ಬಿಜೆಪಿಯ ಮೇಲೆ ಪ್ರಖರ ವಾಗ್ದಾಳಿ ನಡೆಸಿರುವ ಕಾಂಗ್ರೆಸ್ ವಕ್ತಾರ ಅಭಿಷೇಕ್ ಸಿಂಘ್ವಿ ಬಿಜೆಪಿಯ ಪ್ರಧಾನಮಂತ್ರಿ ಅಭ್ಯರ್ಥಿ ನರೇಂದ್ರ 'ಮೋದಿ ಭಾರತಕ್ಕೆ ಹಾನಿ ಮಾಡುವ ಪುರುಷ' ( ಮ್ಯಾನ್ ಆಫ್ ಡೆಮೆಜ್ ಟು ಇಂಡಿಯಾ) ಎಂದಿದ್ದಾರೆ .
ಮೋದಿಯ ಕಾಂಗ್ರಸ್ಸಿನಲ್ಲಿ ಆರ್ವಿಎಸ್ಪಿ ಮಾದರಿ (RVSP- ರಾಹುಲ್, ಸೋನಿಯಾ, ವಾಧ್ರಾ,ಪ್ರಿಯಾಂಕಾ) ಎಂಬ ಹೇಳಿಕೆಗೆ ಉತ್ತರವಾಗಿ ಅವರು ಈ ರೀತಿಯಾಗಿ ಪ್ರತಿಕ್ರಿಯಿಸಿದ್ದು, ಬಿಜೆಪಿಯನ್ನು 'ಭಾರತವನ್ನು ಸುಡುವ (ಜಲಾವೋ) ಪಾರ್ಟಿ' ಎಂದು ಟೀಕಿಸಿದ್ದಾರೆ.
ಬಿಜೆಪಿ ಸಹೋದರರ ವಿರುದ್ಧ ಸಹೋದರರನ್ನು ಉತ್ತೇಜಿಸುವ ಮತ್ತು ಒಡಕಿನ ರಾಜಕೀಯದಲ್ಲಿ ತೊಡಗಿದೆ ಎಂದು ಅವರು ಹೇಳಿದ್ದಾರೆ.
'ಮೋದಿ ಪರ ಗಿರಿರಾಜ್ ಸಿಂಗ್ರ ಹೇಳಿಕೆಯನ್ನು ಪ್ರಸ್ತಾಪಿಸಿದ ಅವರು ಸಿಂಗ್ ಹೇಳಿಕೆಗಳು
ಬಿಜೆಪಿ ಸಮುದಾಯಗಳ ನಡುವೆ ಬಿರುಕು ಉಂಟುಮಾಡುವ ಮತ್ತು ತಮ್ಮ ಅನುಕೂಲಕ್ಕೆ ತಕ್ಕಂತೆ ರಾಷ್ಟ್ರವನ್ನು ವಿಭಾಗಿಸುವ ಸಿದ್ಧಾಂತದಲ್ಲಿ ನಂಬಿಕೆ ಇಡುತ್ತದೆ ಎಂಬುದನ್ನು ಸ್ಪಷ್ಟ ಪಡಿಸುತ್ತದೆ. ಆದರೆ ಇಂದು ನಾನು ಗುಜರಾತ್ ಅಭಿವೃದ್ಧಿ ಬಗ್ಗೆ ಮೋದಿ ಹೇಳಿರುವ ಸುಳ್ಳು ಮತ್ತು ತಪ್ಪು ದಾರಿಗೆ ಎಳೆಯುವ ಪ್ರಚಾರದ ವಿರುದ್ಧ ಮಾತನಾಡಲು ಇಲ್ಲಿಗೆ ಬಂದಿದ್ದೇನೆ' ಎಂದು ಸಿಂಘ್ವಿ ಹೇಳಿದರು.
"ನಾನು ಗುಜರಾತ್ ಅಭಿವೃದ್ಧಿಯಾಗಿದೆ ಎಂಬುದನ್ನು ಒಪ್ಪಿಕೊಳ್ಳುತ್ತೇನೆ. ಆದರೆ ಅದು ಗುಜರಾತಿ ಜನರ ಉದ್ಯಮಶೀಲ ಸ್ವಭಾವದಿಂದಾಗಿ; ಬಿಜೆಪಿ ಅಥವಾ ಮೋದಿ ಮುಖ್ಯಮಂತ್ರಿ ಎಂಬ ಕಾರಣಕ್ಕಾಗಿ ಅಲ್ಲ" ಎಂದು ಅವರು ಅಭಿಪ್ರಾಯ ಪಟ್ಟರು.