Webdunia - Bharat's app for daily news and videos

Install App

ಮೋದಿ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ: ಆಪ್

Webdunia
ಸೋಮವಾರ, 1 ಆಗಸ್ಟ್ 2016 (16:08 IST)
ನರೇಲಾ ಶಾಸಕ ಶರದ್ ಚೌಹಾನ್ ಬಂಧನದೊಂದಿಗೆ ಇಲ್ಲಿಯವರೆಗೆ ಬಂಧನಕ್ಕೊಳಗಾದ ಆಪ್ ಶಾಸಕರ ಸಂಖ್ಯೆ 12ಕ್ಕೇರಿದ್ದು, ಎಂದಿನಂತೆ ಪ್ರಧಾನಿ ಮೋದಿ ವಿರುದ್ಧ ದೆಹಲಿಯ ಆಡಳಿತಾ ರೂಢ ಪಕ್ಷ ಕಿಡಿಕಾರಿದೆ.  ಪ್ರಧಾನಿ ಮಾನಸಿಕ ಸ್ಥಿಮಿತವನ್ನು ಕಳೆದುಕೊಂಡಿದ್ದಾರೆಯೇ ಎಂದು ಪ್ರಶ್ನಿಸಿರುವ ಆಪ್ ಇಂತಹ ಪ್ರತೀಕಾರ ತೀರಿಸಿಕೊಳ್ಳುವ ಮನುಷ್ಯನ ಕೈಯ್ಯಲ್ಲಿ ದೇಶ ಸುರಕ್ಷಿತವಾಗಿರಲು ಸಾಧ್ಯವೇ? ಎಂದು ಗುಡುಗಿದೆ.

ಪ್ರತಿ ಕ್ಷಣವನ್ನು ಮೋದಿ ರಾಜಕೀಯ ಶತ್ರುಗಳ ವಿರುದ್ಧ ಸಂಚು ರೂಪಿಸಲು ವ್ಯಯಿಸುತ್ತಾರೆ. ರಾಜಕೀಯ ಪೀಡನೆ ನೀಡುವುದರಲ್ಲೇ ಮೋದಿ ಹೆಚ್ಚಿನ ಕಾಳಜಿ ಹೊಂದಿದ್ದಾರೆ ಎಂದು ಆಪ್ ನಾಯಕ ಆಶಿಷ್ ಖೇತನ್ ಆರೋಪಿಸಿದ್ದಾರೆ.

ಮೋದಿ ಅವರು ಈ ದೇಶದ ಪ್ರಧಾನಿಯಾಗಲು ಸಂಪೂರ್ಣವಾಗಿ ಅನರ್ಹರು.  ತಮ್ಮ ಪ್ರತಿ ಕ್ಷಣವನ್ನು ರಾಜಕೀಯ ಶತ್ರುಗಳನ್ನು ಮಟ್ಟ ಹಾಕಬೇಕೆಂಬ ದುರುದ್ದೇಶದಲ್ಲಿಯೇ ಕಳೆಯುವ ವ್ಯಕ್ತಿಯ ಕೈಯ್ಯಲ್ಲಿ ದೇಶದ ಆಡಳಿತ ಸುರಕ್ಷಿತ ಎಂದು ಹೇಗೆ ವಿಶ್ವಾಸವಿಡಲು ಸಾಧ್ಯ. ಈ ವ್ಯಕ್ತಿ ಮಾನಸಿಕವಾಗಿ ಮತ್ತು ಸ್ವಭಾವದಿಂದ ದೇಶವನ್ನು ಮುನ್ನಡೆಸಲು ಸಮರ್ಥರೆ? ಎಂದು ಅವರು ಪ್ರಶ್ನಿಸಿದ್ದಾರೆ.

ಮೋದಿ ಅವರು ನಡೆಸುತ್ತಿರುವ ಸೇಡಿನ ರಾಜಕೀಯದ ಆಳ್ವಿಕೆ ದೇಶಕ್ಕೆ ಅಪಾಯಕಾರಿ. ವ್ಯವಸ್ಥಿತವಾಗಿ ಅವರು ವಿರೋಧಿಗಳನ್ನು ಗುರಿಯಾಗಿಸುತ್ತಿದ್ದಾರೆ. ಗುಜರಾತ್ ಕೇಡರ್ ಐಎಎಸ್ ಅಧಿಕಾರಿ ಪ್ರದೀಪ್ ಶರ್ಮಾ, ಇತರ ಅಧಿಕಾರಿಗಳು, ಅಥವಾ ದೆಹಲಿಯಲ್ಲಿ ಎಎಪಿ ಸರ್ಕಾರದ ವಿರುದ್ಧದ ಕ್ರಮಗಳೇ ಇದಕ್ಕೆ ಸಾಕ್ಷಿ ಎಂದು ಅವರು ಆರೋಪಿಸಿದ್ದಾರೆ.

ಆಪ್ ಕಾರ್ಯಕರ್ತೆಯೊಬ್ಬಳ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಚೌಹಾನ್ ಅವರನ್ನು ಬಂಧಿಸಿದ್ದಾರೆ. ಅವರ ಬಂಧನದೊಂದಿಗೆ ಇಲ್ಲಿಯವರೆಗೆ ಬಂಧನಕ್ಕೊಳಗಾದ ಆಪ್ ಶಾಸಕರ ಸಂಖ್ಯೆ 12ಕ್ಕೇರಿದೆ.

ಈ ಹಿಂದೆ ಕೇಜ್ರಿವಾಲ್ ಸಹ ಪ್ರಧಾನಿ ಮೋದಿಯನ್ನು ಮನೋವಿಕೃತಿ ಹೊಂದಿದ ವ್ಯಕ್ತಿ ಎಂದು ಜರಿದಿದ್ದರು.

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ನಮ್ಮ ಮೆಟ್ರೋ ಹಳದಿ ಲೈನ್ ನಲ್ಲಿ ಇದುವರೆಗೆ ಪ್ರಯಾಣಿಸಿದವರೆಷ್ಟು, ಸಿಎಂ ಮಾಹಿತಿ ಇಲ್ಲಿದೆ

ಬಿಕ್ಲು ಶಿವು ಮರ್ಡರ್ ಪ್ರಕರಣದಲ್ಲಿ ಶಾಸಕ ಭೈರತಿ ಬಸವರಾಜ್ ಗೆ ರಿಲೀಫ್

ಗವಿಸಿದ್ದಪ್ಪ ಕುಟುಂಬದವರಿಗೂ 50 ಲಕ್ಷ ರೂ ಕೊಡಿ: ವಿಜಯೇಂದ್ರ ಆಗ್ರಹ

ಮತಗಳ್ಳತನ ಆರೋಪ ಹೊರಿಸಿದ ಕಾಂಗ್ರೆಸ್ ಗೆ ಸೋನಿಯಾ ಗಾಂಧಿ ದಾಖಲೆ ತೋರಿಸಿದ ಬಿಜೆಪಿ

17ರಂದು ಧರ್ಮಸ್ಥಳಕ್ಕೆ ಭೇಟಿ: ಬಿ.ವೈ.ವಿಜಯೇಂದ್ರ

ಮುಂದಿನ ಸುದ್ದಿ
Show comments