Webdunia - Bharat's app for daily news and videos

Install App

ತಾಯಿಗೂ ಮಗಳಿಗೂ ಒಂದೇ ಪ್ರೇಮಿ; ಮುಂದೇನಾಯ್ತು?

Webdunia
ಶುಕ್ರವಾರ, 3 ಜೂನ್ 2016 (11:41 IST)
ತನ್ನ ಪ್ರೇಮಿಯನ್ನೇ ಮಗಳು ಕೂಡ ಪ್ರೀತಿಸಿದಳೆಂಬ ಕಾರಣಕ್ಕೆ ತಾಯಿಯೇ ಮಗಳನ್ನು ಕೊಲೆಗೈದ ಹೇಯ ಘಟನೆ  ಪಂಜಾಬ್‌ನ ಅಬೋಹರ್ ನಗರದಲ್ಲಿ ನಡೆದಿದೆ. ಈ ಮೊದಲು ಇದು ಆತ್ಮಹತ್ಯೆ ಪ್ರಕರಣವೆಂದು ಬಗೆಯಲಾಗಿತ್ತು. ಆದರೆ ತನಿಖೆಯ ಬಳಿಕ ತನ್ನ ಫೇಸ್‌ಬುಕ್ ಪ್ರೇಮಿ ಜತೆ ಸೇರಿ ತಾಯಿಯೇ ಮಗಳನ್ನು ಕೊಂದಿದ್ದಾಳೆ ಎಂಬ ಘೋರ ಸತ್ಯ ಬಯಲಾಗಿದೆ.
ಹದಿಹರೆಯದ ಯುವತಿ ದೀಕ್ಷಾಳನ್ನು ಕೊಂದ ಆರೋಪದ ಮೇಲೆ ಆಕೆಯ ತಾಯಿ ಮಂಜು ಮತ್ತು ಪ್ರೇಮಿ ವಿಜಯ್ ಕುಮಾರ್ ಅಲಿಯಾಸ್ ಸೋನುವನ್ನು ಬಂಧಿಸಲಾಗಿದೆ ಎಂದು ಎಸ್‌ಪಿ ನರೇಂದ್ರ ಪಾಲ್ ಸಿಂಗ್ ತಿಳಿಸಿದ್ದಾರೆ. 
 
ಮೇ 24 ರಂದು ಆರೋಪಿ ಮಂಜು ತನ್ನ ಮಗಳು ದೀಕ್ಷಾ  ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಪೊಲೀಸರಿಗೆ ಕರೆ ಮಾಡಿ ತಿಳಿಸಿದ್ದಳು. ಮಾಹಿತಿ ಸಿಕ್ಕಿದ ಕೂಡಲೇ ಸ್ಥಳಕ್ಕೆ ಬಂದ ಪೊಲೀಸರು ಶವ ಫ್ಯಾನ್‌ಗೆ ನೇತಾಡುತ್ತಿದುದು ಕಂಡು ಬಂದಿತ್ತು. 
 
ತನ್ನ ಗಂಡನ ಸಾವಿನ ಬಳಿಕ ಆಸ್ತಿಯನ್ನು ನೀಡಲು ಸಂಬಂಧಿಕರು ನಿರಾಕರಿಸಿದರು. ಈ ಕಾರಣಕ್ಕೆ ತನ್ನ ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಪೊಲೀಸರಿಗೆ ಆರೋಪಿ ತಾಯಿ ಹೇಳಿದ್ದಳು. ಆಕೆಯ ಹೇಳಿಕೆಯನ್ನು ಆಧರಿಸಿ ಪೊಲೀಸರು ಮೃತಳ ತಂದೆಯ ಪೋಷಕರ ಮೇಲೆ ಪ್ರಕರಣವನ್ನು ದಾಖಲಿಸಿಕೊಂಡಿದ್ದರು. ಆದರೆ ದೀಕ್ಷಾ ತನ್ನ ಕೈ ಮೇಲೆ ಬರೆದುಕೊಂಡಿದ್ದ ವಿಜಯ್ ಎಂಬ ಹೆಸರು ಪ್ರಕರಣದ ಸತ್ಯವನ್ನು ಹೊರಕ್ಕೆ ತರಲು ಪೊಲೀಸರಿಗೆ ಸಹಾಯಕವಾಯಿತು. 
 
ಅಕ್ಟೋಬರ್ 2015ರಲ್ಲಿ ಫೇಸ್‌ಬುಕ್ ಮೂಲಕ ಮಂಜು ಮತ್ತೆ ಸೌಧಿ ನಿವಾಸಿ ವಿಜಯ್‌ಗೆ ಪರಿಚಯವಾಗಿತ್ತು. ಅವರಿಬ್ಬರ ಸ್ನೇಹ ಪ್ರೀತಿಗೆ ತಿರುಗಿದ ಮೇಲೆ ವಿಜಯ್ ಭಾರತಕ್ಕೆ ಹಿಂತಿರುಗಿ ಪ್ರೇಮಿ ಮನೆಯಲ್ಲಿ ವಾಸ ಮಾಡತೊಡಗಿದ. 
 
ಕಳೆದ ಜನೇವರಿ ತಿಂಗಳಲ್ಲಿ ಅವರು ಲಿವಿಂಗ್ ಟುಗೆದರ್ ಜೀವನವನ್ನು ಆರಂಭಿಸಿದರು. ಅಷ್ಟಕ್ಕೆ ವಿಜಯ್ ಸುಮ್ಮನಾಗಲಿಲ್ಲ. ಮಂಜು ಮಗಳು ದೀಕ್ಷಾ(17) ಜತೆಗೂ ಪ್ರೀತಿ-ಪ್ರೇಮವನ್ನು ಪ್ರಾರಂಭಿಸಿಕೊಂಡ. ಬಾಲಕಿಗೆ ಆತನೊಂದಿಗಿನ ತನ್ನ ತಾಯಿಯ ಸಂಬಂಧದ ಬಗ್ಗೆ ಅರಿವಿರಲಿಲ್ಲ. ಒಂದು ದಿನ ಅವರಿಬ್ಬರನ್ನು ಒಂದೇ ಹಾಸಿಗೆಯಲ್ಲಿ ನೋಡಿದಾಗ ಆಕೆ ಶಾಕ್ ಆಗಿದ್ದಾಳೆ. ಆತನನ್ನು ಮದುವೆಯಾಗುವ ವಿಷಯಕ್ಕೆ ತಾಯಿ ಮಗಳ ನಡುವೆ ಜಗಳವಾಗಿದೆ. ವಿಜಯ್ ಮೇಲಿನ ಪ್ರೀತಿಯಿಂದ ದೀಕ್ಷಾ ಆತನ ಹೆಸರನ್ನು ತನ್ನ ಕೈ ಮೇಲೆ ಬರೆಸಿಕೊಂಡಿದ್ದಳು. ಅದನ್ನು ನೋಡಿ ಕೆಂಡಾಮಂಡಲವಾದ ತಾಯಿ ಉಸಿರುಗಟ್ಟಿಸಿ ಮಗಳನ್ನೇ ಕೊಲೆಗೈದಿದ್ದಾಳೆ. 
 
ಬಳಿಕ ಮಂಜು ಮತ್ತು ವಿಜಯ್, ದೀಕ್ಷಾ ಬರೆದ ಹಾಗೆ ಡೆತ್ ನೋಟ್ ಬರೆದಿಟ್ಟಿದ್ದಾರೆ.
 
ಕೇವಲ ದೈಹಿಕ ಚಪಲಕ್ಕಾಗಿ ಹೆತ್ತ ತಾಯಿಯೇ ತನ್ನ ಕರುಳ ಕುಡಿಯ ಉಸಿರುಗಟ್ಟಿಸಿದ್ದು ಮಾತ್ರ ನಿಜಕ್ಕೂ ಖಂಡನೀಯ.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ. 

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ನಾಲ್ವಡಿ ಒಡೆಯರ್ ಗಿಂತ ನೀವು ಗ್ರೇಟ್ ಅಂತೆ ಎಂದು ಕೇಳಿದ್ದಕ್ಕೆ ಸಿದ್ದರಾಮಯ್ಯ ಉತ್ತರ ನೋಡಿ

ಸಿದ್ದರಾಮಯ್ಯ ಒಡೆಯರ್ ಗಿಂತ ಗ್ರೇಟ್ ಎಂದಿದ್ದ ಯತೀಂದ್ರ: ಯದುವೀರ್ ಒಡೆಯರ್ ಉತ್ತರ ನೋಡಿ

ರಸಗೊಬ್ಬರ ರೈತರಿಗೆ ಸಿಗಲು ಸರ್ಕಾರ ವ್ಯವಸ್ಥೆಯೇ ಮಾಡಿಲ್ಲ: ಬಿವೈ ವಿಜಯೇಂದ್ರ

Arecanut price: ಇಂದು ಅಡಿಕೆ ರೇಟ್ ಎಷ್ಟು ನೋಡಿ

ಹಲಸಿನ ಹಣ್ಣು ತಿಂದು ವಾಹನ ಚಲಾಯಿಸುವಾಗ ಟ್ರಾಫಿಕ್ ಪೊಲೀಸರಿಗೆ ಸಿಕ್ಕಿಬಿದ್ರೆ ಕತೆ ಫಿನಿಶ್

ಮುಂದಿನ ಸುದ್ದಿ
Show comments