Webdunia - Bharat's app for daily news and videos

Install App

ಮೋದಿಯ ಸಚಿವ ಸಂಪುಟ ರಚನೆಯಲ್ಲಿ ಹಸ್ತಕ್ಷೇಪವಿಲ್ಲ: ಆರೆಸ್ಸೆಸ್

Webdunia
ಸೋಮವಾರ, 19 ಮೇ 2014 (13:33 IST)
ಕೇಂದ್ರ ಸರಕಾರ  ರಚನೆಯ  ಪ್ರಕ್ರಿಯೆಯಲ್ಲಿ ತಾನು ಹಸ್ತಕ್ಷೇಪ ಮಾಡುವುದಿಲ್ಲ ಎಂದು ಆರ್‌ಎಸ್‌ಎಸ್ ಹೇಳಿದ್ದು, ಈ ಮೂಲಕ  ತನ್ನ ತಂಡವನ್ನು ಆಯ್ದುಕೊಳ್ಳುವಲ್ಲಿ ಮೋದಿ ಸ್ವತಂತ್ರರಾಗಿದ್ದಾರೆ. ಆದರೆ  ಸಚಿವ ಸ್ಥಾನಕ್ಕಾಗಿ ಈಗಾಗಲೇ ತೀವೃ ಲಾಬಿ ನಡೆಯುತ್ತಿದ್ದು ಹಿರಿಯ ನಾಯಕರು ತಮ್ಮ ಹಕ್ಕನ್ನು ಪಡೆಯುವಲ್ಲಿ ಮಾತ್ರ ಸಂಘ ಮಧ್ಯಸ್ಥಿಕೆ ವಹಿಸುತ್ತದೆ ಎಂದು ಹೇಳಲಾಗುತ್ತಿದೆ.
 
"ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಐತಿಹಾಸಿಕ ಗೆಲುವು ಸಾಧಿಸಿದ ನಂತರ ಪಕ್ಷಕ್ಕಾಗಲೀ, ಮೋದಿಯವರಿಗಾಗಲಿ ಯಾವುದೇ ರೀತಿಯ ಸಲಹೆಯನ್ನು ನೀಡಿಲ್ಲ. ರಾಜಕೀಯದಲ್ಲಿ ಅಥವಾ ಸರಕಾರದಲ್ಲಿ ಪಾತ್ರವಹಿಸಲು ಸಂಘ ಎಂದಿಗೂ ರಿಮೋಟ್ ಕಂಟ್ರೋಲ್‌ನಂತೆ ವರ್ತಿಸುವುದಿಲ್ಲ" ಎಂದು ಆರ್‌ಎಸ್‌ಎಸ್ ನಾಯಕ ರಾಮ್ ಮಾಧವ್   ಹೇಳಿದ್ದಾರೆ.  
 
"ಆದಾಗ್ಯೂ, ಸಂಘ ಸಲಹೆಗಳನ್ನು ನೀಡಬಹುದು , ಮತ್ತು ಸರ್ಕಾರ ಪರಿವಾರದ ಸೈದ್ಧಾಂತಿಕ ನಿಲುವುಗಳಿಗೆ ಬದ್ಧವಾಗಿರುತ್ತದೆ  ಎಂಬುದನ್ನು ನಿರೀಕ್ಷಿಸುತ್ತದೆ. ಲೋಕಸಭಾ ಚುನಾವಣೆಯಲ್ಲಿ ಜಯ ಸಾಧಿಸಿದ  ಜನಪ್ರತಿನಿಧಿಗಳು ಸಂಘದ ಸಿದ್ಧಾಂತ ಬಗ್ಗೆ ಅರಿವು ಹೊಂದಿದ್ದು ಮತ್ತು ಅದಕ್ಕನುಗುಣವಾಗಿ ಅವರು ಕಾರ್ಯನಿರ್ವಹಿಸಲಿದ್ದಾರೆ. ಹೀಗಾಗಿ ಸರ್ಕಾರದ ಕಾರ್ಯ ಮತ್ತು ರಾಜಕೀಯದಲ್ಲಿ ಹಸ್ತಕ್ಷೇಪ ಮಾಡಲು ಸಂಘಕ್ಕೆ  ಯಾವುದೇ ಅವಶ್ಯಕತೆ ಇಲ್ಲ . ಆದಾಗ್ಯೂ, ಬೇಕಾದಲ್ಲಿ, ಸಂಘ ಸಲಹೆಗಳನ್ನು ನೀಡಬಹುದು" ಎಂದು ಮಾಧವ್ ಹೇಳಿದ್ದಾರೆ. 
 
ಬಿಜೆಪಿ ನಾಯಕರಾದ ಅನಂತ್ ಕುಮಾರ್, ರಾಜೀವ್ ಪ್ರತಾಪ್ ರೂಢಿ, ಹರ್ಷವರ್ಧನ್  ಸಂಘದ ದೆಹಲಿಯ ಮುಖ್ಯ ಕಚೇರಿಯಲ್ಲಿ ಕಂಡು ಬಂದಿದ್ದರಿಂದ ಮಾಧವ್ ಈ ಸ್ಪಷ್ಟೀಕರಣವನ್ನು ನೀಡಿದ್ದಾರೆ. ಮೋದಿ ಮಂತ್ರಿಮಂಡಲದಲ್ಲಿ ಸಚಿವ ಸ್ಥಾನಕ್ಕೆ ತೀವೃ ಲಾಬಿ ನಡೆಯುತ್ತಿದೆ. 
 
ಬಿಜೆಪಿ ವ್ಯವಹಾರಗಳಲ್ಲಿ ಸಂಘ ಒಂದು ದೊಡ್ಡ ಪಾತ್ರವನ್ನು ವಹಿಸುತ್ತದೆ  ಎಂಬ ಊಹಾಪೋಹಗಳು ಹರಿದಾಡುತ್ತಿದ್ದು, ಇದಕ್ಕೆ ಪ್ರತಿಕ್ರಯಿಸಿರುವ  ಮಾಧವ್ "ಜನರು, ಆದರಲ್ಲೂ ಆರ್‌ಎಸ್‌ಎಸ್ ಮುಂದಿನ ಹೆಜ್ಜೆ ಏನು ಎಂದು ತಿಳಿಯ ಬಯಸುವ ಕಾಂಗ್ರೆಸ್ ಈ ರೀತಿ ಹೇಳುವುದು ಸಹಜವಾದುದು". 
 
"ಇದೇ ಪ್ರಶ್ನೆಯನ್ನು ಮಾಜಿ ಪ್ರಧಾನಿ ವಾಜಪೇಯಿಯವರಿಗೂ ಕೇಳಲಾಗಿತ್ತು. ಅದಕ್ಕೆ ಉತ್ತರಿಸುತ್ತ ಅವರು "ನಾನೇ ನೇರ ರಿಮೋಟ್ ಕಂಟ್ರೋಲ್" ಎಂದು ಹೇಳಿದ್ದರು" ಎಂದು ತಿಳಿಸಿದ್ದಾರೆ. 

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Karnataka Caste census report: ಜಾತಿಗಣತಿ ವರದಿ ಹೊರಹಾಕಲು ಹೊರಟಿದ್ದ ಸಿಎಂ ಸಿದ್ದರಾಮಯ್ಯ ಗಪ್ ಚುಪ್ ಆಗಿದ್ದೇಕೆ

ವಕ್ಫ್ ತಿದ್ದುಪಡಿ ಕಾಯಿದೆ ತಂದಿದ್ದಕ್ಕೆ ಥ್ಯಾಂಕ್ಯೂ ಮೋದಿಜಿ ಎಂದು ಪ್ರಧಾನಿ ಭೇಟಿಯಾದ ಮುಸ್ಲಿಮರು: Video

ಕಾಂಗ್ರೆಸ್‌ ಜನಪೀಡಕ ಸರ್ಕಾರ: ಗುಡುಗಿದ ಬಿವೈ ವಿಜಯೇಂದ್ರ

Waqf Bill: ವಕ್ಫ್ ತಿದ್ದುಪಡಿ ಕಾಯ್ದೆಗೆ ಸುಪ್ರೀಂಕೋರ್ಟ್ ಅಂಕುಶ: ತೀರ್ಪಿನಲ್ಲಿ ಹೇಳಿದ್ದೇನು

ನಾವು ಹಾಲಿನ ದರ ಹೆಚ್ಚಳ ಮಾಡಿದ್ದು ರೈತರಿಗೆ ಸಿಗ್ತಿದೆ, ಮೋದಿ ಗ್ಯಾಸ್ ಸಬ್ಸಿಡಿ ರದ್ದು ಮಾಡಿದ್ದು ಯಾರಿಗೆ ಸಿಗ್ತಿದೆ: ಸಿದ್ದರಾಮಯ್ಯ

Show comments