮವಾರ ಸಂಜೆ 7 ಗಂಟೆ ಸುಮಾರಿಗೆ ಕುಡಿದ ಅಮಲಿನಲ್ಲಿ ಚಿಟ್ಟೆಮ್ಮ ಅವರ ಮನೆಗೆ ಅಪ್ಪಲ ಬಾಲ ಕೋಟಾಯ್ಯ ಬಂದಿದ್ದರು. ಈ ವೇಳೆ ಕೋಟಾಯ್ಯ ತನ್ನ ತಾಯಿ ಮತ್ತು ಇಬ್ಬರು ಮಕ್ಕಳ ಮೇಲೆ ಕುಡುಗೋಲಿನಿಂದ ಹಲ್ಲೆ ನಡೆಸಿದ್ದಾನೆ. ನಂತರ ಚಿಟ್ಟೆಮ್ಮ ಮಕ್ಕಳನ್ನು ರಕ್ಷಿಸಿ ಅಕ್ಕಪಕ್ಕದ ಮನೆಗೆ ಕರೆದುಕೊಂಡು ಹೋಗಿ ಬಿಟ್ಟಿದ್ದಾರೆ. 

ಕೋಟಾಯ್ಯ ಮತ್ತೆ ತಮ್ಮ ಮೇಲೆ ಎಲ್ಲಿ ಹಲ್ಲೆ ನಡೆಸುತ್ತಾನೋ ಮತ್ತು ಆತನಿಂದ ತಮ್ಮ ಮೊಮ್ಮಕ್ಕಳನ್ನು ಹೇಗೆ ರಕ್ಷಿಸುವುದೋ ಎಂಬ ಭಯದಿಂದ ಚಿಟ್ಟೆಮ್ಮ ಕೊಡಲಿಯಿಂದ ಕೋಟಾಯ್ಯ ಮೇಲೆ ಹಲ್ಲೆ ನಡೆಸಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಒಂದೇ ಮಳೆಗೆ ಶುರುವಾಯ್ತು ಮಂಗಳೂರು, ಬೆಂಗಳೂರು ಪ್ರಯಾಣಿಕರಿಗೆ ಸಂಕಷ್ಟ: ಶಿರಾಡಿ ಘಾಟಿ ಏನಾಗಿದೆ

Karnataka Rains: ಕರಾವಳಿ ಜಿಲ್ಲೆಗಳಲ್ಲಿ ಭಾರೀ ಮಳೆ ಅಡಿಕೆ ಬೆಳೆಗಾರರಿಗೆ ಶುರುವಾಯ್ತು ಆತಂಕ

Karnataka Weather: ಇನ್ನು ಎರಡು ದಿನ ಮಳೆ ಜೊತೆಗೆ ರಾಜ್ಯದ ಜನರು ಈ ಎಚ್ಚರಿಕೆ ಗಮನಿಸಿ

Karnataka Weather: ಈ ವಾರ ಪೂರ್ತಿ ಹವಾಮಾನ ಹೇಗಿರಲಿದೆ ಗೊತ್ತಾ

Dehli Airport: ಭಾರೀ ಮಳೆಗೆ ಸೋರುತ್ತಿದೆ ಛಾವಣಿ, Video Viral

ಮುಂದಿನ ಸುದ್ದಿ
Show comments