Webdunia - Bharat's app for daily news and videos

Install App

ಸಚಿವೆ ಮೇನಕಾ ಗಾಂಧಿ ತೃತೀಯ ಲಿಂಗಿಗಳ ಬಳಿ ಕ್ಷಮೆ ಕೇಳಿದ್ಯಾಕೆ?

Webdunia
ಮಂಗಳವಾರ, 31 ಜುಲೈ 2018 (08:13 IST)
ನವದೆಹಲಿ : ಲೋಕಸಭೆಯಲ್ಲಿ ತೃತೀಯ ಲಿಂಗಿಗಳಿಗೆ 'ಇನ್ನೊಂದು' ಎಂಬ ಪದ ಬಳಕೆ ಮಾಡಿರುವುದಕ್ಕೆ ಕೇಂದ್ರ ಮಹಿಳೆ ಹಾಗೂ ಮಕ್ಕಳ ಅಭಿವೃದ್ಧಿ ಸಚಿವೆ ಮೇನಕಾ ಗಾಂಧಿ, ಸೋಮವಾರ ಟ್ವೀಟ್ ಮಾಡಿ ಕ್ಷಮೆಯಾಚಿಸಿದ್ದಾರೆ.


ಅಕ್ರಮವಾಗಿ ಮಾನವ ಸಾಗಾಣಿಕೆ ತಡೆಗಟ್ಟುವ ವಿಷಯವನ್ನು ಶಾಲಾ ಪಠ್ಯಪುಸ್ತಕಗಳಲ್ಲಿ ಸೇರಿಸಬೇಕು ಎನ್ನುವ ಕುರಿತು ಗುರುವಾರ ಲೋಕಸಭೆಯಲ್ಲಿ ಮಾತನಾಡುವ ಸಂದರ್ಭದಲ್ಲಿ ಮೇನಕಾ ಗಾಂಧಿ, ತೃತೀಯ ಲಿಂಗಿಗಳನ್ನು 'ಇನ್ನೊಂದು' ಎಂದು ಕರೆದಿದ್ದರು. ಈ ಬಗ್ಗೆ ತೃತೀಯ ಲಿಂಗಿ ಸಮುದಾಯಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಜನ ಚಳವಳಿ ಹಾಗೂ ತೃತೀಯ ಲಿಂಗಿ ಮಹಳೆಯ ರಾಷ್ಟ್ರೀಯ ಮೈತ್ರಿಯ ಸದಸ್ಯೆಯಾಗಿರುವ ಮೀರಾ ಸಂಘಮಿತ್ರ ಅವರು, ಮೇನಕಾ ಗಾಂಧಿ ಅವರು ಈ ವಿಚಾರವಾಗಿ ಕ್ಷಮೆ ಕೋರಬೇಕು ಎಂದು ಆಗ್ರಹಿಸಿದ್ದರು.


ಇದೀಗ ಈ ಬಗ್ಗೆ ಟ್ವೀಟ್ ಮಾಡಿರುವ ಮೇನಕಾ ಗಾಂಧಿ ಅವರು,’ ಲೋಕಸಭೆಯಲ್ಲಿ ಮಾನವ ಸಾಗಾಟ ಮಸೂದೆ 2018ರ ಕುರಿತು ಚರ್ಚೆ ನಡೆಸುತ್ತಿರುವಾಗ 'ಇನ್ನೊಂದು' ಎಂಬ ಪದ ಬಳಸಿರುವುದಕ್ಕೆ ನಾನು ಪ್ರಾಮಾಣಿಕವಾಗಿ ಕ್ಷಮೆ ಕೋರುತ್ತೇನೆ. ನಾನು ಅವರ ಬಗ್ಗೆ ನಕ್ಕಿದ್ದಲ್ಲ. ನನ್ನ ಅಜ್ಞಾನದ ಬಗ್ಗೆ ಮುಜುಗರವಾಗಿ ನಕ್ಕೆ. ತೃತೀಯ ಲಿಂಗಿ ಸಮುದಾಯಕ್ಕೆ ಅಧಿಕೃತವಾಗಿ ಯಾವ ಪದ ಬಳಕೆ ಮಾಡುತ್ತಾರೆ ಎಂಬ ಬಗ್ಗೆ ನನಗೆ ಅರಿವಿಲ್ಲ ಎಂದು ತಿಳಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments