Webdunia - Bharat's app for daily news and videos

Install App

ದೀಪಾವಳಿ ದಿನ ಯೋಧರಿಗಾಗಿ ಮಿಡಿದ ಪ್ರಧಾನಿ ಹೃದಯ

Webdunia
ಗುರುವಾರ, 23 ಅಕ್ಟೋಬರ್ 2014 (17:18 IST)
ಇಡೀ ದೇಶಕ್ಕೆ ದೇಶಕ್ಕೆ ದೀಪಾವಳಿ ಸಂಭ್ರಮದಲ್ಲಿ ಮೈಮರೆತಿದ್ದರೆ ಅದೇ ದಿನ ಪ್ರಧಾನಿ ನರೇಂದ್ರ ಮೋದಿ ಹೃದಯ ಯೋಧರಿಗಾಗಿ ಮಿಡಿಯಿತು. ಅದಕ್ಕಾಗಿಯೇ ಅವರು ಈ ಬಾರಿ ದೀಪಾವಳಿಯ ವಿಶೇಷ ಆಚರಣೆಗೆ ನಿರ್ಧರಿಸಿ ಸಿಯಾಚಿನ್‌ಗೆ ತೆರಳಿದರು. ಪ್ರತಿಯೊಬ್ಬ ಯೋಧರ ಕೈಕುಲುಕಿ ಅವರಿಗೆ ಶುಭ ಹಾರೈಸಿದರು. ಅತ್ತ ಪ್ರಧಾನಿ ಸಿಯಾಚಿನ್ ತೆರಳಿ ಯೋಧರನ್ನು ಭೇಟಿ ಮಾಡುವುದಕ್ಕೆ ಮುಂಚಿತವಾಗಿ  ಪಾಕಿಸ್ತಾನದ ಗಡಿಯಾಚೆ ಕದನವಿರಾಮ ಉಲ್ಲಂಘಿಸಿ ಪಾಕ್ ಯೋಧರು ಬಿಎಸ್‌ಎಫ್ ಯೋಧರ ಮೇಲೆ  ಗುಂಡಿನ ದಾಳಿ ಮುಂದುವರಿಸಿದ್ದರು.

ಸಿಯಾಚಿನ್‌ನಲ್ಲಿ ಪ್ರಧಾನಿ ಮಾತನಾಡುತ್ತಾ,   ಯೋಧರೊಂದಿಗೆ ದೀಪಾವಳಿ ಹಬ್ಬ ಆಚರಿಸುವುದು ನನ್ನ ಭಾಗ್ಯ ಎಂದು ಹೇಳಿದರು. ಜಮ್ಮುಕಾಶ್ಮೀರದಲ್ಲಿ ಪ್ರವಾಹದ ವೇಳೆ ಯೋಧರ ಕಾರ್ಯ ಶ್ಲಾಘನೀಯ, ಯೋಧರಿಂದಲೇ ನಾವೆಲ್ಲರೂ ಸುರಕ್ಷಿತವಾಗಿದ್ದೇವೆ ಎಂದು ಮೋದಿ ಹೇಳಿದರು.

ಈ ದೀಪಾವಳಿ ನನಗೆ ಮರೆಯಲಾಗದ ದಿನ, ದೇಶದ 125 ಕೋಟಿ ಜನರು ಯೋಧರಿಂದ ಸುರಕ್ಷಿತವಾಗಿ ಹಬ್ಬ ಆಚರಿಸುತ್ತಿದ್ದಾರೆ. ನಿಮಗೆ ದೇಶ ಹೆಗಲಿಗೆ ಹೆಗಲು ಕೊಡುತ್ತದೆ. ಈ ದೀಪಾವಳಿ ನನಗೆ ಅತ್ಯಂತ ವಿಶೇಷವಾದದ್ದು. ನಿಮ್ಮ ಕನಸು , ಜವಾಬ್ದಾರಿ ನಮ್ಮೆಲ್ಲರ ಜವಾಬ್ದಾರಿ ಎಂದು ಪ್ರಧಾನಿ ಯೋಧರುನ್ನುದ್ದೇಶಿಸಿ ಹೇಳಿದರು. 

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments