Webdunia - Bharat's app for daily news and videos

Install App

ಸೀತೆಯ ತವರಿಗೆ ಹೋಗುತ್ತಿಲ್ಲ ಮೋದಿ....

Webdunia
ಶುಕ್ರವಾರ, 21 ನವೆಂಬರ್ 2014 (09:01 IST)
ನೇಪಾಳದ ಜನಕಪುರಿಗೆ ಮೋದಿಯವರ ಯೋಜಿತ ಭೇಟಿ ರದ್ದುಗೊಂಡಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಹಿಂದು ಪುರಾಣದ ಪ್ರಕಾರ, ಜನಕಪುರ ರಾಮಾಯಣ ಮಹಾಕಾವ್ಯದ ಪ್ರಧಾನ ಪಾತ್ರ ಸೀತೆಯ ತವರಾಗಿದ್ದು, ಅಲ್ಲಿ ಪ್ರಸಿದ್ಧ ಹಿಂದೂ ದೇವಾಲಯವಿದೆ.
 
"ಜನಕಪುರಿಗೆ ಭಾರತೀಯ ಪ್ರಧಾನಿ ಭೇಟಿ ರದ್ದುಗೊಂಡಿದೆ ಎಂದು ಕಠ್ಮಂಡುವಿನಲ್ಲಿರುವ ಭಾರತೀಯ ರಾಯಭಾರಿ ತಿಳಿಸಿದ್ದಾರೆ ಎಂದು ಹೇಳಲು ವಿಷಾದಿಸುತ್ತೇವೆ," ಎಂದು ನೇಪಾಳದ ಶಾರೀರಿಕ ಮೂಲಸೌಕರ್ಯ ಮತ್ತು ಸಾರಿಗೆ ನಿರ್ವಹಣಾ ಸಚಿವ ಬಿಮಲೇಂದ್ರ ನಿಧಿ ಹೇಳಿದ್ದಾರೆ.
 
ನೇಪಾಳದಲ್ಲಿ ನಡೆಯಲಿರುವ 18ನೇ ಸಾರ್ಕ್ ಶೃಂಗಸಭೆ ಹಾಜರಾಗಲಿರುವ ಮೋದಿಯವರು, ಬಿಡುವಿನ ಸಮಯದಲ್ಲಿ ಜನಕಪುರಿಗೆ ಭೇಟಿ ನೀಡಲು ಯೋಜಿಸಿದ್ದರು.ಆಗಸ್ಟ್ ಮೊದಲ ವಾರದಲ್ಲಿ ನೇಪಾಳಕ್ಕೆ ಅಧಿಕೃತ ಭೇಟಿ ನೀಡಿದ್ದ ಅವರು ಜನಕಪುರವನ್ನು ಸಂದರ್ಶಿಸುವ  ಭರವಸೆ ನೀಡಿದ್ದರು. ಮೋದಿಯವರ ಭೇಟಿಯ ಹಿನ್ನೆಲೆಯಲ್ಲಿ ಭಾರತೀಯ ಭದ್ರತಾ ತಂಡ ಕೂಡ ಜನಕಪುರಕ್ಕೆ ಮುಂಗಡವಾಗಿ ಭೇಟಿ ನೀಡಿತ್ತು. ಪ್ರಧಾನಿ ಭೇಟಿಗೆ ಮುಂಜಾಗ್ರತೆಯಾಗಿ ಭಾರತ ನೇಪಾಳ ಗಡಿಯಲ್ಲಿ ಹೆಚ್ಚಿನ ಭದ್ರತೆಯನ್ನು ಕೈಗೊಳ್ಳಲಾಗಿದೆ. 
 
ಬೌದ್ಧ ಮತ್ತು ಹಿಂದೂ ಧಾರ್ಮಿಕ ಕ್ಷೇತ್ರಗಳಾದ ಲುಂಬಿನಿ ಮತ್ತು ಮುಕ್ತಿನಾಥ್‌ಕ್ಕೆ ಪೂರ್ವ ನಿಗದಿಯಂತೆ ಮೋದಿಯವರು ಭೇಟಿ ನೀಡಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.  

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments