Select Your Language

Notifications

webdunia
webdunia
webdunia
webdunia

ಸಚಿವ ಆಜಂ ಖಾನ್ ಒಬ್ಬ ಉಗ್ರ; ದಾವೂದ್, ಅಬು ಸಲೇಂ ಸಂಬಂಧಿಕ?

ಸಚಿವ ಆಜಂ ಖಾನ್ ಒಬ್ಬ ಉಗ್ರ; ದಾವೂದ್, ಅಬು ಸಲೇಂ ಸಂಬಂಧಿಕ?
ಲಖನೌ , ಸೋಮವಾರ, 22 ಡಿಸೆಂಬರ್ 2014 (10:33 IST)
ಉತ್ತರಪ್ರದೇಶದ ಸರಕಾರದ ಸಚಿವ ಆಜಂ ಖಾನ್ ಭಯೋತ್ಪಾದಕ ಎನ್ನುವುದರ ಮೂಲಕ ಕೇಂದ್ರದ ಕೃಷಿ ರಾಜ್ಯ ಮಂತ್ರಿ ಸಂಜೀವ್ ಬಲಿಯಾನ್ ಹೊಸ ವಿವಾದವೊಂದನ್ನು ಹುಟ್ಟು ಹಾಕಿದ್ದಾರೆ. 
ಆಜಂ ಕಾನ್ ರಾಷ್ಟ್ರೀಯ ಸ್ವಯಂ ಸೇವಕ ಸಂಘವನ್ನು ಉಗ್ರ ಸಂಘಟನೆ ಎಂದು ಆರೋಪಿಸಿದ್ದಕ್ಕೆ ಪ್ರತಿಯಾಗಿ ಬಲಿಯಾನ್ ಈ ಹೇಳಿಕೆ ನೀಡಿದ್ದಾರೆ. 
 
ಉತ್ತರಪ್ರದೇಶದ ಮುಜಪ್ಫರ್ ನಗರದಲ್ಲಿ ರೈತರ ಸಭೆಯೊಂದನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಅವರು ಆಜಂ ಖಾನ್ ಸ್ವತಃ ತಾವೇ ಒಬ್ಬ ಭಯೋತ್ಪಾದಕರಾಗಿದ್ದಾರೆ. ಅವರು ಉಗ್ರರ ಜತೆ ಹಣವನ್ನು ಪಡೆದುಕೊಂಡು ಜನ್ಮದಿನವನ್ನು ಆಚರಿಸುತ್ತಾರೆ.  ರಾಜ್ಯದಲ್ಲಿ ನಡೆಯುವ ಎಲ್ಲ ದಂಗೆಗಳ ಹಿಂದೆ ಅವರ  ಹೆಸರು ಕೇಳಿಬರುತ್ತದೆ. ಅಪರಾಧಿಗಳನ್ನು ರಕ್ಷಿಸುವ ಕೆಲಸವನ್ನವರು ಮಾಡುತ್ತಾರೆ. ನಿಜವಾದ ಅಪರಾಧಿ ಖಾನ್ ಅವರೇ. ಅವರನ್ನು ಮುಖ್ಯಮಂತ್ರಿಗಳು ಮೊದಲು ವಜಾ ಮಾಡಬೇಕು ಎಂದರು. 
 
 
ಇನ್ನೊಂದು ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ  ಬಿಜೆಪಿ ಶಾಸಕ ಸುರೇಶ್ ರಾಣಾ ಒಂದು ಹೆಜ್ಜೆ ಮುಂದೆ ಹೋಗಿ ಆಜಂ ಖಾನ್, ಮೋಸ್ಟ್ ವಾಂಟೆಡ್ ಪಾತಕಿ ದಾವೂದ್ ಇಬ್ರಾಹಿಂ ಮತ್ತು ಉಗ್ರ  ಅಬು ಸಲೇಂ ಸಂಬಂಧಿಕ, ಈ ಕುರಿತು ರಾಜ್ಯ ಮತ್ತು ಕೇಂದ್ರ ಸರಕಾರಗಳು ಈ ಕುರಿತು ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.
 
ಬಲವಂತದ ಮತಾಂತರದ ಕುರಿತು ಮಾತನಾಡಿದ ಅವರು ತಾನು ಕೂಡ ಇದನ್ನು ವಿರೋಧಿಸುತ್ತೇನೆ, ಆದರೆ ಸ್ವಇಚ್ಛೆಯಿಂದ, ಸ್ವಧರ್ಮಕ್ಕೆ ಮರಳ ಬಯಸಿದರೆ ಅದನ್ನು ಸ್ವಾಗತಿಸಬೇಕು ಎಂದರು.

Share this Story:

Follow Webdunia kannada