Select Your Language

Notifications

webdunia
webdunia
webdunia
webdunia

ಕಾಶ್ಮೀರದ ಪ್ರವಾಹ ಸಂತ್ರಸ್ತರ ಜತೆ ಮೋದಿ ದೀಪಾವಳಿ ಆಚರಣೆ

ಕಾಶ್ಮೀರದ ಪ್ರವಾಹ ಸಂತ್ರಸ್ತರ ಜತೆ ಮೋದಿ ದೀಪಾವಳಿ ಆಚರಣೆ
ಶ್ರೀನಗರ್ , ಬುಧವಾರ, 22 ಅಕ್ಟೋಬರ್ 2014 (12:42 IST)
ಪ್ರಧಾನಿ ನರೇಂದ್ರ ಮೋದಿ ದೀಪಾವಳಿ ಹಬ್ಬವನ್ನು ಕಾಶ್ಮೀರದ ಪ್ರವಾಹ ಸಂತ್ರಸ್ತರ ಜತೆ ಆಚರಿಸಲಿದ್ದಾರೆ.ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಅವರಿದನ್ನು ಘೋಷಿಸಿದ್ದಾರೆ. 

ಅಕ್ಟೋಬರ್ 23 ರಂದು ನಾನು  ಶ್ರೀನಗರದಲ್ಲಿರಲಿದ್ದೇನೆ. ದುರದೃಷ್ಟಕರ ಪ್ರವಾಹಕ್ಕೆ ಸಿಲುಕಿ ಸಂಕಷ್ಟ ಪಡುತ್ತಿರುವ ನನ್ನ ಸಹೋದರ, ಸಹೋದರಿಯರ ಜತೆ ಆ ದಿನವನ್ನು ಕಳೆಯಲಿದ್ದೇನೆ ಎಂದು ಅವರು ಟ್ವಿಟ್ ಮಾಡಿದ್ದಾರೆ. 
 
ಕಳೆದ ತಿಂಗಳು ಹಿಂದೆಂದೂ ಕಾಣದಂತಹ ಪ್ರವಾಹಕ್ಕೆ ಸಿಲುಕಿದ್ದ ಕಣಿವೆ ನಾಡಲ್ಲಿ ವ್ಯಾಪಕ ಹಾನಿಯುಂಟಾಗಿದೆ. 
 
ಪೀಡಿತರ ಪುನರ್ವಸತಿಗಾಗಿ ಈಗಾಗಲೇ ಮೋದಿ 1,000 ಕೋಟಿ ರೂಪಾಯಿಗಳನ್ನು ಘೋಷಿಸಿದ್ದು,  ಬೇರೆ ಯಾವುದೇ ರೀತಿಯ ಸಹಾಯಕ್ಕೂ ಸರಕಾರ ಸದಾ ಬದ್ಧ ಎಂಬ ಭರವಸೆಯನ್ನು ಕೂಡ ನೀಡಿದ್ದಾರೆ. 

Share this Story:

Follow Webdunia kannada