Webdunia - Bharat's app for daily news and videos

Install App

ಭಾಷಣದಲ್ಲಿ ಕಾಂಗ್ರೆಸ್ ಪಕ್ಷವನ್ನು ಚುಚ್ಚಿದ ಪ್ರಧಾನಿ ಮೋದಿ

Webdunia
ಶುಕ್ರವಾರ, 27 ಫೆಬ್ರವರಿ 2015 (15:49 IST)
ರಾಷ್ಟ್ರಪತಿ ಭಾಷಣದ ಚರ್ಚೆಗೆ ಉತ್ತರಿಸುತ್ತಿದ್ದ ಪ್ರಧಾನಿ ಮೋದಿ ಕಾಂಗ್ರೆಸ್ ಪಕ್ಷದ ವಿರುದ್ಧ ಚುಚ್ಚಿ ಮಾತನಾಡಿದರು. ಅವರ ಚುಚ್ಚುಮಾತುಗಳ ಸಾರಾಂಶ ಹೀಗಿದೆ.
1.. ನರೇಗಾ ಯೋಜನೆಯನ್ನು ನಾವು ನಿಲ್ಲಿಸುವುದಿಲ್ಲ. ಇದು ಕಾಂಗ್ರೆಸ್ ವೈಫಲ್ಯದ ಜೀವಂತ ಉದಾಹರಣೆ. ಅಧಿಕಾರದಲ್ಲಿ ಅನೇಕ ವರ್ಷಗಳ ಬಳಿಕ ತಿಂಗಳಿಗೆ ಕೆಲವು ದಿನಗಳು ಬಡ ವ್ಯಕ್ತಿ ಹಳ್ಳಗಳನ್ನು ತೋಡುವುದಕ್ಕೆ ಮಾತ್ರ ಅವಕಾಶ ಮಾಡಿಕೊಟ್ಟಿರಿ.ನನ್ನ ರಾಜಕೀಯ ಆತ್ಮಸಾಕ್ಷಿಯು ನರೇಗಾ ಯೋಜನೆಯನ್ನು ರದ್ದು ಮಾಡಬೇಡಿ ಎಂದು ಹೇಳುತ್ತಿದೆ

 2. ಕಾಂಗ್ರೆಸ್ ಇತಿಹಾಸದಲ್ಲಿ ಅಷ್ಟೊಂದು ಕಳಪೆಯಾಗಿ ಚುನಾವಣೆ ಫಲಿತಾಂಶ ನೀಡಿರಲಿಲ್ಲ. ನಿಮ್ಮ ಭೂ  ಕಾಯ್ದೆಯೊಂದಿಗೆ ಜನರ ಬಳಿ ಹೋಗಿ ಸೋತಿದ್ದೀರಿ. 
 
3. 1947ರಲ್ಲಿ ದೇಶ ಹುಟ್ಟಿತೆಂದು ನಾವು ನಂಬುವುದಿಲ್ಲ. ಇದು ಸಾವಿರಾರು ವರ್ಷಗಳ ಹಿಂದೆ ಜನ್ಮತಾಳಿದೆ. ಸರ್ಕಾರಗಳು ಬರುತ್ತವೆ, ಹೋಗುತ್ತವೆ, ರಾಷ್ಟ್ರವನ್ನು ಜನರು ಬಲದಿಂದ ಸಾಮರ್ಥ್ಯದಿಂದ ನಿರ್ಮಿಸುತ್ತಾರೆ.
 
4. ಕಪ್ಪು ಹಣದ ಬಗ್ಗೆ ಮಾತನಾಡುವುದನ್ನು ತಪ್ಪಿಸುತ್ತಿದ್ದ ಜನರೇ ಈಗ ಕಪ್ಪು ಹಣದ ಬಗ್ಗೆ ಮಾತನಾಡುತ್ತಿದ್ದಾರೆ. ನಾವು ಕಪ್ಪು ಹಣವನ್ನು ರಾಷ್ಟ್ರೀಯ ಕಾರ್ಯಸೂಚಿಯಲ್ಲಿ ಇರಿಸಿರುವುದೇ ಮಹತ್ತರ ಯಶಸ್ಸು ಎಂದು ಪ್ರಧಾನಿ ನುಡಿದರು. 
 

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments