Webdunia - Bharat's app for daily news and videos

Install App

ಜಾತಿವಾದವನ್ನು ಕಿತ್ತೊಗೆಯಿರಿ, ಅಭಿವೃದ್ಧಿಯತ್ತ ನಡೆಯಿರಿ: ಬಿಹಾರದಲ್ಲಿ ಮೋದಿ

Webdunia
ಶುಕ್ರವಾರ, 22 ಮೇ 2015 (16:02 IST)
ಬಿಹಾರ ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಬಿಹಾರದ ಮತದಾರರಲ್ಲಿ ಜಾತೀಯತೆ ಕಿತ್ತೊಗೆದು ಅತ್ಯಂತ ಸದ್ಗುಣಶೀಲರಿಗೆ ಮತವನ್ನು ನೀಡಿ ಎಂದು ಪ್ರಧಾನಿ ಮೋದಿಯವರು ಮನವಿ ಮಾಡಿದ್ದಾರೆ. 

ಕವಿ ರಾಮಧಾರಿ ಸಿಂಗ್ ದಿನಕರ್ ಅವರ ಕೃತಿಗಳ ಸುವರ್ಣ ವರ್ಷಾಚರಣೆ ಪ್ರಯುಕ್ತ ಆಯೋಜಿಸಲಾಗಿದ್ದ ಸಮಾರಂಭವನ್ನು ಉದ್ಘಾಟಿಸಿ, ಮಾತನಾಡಿದ ಪ್ರಧಾನಿ, "ರಾಜ್ಯದ ಪ್ರಗತಿ ಮತ್ತು ಸಮೃದ್ಧಿಯ ವಿಷಯದಲ್ಲಿ ತಾವು ಬದ್ಧರಾಗಿದ್ದೇವೆ", ಎಂದಿದ್ದಾರೆ. 
 
ಪಶ್ಚಿಮ ಭಾರತ ಸಮೃದ್ಧಿಯನ್ನು ಹೊಂದಿದ್ದರೆ, ಪೂರ್ವಭಾಗ ಜ್ಞಾನವನ್ನು ಹೊಂದಿದೆ. ದೇಶದ ಎರಡು ವಿಭಾಗಗಳು ದೇಶದ ಅಭಿವೃದ್ಧಿಯಲ್ಲಿ ಸಮಾನ ಪಾಲು ಹೊಂದಬಹುದು ಎಂದು ಮೋದಿ ಅಭಿಪ್ರಾಯ ಪಟ್ಟಿದ್ದಾರೆ. 
 
ಕವಿ ದಿನಕರ್ 1961 ರಲ್ಲಿ ಬರೆಯ ಒಂದು ಪತ್ರವನ್ನು ಉಲ್ಲೇಖಿಸಿ ಮಾತನಾಡಿದ ಅವರು, "ಬಿಹಾರ ಜನತೆ ಜಾತಿ ಪದ್ಧತಿಯನ್ನು ಮೀರಿ ನಡೆಯಬೇಕು ಮತ್ತು ಪ್ರಾಮಾಣಿಕರಿಗೆ ಬೆಂಬಲ ನೀಡಬೇಕು. ನೀವು ಒಂದು ಅಥವಾ ಎರಡು ಜಾತಿಗಳ ಸಹಾಯದಿಂದ ಆಡಳಿತ ನಡೆಸಲು ಸಾಧ್ಯವಿಲ್ಲ.  ಜಾತಿಪದ್ಧತಿಯನ್ನು ಕಿತ್ತೆಸೆಯದಿದ್ದರೆ ಬಿಹಾರದ ಸಾಮಾಜಿಕ ಬೆಳವಣಿಗೆ ಕುಂಠಿತಗೊಳ್ಳಲಿದೆ", ಎಂದು ಎಚ್ಚರಿಗೆ ನೀಡಿದ್ದಾರೆ. 

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments