Webdunia - Bharat's app for daily news and videos

Install App

2022ರ ವೇಳೆಗೆ ನವಭಾರತ ನಿರ್ಮಾಣವಾಗಲೇಬೇಕು: ಮಿತ್ರಪಕ್ಷಗಳಿಗೆ ಮೋದಿ ಗಡುವು

Webdunia
ಬುಧವಾರ, 12 ಏಪ್ರಿಲ್ 2017 (15:20 IST)
ದೇಶದ ಜನತೆ ಹೆಮ್ಮೆಪಡುವಂತೆ 2022ರ ವೇಳೆಗೆ ಹೊಸ ಭಾರತ ನಿರ್ಮಾಣಕ್ಕಾಗಿ ಸಂಕಲ್ಪ ತೊಡಬೇಕು ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ, ಎನ್‌ಡಿಎ ಮೈತ್ರಿಕೂಟದ ಮಿತ್ರಪಕ್ಷಗಳಿಗೆ ಗಡುವು ನೀಡಿದ್ದಾರೆ.
  
ಸುಮಾರು ನಾಲ್ಕು ಗಂಟೆಗಳ ಕಾಲ ನಡೆದ ಎನ್‌‌ಡಿಎ ಮೈತ್ರಿಕೂಟದ ಸಭೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಸ್ವಾತಂತ್ರ್ಯ ನಂತರದ ಜನಪ್ರಿಯ ರಾಜಕಾರಣಿ ಎನ್ನುವ ನಿರ್ಣಯವೊಂದನ್ನು ಮಂಡಿಸಲಾಯಿತು.
 
ಕೇರಳದಿಂದ ನಾಗಾಲ್ಯಾಂಡ್‌ವರೆಗೆ ಹರಡಿರುವ ಮಿತ್ರಪಕ್ಷಗಳು ಯುವಕರಿಗೆ ಸ್ಪೂರ್ತಿಯಾಗುವಂತಹ ಹೊಸ ಭಾರತ ನಿರ್ಮಾಣದ ಗುರಿಯನ್ನು ತಲುಪಲು ಕೈಜೋಡಿಸಬೇಕು ಎಂದು ಕರೆ ನೀಡಿದ್ದಾರೆ. 
 
ಪ್ರತಿಯೊಬ್ಬರು ನಾವು ದೇಶಕ್ಕಾಗಿ ಏನು ಮಾಡಬೇಕು ಎನ್ನುವುದನ್ನು ಯೋಚನೆ ಮಾಡಬೇಕು. ಯುವಕರು ಹೊಸ ಭಾರತ ನಿರ್ಮಾಣಕ್ಕಾಗಿ ನಿರೀಕ್ಷಿಸುತ್ತಿದ್ದಾರೆ. ಅದರಂತೆ ನಾವು ಕಾರ್ಯನಿರ್ವಹಿಸಬೇಕಾಗಿದೆ. ಡಿಜಿಟಲ್ ಪಾವತಿಗೆ ಹೆಚ್ಚಿನ ಆದ್ಯತೆ ನೀಡಬೇಕಾಗಿದೆ. ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಗಳು ಏಕಕಾಲದಲ್ಲಿ ನಡೆಯುವಂತಹ ಚುನಾವಣೆ ಸುಧಾರಣೆಯಾಗಬೇಕಾಗಿದೆ ಎಂದರು.
 
ಮುಂದಿನ ಐದು ವರ್ಷಗಳ ಅಡಳಿತದ ಅವಧಿಯಲ್ಲಿ ಅಭಿವೃದ್ಧಿ ಕಾರ್ಯಕ್ರಮಗಳನ್ನು ಯಾವ ರೀತಿ ತೆಗೆದುಕೊಂಡು ಹೋಗಬೇಕು ಎನ್ನುವುದನ್ನು ಚರ್ಚಿಸಲು ವಿಧಾನಸಭೆಯಲ್ಲಿ ವಾರದ ಅವಧಿಯಲ್ಲಿ ಒಂದು ದಿನ ಕಾಯ್ದಿರಿಸಬೇಕು ಎಂದು ಸಲಹೆ ನೀಡಿದರು.
 
ದೇಶದ ಜನತೆ ಅಭಿವೃದ್ಧಿಯ ನಿರೀಕ್ಷೆಗಳಿಂದಾಗಿ ಬಿಜೆಪಿ ಪಕ್ಷವನ್ನು ಭಾರಿ ಬಹುಮತದಿಂದ ಆಯ್ಕೆ ಮಾಡಿದ್ದಾರೆ. ಆದ್ದರಿಂದ, ನಮ್ಮ ಕಾರ್ಯವೈಖರಿಯಲ್ಲಿ ವೇಗದ ಬದಲಾವಣೆ ತರಬೇಕಾಗಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ತಿಳಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಜಗಳ ವಿಕೋಪಕ್ಕೆ ತಿರುಗಿ ಮದುವೆ ವರನನ್ನೇ ಎತ್ತಾಕಿಕೊಂಡು ಹೋದ ನೃತ್ಯ ತಂಡದವರು

ಇಂದಿನಿಂದ ರಾಜ್ಯದಲ್ಲಿ ಕೋವಿಡ್​ ಟೆಸ್ಟಿಂಗ್ ಲ್ಯಾಬ್​ಗಳು ಓಪನ್: ಜನನಿಬಿಡ ಪ್ರದೇಶದಲ್ಲಿ ಮಾಸ್ಕ್‌ ಧರಿಸಲು ಸಲಹೆ

ಆಪರೇಷನ್ ಸಿಂಧೂರ್‌ನಿಂದ ಪಾಕ್‌ ಗಡಿಯಲ್ಲಿ ಪ್ರತಿ ಹೆಜ್ಜೆಯಿಡುವಾಗಲೂ ಯೋಚಿಸುವಂತೆ ಮಾಡಿದೆ: ಶಶಿ ತರೂರ್‌

Karnataka Weather: ವಾರದ ಮಳೆಗೆಯೇ ಸುಸ್ತಾದ ದಕ್ಷಿಣ ಕನ್ನಡ ಜನತೆ

Dehli Rain: ವಿಮಾನ ಹಾರಾಟಗಳಲ್ಲೂ ವ್ಯತ್ಯಯ ಸಾಧ್ಯತೆ, ಪ್ರಯಾಣಿಕರಿಗೆ ಹೊಸ ಸಂದೇಶ

ಮುಂದಿನ ಸುದ್ದಿ
Show comments