ಈ ತಿಂಗಳ 27ರಂದು ಕ್ಯಾಲಿಫೋರ್ನಿಯಾದ ಸ್ಯಾನ್ ಜೋಸ್ಗೆ ತೆರಳುತ್ತಿರುವ ಪ್ರಧಾನಿ ಮೋದಿ ಆ ಸಂದರ್ಭದಲ್ಲಿ ಮೋದಿ, ವ್ಯಾಲಿಯ ಅಗ್ರಗಣ್ಯ ಸಿ.ಇ.ಒ ಗಳ ಜತೆ ಮಾತುಕತೆ ನಡೆಸಲಿದ್ದಾರೆ. ಅದರಲ್ಲಿ ಹೆಚ್ಚಿನವರು ಭಾರತೀಯ ಮೂಲದವರೇ ಆಗಿದ್ದು ಗೂಗಲ್ನ ಸುಂದರ್ ಪಿಚೈ, ಅಡೋಬ್ ಗಣಕದ ಶಂತನು ನಾರಾಯಣ್, ಮತ್ತು ಸ್ಯಾನ್ಡಿಸ್ಕ್ನ ಸಂಜಯ್ ಮಲ್ಹೋತ್ರಾ ಅವರು ಸಹ ಆ ಪಟ್ಟಿಯಲ್ಲಿದ್ದಾರೆ.
ಎಸ್ಎಪಿ ಸೆಂಟರ್ನಲ್ಲಿ ಭಾರತೀಯ ಮೂಲದವರನ್ನು ಉದ್ದೇಶಿಸಿ ಮೋದಿ ಮಾತನಾಡಲಿರುವ ಪ್ರಧಾನಿ ಮೋದಿ ಬಳಿಕ ಸಿ.ಇ.ಒ ಗಳ ಜತೆ ಜತೆ ಚರ್ಚಿಸಲಿದ್ದಾರೆ.
ಎಸ್ಎಪಿ ಕಾರ್ಯಕ್ರಮದಲ್ಲಿ ಭಾಗವಹಿಸುವವರ ಆನ್ಲೈನ್ ನೋಂದಣಿ ಪ್ರಕ್ರಿಯೆ ಕಳೆದ ಹಲವು ದಿನಗಳ ಹಿಂದೆಯೇ ಆರಂಭವಾಗಿದ್ದು. ಮೊದಲ ದಿನವೇ ಸುಮಾರು 10,000 ಜನ ಆನ್ಲೈನ್ ಮೂಲಕ ನೋಂದಣಿ ಮಾಡಿಕೊಂಡಿದ್ದಾರೆ. ಸೆಪ್ಟೆಂಬರ್ 25ರಂದು ವಿಶ್ವಸಂಸ್ಥೆ ಆಯೋಜಿಸಿರುವ ಸುಸ್ಥಿರ ಅಭಿವೃದ್ಧಿ ಶೃಂಗದಲ್ಲಿ ಪಾಲ್ಗೊಳ್ಳಲಿರುವ ಮೋದಿ ಬಳಿಕ ಅಲ್ಲಿಂದ ಕ್ಯಾಲಿಫೋರ್ನಿಯಾಕ್ಕೆ ತೆರಳಲಿದ್ದಾರೆ.
ಎಸ್ಎಪಿಯಲ್ಲಿ 17,496 ಜನರಿಗೆ ಸ್ಥಳಾವಕಾಶವಿದೆ. ಆದರೆ ಮೋದಿಯವರ ಕಾರ್ಯಕ್ರಮಕ್ಕೆ ಭಾಗವಹಿಸಲು ಉತ್ಸುಕರಾಗಿರುವ ಜನರ ಟಿಕೆಟ್ ಡಿಮ್ಯಾಂಡ್ ಈ ಸಂಖ್ಯೆಯನ್ನು ಮೀರಿ ಹೋಗಿದೆ.
ಮೈದಾನದ ಹೊರಗಡೆ ದೊಡ್ಡ ಪರದೆಯನ್ನು ಅಳಡಿಸುವುದರ ಮೂಲಕ ಟಿಕೆಟ್ ಸಿಗದಿದ್ದವರಿಗೆ ಮೋದಿಯವರ ಮಾತುಗಳನ್ನು ಕೇಳುವುದಕ್ಕೆ ಅನುವು ಮಾಡಿಕೊಡಲು ಕಾರ್ಯಕ್ರಮ ಸಂಘಟನಾಕಾರರು ಆಲೋಚಿಸುತ್ತಿದ್ದಾರೆ.