Webdunia - Bharat's app for daily news and videos

Install App

ಬೇರೆಯವನ ಹೆಂಡತಿಗೆ ಫೋನ್‌ ಕರೆ ಮಾಡಿ ಜೀವ ಕಳೆದುಕೊಂಡ ನತದೃಷ್ಠ

Webdunia
ಶನಿವಾರ, 24 ಜನವರಿ 2015 (14:25 IST)
ಯುವಕನೋರ್ವ ಯುವತಿಗೆ ಮಿಸ್ಡ್ ಕಾಲ್ ಕೊಟ್ಟು ತನ್ನ ಪ್ರಾಣವನ್ನೇ ಕಳೆದುಕೊಂಡ ಘಟನೆ ನೆರೆಯ ಆಂಧ್ರಪ್ರದೇಶದಲ್ಲಿ ನಡೆದಿದೆ.
 
ಆಂಧ್ರಪ್ರದೇಶದ ಅದಿಲಾಬಾದ್ ಜಿಲ್ಲೆಯ ವೇಮನಪಲ್ಲಿ ತಾಲ್ಲೂಕಿನ ಜಕ್ಕಪಲ್ಲಿ ಗ್ರಾಮದ 25 ವರ್ಷದ ನಂದನ್ ಎಂಬಾತ ದುರಂತಕ್ಕೀಡಾದ ಯುವಕನಾಗಿದ್ದಾನೆ. ನಂದನ್ ತನ್ನದೇ ಗ್ರಾಮದ ಯುವತಿಯೋರ್ವಳನ್ನು ಇಷ್ಟಪಟ್ಟಿದ್ದು, ಸ್ನೇಹಿತರಿಂದ ಆಕೆಯ ಮೊಬೈಲ್ ನಂಬರ್ ಸಂಪಾದಿಸಿ ಅದಕ್ಕೆ ಮಿಸ್ಡ್‌ಕಾಲ್ ನೀಡಿದ್ದಾನೆ. ಆದರೆ ನಂದನ್ 'ಮಿಸ್‌' ಎಂದು ತಿಳಿದು ಮಿಸ್ಡ್ ಕಾಲ್ ನೀಡಿದ ಯುವತಿ ಬೇರೊಬ್ಬರಿಗೆ ಮಿಸಸ್ ಆಗಿದ್ದಳು ಎಂಬ ವಿಚಾರ ಮಾತ್ರ ಆತನಿಗೆ ತಿಳಿದಿರಲಿಲ್ಲ.
 
ಆತ್ತ ಯುವತಿಯು ತನ್ನ ಮೊಬೈಲ್‌ನಲ್ಲಿ ದಾಖಲಾಗಿದ್ದ ಹೊಸ ನಂಬರ್ ಯಾವುದು ಎಂದು ತಿಳಿಯಲು ಮತ್ತೆ ನಂದನ್ ಮೊಬೈಲ್‌ಗೆ ಫೋನಾಯಿಸಿದ್ದಾಳೆ. ಆಗ ಇಬ್ಬರ ನಡುವೆ ಪರಸ್ಪರ ಪರಿಚಯ ಬೆಳೆದಿದ್ದು, ದಿನಕಳೆದಂತೆ ಇಬ್ಬರ ನಡುವೆ ಸ್ನೇಹ ಬೆಳೆದಿದೆ. ಈ ವಿಚಾರ ಯುವತಿಯ ಗಂಡನಿಗೆ ತಿಳಿದಿದ್ದು, ಆಕ್ರೋಶಗೊಂಡ ಯುವತಿಯ ಗಂಡ ನಂದನ್‌ನನ್ನು ಕರೆಸಿಕೊಂಡು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾನೆ. ನೀವು ಫೋನಿನಲ್ಲಿ ಮಾತನಾಡುತ್ತಿರುವ ವಿಚಾರ ನನಗೆ ತಿಳಿದಿದ್ದು, ಈ ಕೂಡಲೇ ಇದನ್ನು ನಿಲ್ಲಿಸಿ. ಇಲ್ಲವಾದರೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿ ಟೆಲಿಫೋನ್ ರೆಕಾರ್ಡಿಂಗ್ ದಾಖಲೆಯನ್ನು ನೀಡುವುದಾಗಿ ಎಚ್ಚರಿಕೆ ನೀಡಿದ್ದಾನೆ.
 
ಯುವತಿಯ ಗಂಡನ ಎಚ್ಚರಿಕೆಯಿಂದಾಗಿ ಭೀತಿಗೊಂಡ ನಂದನ್, ಎಲ್ಲಿ ತನ್ನ ಈ ವಿಚಾರ ಗ್ರಾಮದಲ್ಲಿ ಬಹಿರಂಗವಾಗಿ ತನ್ನ ಮರ್ಯಾದೆ ಹಾಳಾಗುತ್ತದೆಯೋ ಎಂದು ಹೆದರಿ, ಸಮೀಪದ ಅರಣ್ಯದೊಳಗೆ ಹೋಗಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
 

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments