Select Your Language

Notifications

webdunia
webdunia
webdunia
webdunia

ಮೋದಿಯನ್ನು ದೇವರೆಂದು ಬಿಂಬಿಸುತ್ತಿರುವ ನಾಯಕರಿಂದಲೇ ಅವನತಿ: ಶಿವಸೇನೆ

ಮೋದಿಯನ್ನು ದೇವರೆಂದು ಬಿಂಬಿಸುತ್ತಿರುವ ನಾಯಕರಿಂದಲೇ ಅವನತಿ: ಶಿವಸೇನೆ
ಮುಂಬೈ , ಬುಧವಾರ, 27 ಏಪ್ರಿಲ್ 2016 (12:31 IST)
ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು ದೇವರನ್ನಾಗಿಸಿರುವ ಹಿರಿಯ ಬಿಜೆಪಿ ಭಕ್ತರು, ಮುಂದೊಂದು ದಿನ ಮೋದಿವರನ್ನು ಇಕ್ಕಟ್ಟಿಗೆ ಸಿಲುಕಿಸುವ ಸಾಧ್ಯತೆಗಳಿರುವುದರಿಂದ ಎಚ್ಚರಿಕೆವಹಿಸಬೇಕು ಎಂದು ಶಿವಸೇನೆ ಸಲಹೆ ನೀಡಿದೆ.
 
ಇತ್ತೀಚೆಗೆ ಹಿರಿಯ ಬಿಜೆಪಿ ಮುಖಂಡ ವೆಂಕಯ್ಯಾ ನಾಯ್ಡು, ಪ್ರಧಾನಿ ಮೋದಿ ದೇವರು ದೇಶಕ್ಕೆ ಕೊಟ್ಡ ಬಹುದೊಡ್ಡ ಉಡುಗೊರೆ ಎಂದು ಹೊಗಳಿದ್ದರು. ಮತ್ತೊಬ್ಬ ಹಿರಿಯ ಸಚಿವ ರಾಧಾ ಮೋಹನ್ ಸಿಂಗ್ ಕೂಡಾ ಮೋದಿಯವರನ್ನು ದೇವರಿಗೆ ಹೋಲಿಸಿ ಹೇಳಿಕೆ ನೀಡಿದ್ದರು. 
 
ಪ್ರಧಾನಮಂತ್ರಿ ಮೋದಿ ದೇವರ ಅವತಾರವೆಂದು ಕೆಲ ಹಿರಿಯ ಬಿಜೆಪಿ ನಾಯಕರು ಬಣ್ಣಿಸುತ್ತಿದ್ದಾರೆ. ಕೆಲವರು ಮೋದಿ ಹೆಸರಲ್ಲಿ ದೇವಾಲಯಗಳನ್ನು ನಿರ್ಮಿಸಲು ಹೊರಟಿದ್ದಾರೆ. ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಗದಿದ್ದರೂ ಪರವಾಗಿಲ್ಲ. ಆದರೆ,. ಹೊಸದೇವರಾದ ಮೋದಿ ಬಗ್ಗೆ ಶ್ಲೋಕಗಳನ್ನು ಹೇಳಲಾಗುತ್ತಿದೆ ಎಂದು ಶಿವಸೇನೆ ತನ್ನ ಮುಖವಾಣಿ ಸಾಮ್ನಾದಲ್ಲಿ ಲೇವಡಿ ಮಾಡಿದೆ.
 
ಮಾಜಿ ಪ್ರಧಾನಿ ಇಂದಿರಾ ಗಾಂಧಿ ಕೂಡಾ ತುರ್ತುಪರಿಸ್ಥಿತಿ ಸಂದರ್ಭದಲ್ಲಿ ಜಾಹೀರಾತಿಗಾಗಿ ಕೋಟಿ ಕೋಟಿ ಹಣವನ್ನು ಸುರಿದಿದ್ದರು. ಆದರೆ, 1975-77ರಲ್ಲಿ ನಡೆದ ಚುನಾವಣೆಯಲ್ಲಿ ಸೋಲನುಭವಿಸಿದ್ದನ್ನು ಬಿಜೆಪಿ ನೆನಪಿಡಬೇಕು ಎಂದು ಶಿವಸೇನೆ ಎಚ್ಚರಿಕೆಯ ಸಂದೇಶ ರವಾನಿಸಿದೆ.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಪ.ಬಂಗಾಳ ಚುನಾವಣೆ: ಐದನೇ ಹಂತದಲ್ಲಿ 43 ಕೋಟ್ಯಾಧಿಪತಿಗಳು, 67 ಅಪರಾಧಿಗಳು ಕಣದಲ್ಲಿ