Webdunia - Bharat's app for daily news and videos

Install App

ಗುಜರಾತ್‌ ಚುನಾವಣೆ ಮತಗಳ ಎಣಿಕೆಯಲ್ಲಿ ದೋಷವಾಗಿದೆ ಎಂದ ಚುನಾವಣಾಧಿಕಾರಿ

Webdunia
ಗುರುವಾರ, 21 ಡಿಸೆಂಬರ್ 2017 (15:23 IST)
ಗುಜರಾತ್ ವಿಧಾನಸಭೆ ಚುನಾವಣೆಯಲ್ಲಿ ಎಲೆಕ್ಟ್ರಾನಿಕ್ ಮತಗಳು ಮತ್ತು ಕನಿಷ್ಠ ನಾಲ್ಕು ಮತಗಟ್ಟೆಗಳಲ್ಲಿನ ಕಾಗದದ ಎಣಿಕೆಗಳ ನಡುವಿನ ಅಂಕಿಗಳು ಹೊಂದಾಣಿಕೆಯಾಗಿಲ್ಲ ಎಂದು ಚುನಾವಣಾಧಿಕಾರಿ ಒಪ್ಪಿಕೊಂಡಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ.

ಚುನಾವಣಾಧಿಕಾರಿ ಬಿಬಿ ಸ್ವೈನ್ ಆಘಾತಕಾರಿ ಮತಯಂತ್ರಗಳ ದೋಷವನ್ನು ಬಹಿರಂಗವಾಗಿ ಒಪ್ಪಿಕೊಂಡಿದ್ದರೂ ಯಾವುದೇ ಖಾಸಗಿ ಚಾನೆಲ್‌ಗಳು ಸುದ್ದಿಯನ್ನು ಬಹಿರಂಗಪಡಿಸದಿರುವುದು ಮತ್ತಷ್ಟು ಆಘಾತ ತಂದಿದೆ ಎನ್ನಲಾಗಿದೆ.
 
ಮತಯಂತ್ರಗಳ ದೋಷವನ್ನು ಬಿತ್ತರಿಸದ ಮಾಧ್ಯಮಗಳು ಮತಯಂತ್ರಗಳು ವಿವಿಪ್ಯಾಟ್‌ನೊಂದಿಗೆ ಶೇ.100 ರಷ್ಟು ಹೊಂದಾಣಿಕೆಯಾಗಿವೆ ಎಂದು ಪ್ರಚಾರ ನೀಡಿ ತಮ್ಮ ಪಕ್ಷಪಾತ ಧೋರಣೆಯನ್ನು ತೋರಿ ಮಾಧ್ಯಮ ವೃತ್ತಿಗೆ ಮಸಿಬಳೆದ ಘಟನೆ ನಡೆದಿದೆ ಎಂದು ವಿಪಕ್ಷಗಳು ತಿರುಗೇಟು ನೀಡಿವೆ.
 
ಚುನಾವಣಾ ಆಯೋಗವು ಮತಗಳನ್ನು ಸರಿಹೊಂದಿಸುವ ಪರೀಕ್ಷೆ ನಡೆಸಲು ಪ್ರತಿ ಕ್ಷೇತ್ರದ ಒಂದು ಮತಗಟ್ಟೆಯನ್ನು ಆಯ್ಕೆ ಮಾಡಿಕೊಂಡಿರುತ್ತದೆ. ಇವಿಎಂಗಳಲ್ಲಿರುವ ಮತಗಳು ವಿವಿಪ್ಯಾಟ್‌ನಲ್ಲಿರುವ ಮತಗಳೊಂದಿಗೆ ಹೊಂದಾಣಿಕೆಯಾಗುತ್ತಿಲ್ಲ. ಮತ ಎಣಿಕೆಯಲ್ಲಿ ದೋಷವಾಗಿದೆ ಎಂದು ಸ್ವತಃ ಚುನಾವಣಾಧಿಕಾರಿ ಹೇಳಿಕೆ ನೀಡಿರುವುದು ವಿಪಕ್ಷಗಳಿಗೆ ಮತ್ತೊಂದು ಅಸ್ತ್ರ ದೊರೆತಂತಾಗಿದೆ.
 
ವಿ.ವಿ.ಪಿ.ಟಿ. ಪರಿಶೀಲನಾ ಪ್ರಕ್ರಿಯೆಗಳೊಂದಿಗೆ ಇಸಿ ಅಳವಡಿಸಿಕೊಂಡ ಗೌಪ್ಯತೆ ಮತ್ತು ಪಾರದರ್ಶಕತೆಯ ಕಾರಣದಿಂದ ಈ ತಪ್ಪು ಹೊಂದಾಣಿಕೆಯ ನಿಜಾಂಶವನ್ನು ಪರಿಶೀಲಿಸಲಾಗುವುದಿಲ್ಲ. ಫಲಿತಾಂಶವನ್ನು ಘೋಷಿಸುವ ಮೊದಲು ಅಭ್ಯರ್ಥಿಗಳು ಮತ್ತು ಎಣಿಕೆ ಏಜೆಂಟ್‌ಗಳ ಮುಂದೆ ಇಂತಹ ಪರಿಶೀಲನೆ ಎಣಿಕೆ ಮಾಡುವುದು ಇಸಿ ಸಂವಿಧಾನಾತ್ಮಕ ಕರ್ತವ್ಯವಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

UP Encounter: 3 ವರ್ಷದ ಬಾಲಕಿಯನ್ನು ರೇಪ್ ಮಾಡಿದ ಆರೋಪಿ ಯುಪಿ ಪೊಲೀಸರಿಂದ ಎನ್ ಕೌಂಟರ್

Bengaluru Stampede: ಡಿಸಿಎಂ ವಿರುದ್ದವೇ ಆರೋಪಿಸಿ, ಪತಿಯ ಬಂಧನ ಪ್ರಶ್ನಿಸಿದ ನಿಖಿಲ್ ಸೋಸಲೆ ಪತ್ನಿ

ದುರ್ಘಟನೆಯಲ್ಲಿ ಪೊಲೀಸರನ್ನು ಹರಕೆಯ ಕುರಿ ಮಾಡಿದ್ದಾರೆ: ವಿಜಯೇಂದ್ರ

Chenab bridge inauguration, ಬ್ರಿಟಿಷರು ಮಾಡಲು ಸಾಧ್ಯವಾಗದ್ದನ್ನು, ಮೋದಿ ಮಾಡಿ ತೋರಿಸಿದ್ದಾರೆ: ಸಿಎಂ ಒಮರ್‌ ಅಬ್ದುಲ್ಲಾ

Bengaluru Stampede: ನಾವಲ್ಲ ನೀವೇ ಮಾಡಿರೋದು.. ಸರ್ಕಾರದ ವಿರುದ್ಧ ತಿರುಗಿಬಿದ್ದ ಕೆಎಸ್ ಸಿಎ

ಮುಂದಿನ ಸುದ್ದಿ
Show comments